ಉಡದ ಮಾಂಸ ಸಾಗಾಟ: ಬಂಧನ
ಫ್ರೈ ಮಾಡಿಕೊಂಡು ಟೆಂಪೋದಲ್ಲಿ ಸಾಗುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳಿಂದ ಬಂಧನ: ತನಿಖೆ
Team Udayavani, Jan 5, 2021, 3:19 PM IST
ಉಡದ ಮಾಂಸ ಸಾಗಾಟ ಮಾಡುತ್ತಿದ್ದ ಟೆಂಪೋ ಪರಿಶೀಲನೆ ಮಾಡಿದ ನೆಲಮಂಗಲ ತಾಲೂಕಿನ ವಲಯಅರಣ್ಯಾಧಿಕಾರಿಗಳು
ನೆಲಮಂಗಲ: ಉಡವನ್ನು ಕೊಂದು ಮಾಂಸವನ್ನು ಟೆಂಪೋ ಮೂಲಕ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕು ಅರಣ್ಯ ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಮಲ್ಲಪ್ಪ ಬಿ ಮುತ್ತಣ್ಣನವರ್(31) ಬಂಧಿತ ಆರೋಪಿ. ಈ ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಟೆಂಪೋದಲ್ಲಿ ಉಡದ ಮಾಂಸವನ್ನು ಫ್ರೈ ಮಾಡಿಕೊಂಡು ಸಂಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾದ ನಾಯಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀ ಪದಲ್ಲಿ ದಾಳಿ ಮಾಡಿದ ವಲಯ ಅರಣ್ಯಾಧಿಕಾರಿ ಲಶ್ಕರ್ ನೇತೃತ್ವದ ಅಧಿಕಾರಿಗಳ ತಂಡ, ಆರೋಪಿಯನ್ನು ಬಂಧಿಸಿದೆ. 600 ಗ್ರಾಂ ಫ್ರೈ ಮಾಡಿರುವ ಉಡದ ಮಾಂಸ ಹಾಗೂ ಟೆಂಪೋವನ್ನುವಶಕ್ಕೆ ಪಡೆದುಕೊಳ್ಳಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಅನ್ವಯ ದೂರು ದಾಖಲು ಮಾಡಲಾಗಿದೆ ಎಂದು ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಸುಬ್ಬರಾವ್ ತಿಳಿಸಿದರು.
ತನಿಖೆ ಆರಂಭ: ಉಡವನ್ನು ಕೊಂದು ಮಾಂಸವನ್ನು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ವ್ಯಕ್ತಿಗಳು ಈ ಪ್ರಕರಣದಲ್ಲಿರುವುದು ಕಂಡು ಬಂದಿದೆ. ಉಡವನ್ನು ಸೆರೆ ಹಿಡಿದಿದ್ದು ಎಲ್ಲಿ? ಯಾರುಆರೋಪಿಯ ಜೊತೆಯಾಗಿದ್ದರು? ಮಾಂಸವನ್ನು ಫ್ರೈ ಮಾಡಿದ್ದು ಎಲ್ಲಿ, ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬ ಸಮಗ್ರ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ವಿಶೇಷ ತಂಡದ ಮೂಲಕ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಾಹಿತಿ ನೀಡಿ: ವನ್ಯಜೀವಿಗಳನ್ನು ಬೇಟೆ ಆಡುವುದು, ಸಾಗಾಟ ಮಾಡುವುದು, ಉಡಗಳಂತಹ ಅಳಿವಿನಂಚಿನ ಪ್ರಾಣಿಗಳನ್ನು ಸೆರೆಹಿ ಡಿಯುವುದು ಕಂಡುಬಂದರೆ ತಕ್ಷಣ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಟ್ಟು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಲಶ್ಕರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ