ರಮೇಶ್ ಈಗ ಏಕೆ ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ: ಮಾಜಿ ಶಾಸಕ ನಾಗರಾಜು
Team Udayavani, May 26, 2021, 1:21 PM IST
ನೆಲಮಂಗಲ: “ಮಾಜಿ ಸಚಿವ ರಮೇಶ್ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಅಚ್ಚರಿಮೂಡಿಸುವ ಅನೇಕ ಹೇಳಿಕೆ ನೀಡಿದ್ದ ಆಪ್ತ ಮಾಜಿ ಶಾಸಕ ಎಂ.ವಿ.ನಾಗರಾಜು,ಸಿಡಿ ಬಗ್ಗೆ ಗೊತ್ತಿಲ್ಲ ಅಂದ್ರು,ಈಗ ಏಕೆ ಹೇಳಿದ್ದಾರೆ ಗೊತ್ತಿಲ್ಲ.ವಿಚಾರಿಸುವೆ’ ಎಂದಿದ್ದಾರೆ.
ನಗರಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಎಂ.ವಿ.ನಾಗರಾಜು ಸುದ್ದಿಗಾರರ ಪ್ರಶ್ನೆಗೆಪ್ರತಿಕ್ರಿಯಿಸಿದರು. 4 ತಿಂಗಳ ಹಿಂದೆಯೇ ಸಿಡಿ ಬಗ್ಗೆ ಮಾಹಿತಿ ಬಂದಾಗ ಬಾಲಚಂದ್ರ ಜಾರಕಿಹೊಳಿ ಅವರು ಕೇಳಿಕೊಂಡು ಬರಲು ಹೇಳಿದ್ದರು. ನಾನು ಕೇಳಿದಾಗ, ಆ ರೀತಿ ಕೆಲಸ ಮಾಡುವುದಿಲ್ಲ, ನೀವು ಅಂಜಬೇಡಿ. ನಾನು ಆ ರೀತಿ ಕೆಟ್ಟ ಕೆಲಸ ಮಾಡಿಲ್ಲ ಎಂದಿದ್ದರು. ಅವರ ತಮ್ಮನಿಗೂ ಹೇಳಲಿಲ್ಲ, ನನಗೂ ಹೇಳಲಿಲ್ಲ.
ಅದನ್ನು ಮಾಧ್ಯಮದವರ ಮುಂದೆ ಹೇಳಿದ್ದೆ. ಆದರೆ, ಈಗ ಒಪ್ಪಿಕೊಂಡಿರುವುದು ಗೊತ್ತಿಲ್ಲ. ಅವರು ವೈಯಕ್ತಿಕವಾಗಿ ಏನು ಮಾಡಿಕೊಂಡಿದ್ದಾರೆಯೋ ಗೊತ್ತಿಲ್ಲ, ರಾಜ ಕೀಯವಾಗಿ ಹತ್ತಿರವಿದ್ದನು ಈ ರೀತಿಯವಿಚಾರದಲ್ಲಿ ನಾನು ಎಂಟ್ರಿ ಆಗುತ್ತಿರಲಿಲ್ಲ.ರಾಜಕೀಯವಾಗಿ ಮುಂದುವರಿಯಬೇಕಾಗಿದೆ ವಾಸ್ತವಾಂಶ ಒಪ್ಪಿಕೊಂಡಿರಬೇಕು, ನಾನು ಬೆಂಗಳೂರಿಗೆ ಬಂದಾಗ ಭೇಟಿ ಮಾಡುತ್ತಿದ್ದೆ.ರಾಜಕೀಯವಾಗಿ ಗೊತ್ತು ಅಷ್ಟೇ ಪಾರ್ಟಿಗೆ ಒಪ್ಪಿಸಿ ಸೇರಿಸಿದ್ದು ನಾನೇ ಎಂದರು.
ಸೇಫ್ ಆಗಲು ಹೇಳಿರಬೇಕು: ರಮೇಶ್ಜಾರಕಿಹೊಳಿ ಮೇಲೆ ರಾಜಕೀಯ ಷಡ್ಯಂತ್ರ ನಡೆದಿದೆ. ಅವರು ರಾಜಕೀಯವಾಗಿ ಬೆಳೆಯಬಾರದು ಎಂದು ಈ ರೀತಿಮಾಡಿದ್ದಾರೆ. ಇದರಿಂದ ಸೇಫ್ ಆಗಲು ಒಪ್ಪಿಕೊಂಡಿರಬೇಕು ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ