ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ


Team Udayavani, May 17, 2022, 2:50 PM IST

ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ

ದೇವನಹಳ್ಳಿ: ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸಿ, ಸುಜ್ಞಾನವನ್ನು ನೀಡಿದ ಬುದ್ಧ ವಿಶ್ವದ ಜ್ಞಾನಜ್ಯೋತಿ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಬುದ್ಧ ಧಮ್ಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 2566ನೇ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಡೀ ಜಗತ್ತು ಬುದ್ಧನ ಮಾರ್ಗವನ್ನು ಅನುಸರಿಸುತ್ತಿದ್ದು,ಇದರಿಂದ ಶಾಂತಿ, ನೆಮ್ಮದಿ ಮತ್ತು ಕರುಣೆ ನೋಡಲುಸಾಧ್ಯವಾಗಿದೆ. ದೇವನಹಳ್ಳಿಯಲ್ಲಿ ಬುದ್ಧ ವಿಹಾರಸ್ಥಾಪನೆಗೆ 2 ಎಕರೆ ಸೂಕ್ತ ಜಾಗ ನೀಡಲು ತಹಶೀಲ್ದಾರ್‌ಗೆಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಅಂಬೇಡ್ಕರ್‌ಭವನದಲ್ಲಿರುವ ಎಲ್ಲ ಸಮಸ್ಯೆ ಬಗೆಹರಿಸಿ ಮೂಲಭೂತ ಸೌಕರ್ಯ ನೀಡಲು ಗಮನ ಹರಿಸಲಾಗುವುದು. ಅದಕ್ಕೆಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ ಎಂದರು.

ಸಾಮಾಜಿಕ ಸಬಲೀಕರಣ: ಬೆಂಗಳೂರು ಪ್ರಧಾನ ಪೊಲೀಸ್‌ ಕಚೇರಿ ವರಿಷ್ಠಾಧಿಕಾರಿ ಸಿದ್ದರಾಜುಮಾತನಾಡಿ, 2500 ವರ್ಷದ ಹಿಂದೆಯೇ ಸಾಮಾಜಿಕಸಬಲೀಕರಣ, ಪ್ರಗತಿಪರ ಚಿಂತನೆ ಹುಟ್ಟು ಹಾಕಿದ್ದು ಭಗವಾನ್‌ ಬುದ್ಧರು. ಅದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅನುಷ್ಠಾನ ಮಾಡಿದ್ದು ಡಾ. ಅಂಬೇಡ್ಕರ್‌. ಹೊಸ ಶಿಕ್ಷಣ ನೀತಿಯ ಜಾರಿಗೆ ಕರ್ನಾಟಕ ರಾಜ್ಯವು ಪ್ರಯೋಗ ಕೇಂದ್ರವಾಗಿಸಿಕೊಂಡಿದ್ದಾರೆ ಎಂದರು.

ಬುದ್ಧ ವಿಷ್ಣುವಿನ 9ನೇ ಅವತಾರ: ಶೋಷಿತರ, ದಮನೀತರ ಇತಿಹಾಸ ಮರೆಮಾಚಿ ವೈದಿಕ ಕತೆಗಳನ್ನು ಮಕ್ಕಳ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ಬಾಬಾ ಸಾಹೇಬ್‌ಹೇಳಿದಂತೆ ಇತಿಹಾಸ ಮರೆತವರು ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ ಎಲ್ಲರೂ ಜಾಗೃತಿರಾಗಬೇಕು.ಭಗವಾನ್‌ ಬುದ್ಧ ವಿಷ್ಣುವಿನ 9ನೇ ಅವತಾರ. ಬೌದ್ಧ ತತ್ವದಿಂದ ಪ್ರೇರಿತಗವಾದ ಲಲಿತಾಸಾರವು ಹಿಂದೂ ಗ್ರಂಥ, ಪಿರಮಿಡ್‌ ದೇಗುಲದಿಂದ ಶಾಂತಿ ಎಂದೆಲ್ಲಾಸುಳ್ಳು ಹೇಳಿಕೊಂಡು ಬುದ್ಧ ತತ್ವಕ್ಕೆ ಪರ್ಯಾಯಮಾರ್ಗ ಹುಟ್ಟು ಹಾಕುವ ಷ್ಯಡ್ಯಂತ್ರ ನಡೆಯುತ್ತಿದೆ ಎಚ್ಚರ ಎಂದು ಹೇಳಿದರು.

ಅಶೋಕ ಬೌದ್ಧ ವಿಹಾರದ ಚೌಡಪ್ಪನಹಳ್ಳಿ ಲೋಕೇಶ್‌ಮಾತನಾಡಿ, ಸಂವಿಧಾನ ಕತೃ ಅಂಬೇಡ್ಕರ್‌ 1956ರಲ್ಲಿ ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು. 22 ಅಂಶಗಳ ಪ್ರತಿಜ್ಞಾ ವಿಧಿ ನೀಡಿದ್ದಾರೆ. ಅದರ ಅನ್ವಯ ಭಗವಾನ್‌ ಬುದ್ಧ ಪ್ರಜ್ವಲ ಬೆಳಕಿನ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದರು.

ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿ: ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಪಕ ಶಫಿ ಅಹಮ್ಮದ್‌ ಮಾತನಾಡಿ, ಜಿಲ್ಲೆಯನ್ನು ನಂದಿ ಮಂಡಲವೆಂದು ಇತಿಹಾಸದಲ್ಲಿ ಗುರುತಿಸಲಾಗುತಿತ್ತು. ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ 2500 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಚೈತ್ಯ ಹಾಗೂ ವಿಹಾರ ಮಂದಿರಗಳು ಇದ್ದ ಕುರುಹುಗಳಿವೆ. ಪಂಚಸ್ತಂಭಗಳ ಸ್ತೂಪಗಳು ಅಲ್ಲಿದ್ದವೂ. ಬೌದ್ಧ ಧರ್ಮದ ಕುರಿತು ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕು. ಸಮಗ್ರ ಅಧ್ಯಯನಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಉಮಾಪತಿ, ಮೌಲ್ವಿ ಅಬ್ದುಲ್‌ ಜಬ್ಬರ್‌, ವಕೀಲ ಎಸ್‌. ಸಿದ್ಧಾರ್ಥ, ವೈದ್ಯ ಡಾ.ಜ್ಞಾನ್‌ ಕುಮಾರ್‌, ಬೌದ್ಧ ಬಿಕ್ಕು ಜ್ಞಾನಲೋಕ ಬತಾಂಜೆ ಮುಖಂಡ ಎನ್‌. ನಾರಾಯಣಸ್ವಾಮಿ, ಕುಂದಾಣ ಕೆ.ವಿ.ಸ್ವಾಮಿ, ಸಿ.ಮುನಿಯಪ್ಪ, ಅಕ್ಕಯಮ್ಮ, ಶ್ರೀನಿವಾಸ್‌ ದನಿ, ಜಂಗಮಕೋಟೆ ಕೃಷ್ಣಪ್ಪ, ವಕೀಲ ಮಧು, ಜೊನ್ನಹಳ್ಳಿ ಜಯರಾಮ್, ದೊಡ್ಡ ಚಿಕ್ಕಣ್ಣ, ಬ್ಯಾಂಕ್‌ ನಾರಾಯಣ್ಣಪ್ಪ, ನಾಗೇನಹಳ್ಳಿ ಕೃಷ್ಣಪ್ಪ, ಮಾಳಿಗೇನಹಳ್ಳಿ ಪ್ರಕಾಶ್‌, ಕುಂದಾಣ ಮುನಿಶಾಮಪ್ಪ,ಆಲೂರು ದುದ್ದನಹಳ್ಳಿ ಈರಣ್ಣ, ಬಾಲಪ್ಪ, ಕೊಯಿರಾ ಮುನಿನರಸಪ್ಪ, ಕಾರಹಳ್ಳಿ ಮುನಿರಾಜು, ಹೊಸಕೋಟೆ ಆಂಜಿನಪ್ಪ, ರವಿಕಲಾ, ಖುದೂಸ್‌, ಎಚ್‌.ಕೆ. ವೆಂಕಟೇಶಪ್ಪ ಹಾಗೂ ಇತರರು ಇದ್ದರು.

ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಳ್ಳಿ : ಭಾರತೀಯರು ಈ ನೆಲದ ಮೂಲ ಧರ್ಮವಾದಬೌದ್ಧ ಧರ್ಮವನ್ನು ಅನುಸರಿಸುವುದು. ಬುದ್ಧನಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂಅಳವಡಿಸಿಕೊಳ್ಳಬೇಕು. ಭಾರತದ ಎಲ್ಲಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಆದ್ದರಿಂದ,ಬುದ್ಧ ಜ್ಞಾನದ ಬೆಳಕಿನಲ್ಲಿ ಮುಂದೆ ಸಾಗಬೇಕು. ಅತಿಯಾದ ಮೋಹವನ್ನು ಬಿಡಬೇಕು. ಮನುಷ್ಯರು ಸರಳ ರೀತಿಯಲ್ಲಿ ಪ್ರಕೃತಿಯನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಹೇಳಿದರು.

ಟಾಪ್ ನ್ಯೂಸ್

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.