ಶಾಲೆ ಮಕ್ಕಳಿಗೆ ಅಭಿನಂದನೆ ಸಲ್ಲಿಕೆ
Team Udayavani, Jul 26, 2021, 7:33 PM IST
ನೆಲಮಂಗಲ: ಸರ್ಕಾರಿ ಶಾಲಾ ಮಕ್ಕಳಿಗೆ ನಡೆದ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತೇಗೌಡನ ಪಾಳ್ಯ ಶಾಲೆಯ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 8ನೇತರಗತಿ ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆಯಲ್ಲಿ ಎಚ್ಜಿ ಪಾಳ್ಯ ಸರ್ಕಾರಿ ಶಾಲೆಯ ಲಾವ ಣ್ಯ.ಪಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ತಾಲೂಕಿನ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತೀರ್ಣರಾದ ವಿದ್ಯಾರ್ಥಿಗಳಿಗೆ 4 ವರ್ಷಗಳ ಕಾಲ 12 ಸಾವಿರದಂತೆ ಒಟ್ಟು 48 ಸಾವಿರ ಉನ್ನತ ಶಿಕ್ಷಣ ಪಡೆ ಯಲು ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಲಾವಣ್ಯ, ಶೈಲಜಾ, ಯಶಶ್ರೀ, ದ್ರಾಕ್ಷಾಯಿಣಿ, ಭುವನ, ಅಜಿತ್ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ಶಾಲೆ ಮುಖ್ಯ ಶಿಕ್ಷಕಿ ರುಕ್ಮಿಣಿ ಟಿ.ಎಸ್, ಸಿಆರ್ಪಿ ಕೃಷ್ಣಮೂರ್ತಿ, ಶಾಲಾ ಎಸ್ಡಿಎಂಸಿ ಸಮಿತಿ ಅಧ್ಯಕ್ಷ ಸುರೇಶ್ಕುಮಾರ್, ಶಿಕ್ಷಕರಾದ ಜಯರಾಮಯ್ಯ, ರೆಹನಾ ಸುಲ್ತಾನ, ಹೇಮಲತಾ ಹಾಗೂ ಗುತ್ತೇಶ ಬಾರ್ಕಿ ಹಾಜರಿದ್ದರು.