ಬಿಜೆಪಿ ಮೂರು ಮಂಡಲದ ಅಧ್ಯಕ್ಷರ ನೇಮಕ
Team Udayavani, Jun 16, 2021, 6:41 PM IST
ಚಾಮರಾಜನಗರ: ಚಾ.ನಗರ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರನ್ನಾಗಿ ಬೇಡರಪುರಬಸವಣ್ಣ, ಹನೂರು ಮಂಡಲದ ಅಧ್ಯಕ್ಷರನ್ನಾಗಿಎಂ. ಸಿದ್ದಪ್ಪ ಹಾಗೂ ನೂತನವಾಗಿ ರಚನೆಯಾಗಿರುವ ಹನೂರು ವಿಧಾನಸಭೆ ಕ್ಷೇತ್ರದಮಹದೇಶ್ವರ ಬೆಟ್ಟ ಮಂಡಲದ ಅಧ್ಯಕ್ಷರನ್ನಾಗಿವೀರಭದ್ರ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷಆರ್. ಸುದೇಶ ಪ್ರತಿಗಳನ್ನು ನೀಡಿದರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರುನೂತನ ಅಧ್ಯಕ್ಷರಿಗೆ ಆದೇಶ ಪ್ರತಿ ನೀಡಲಾಯಿತು.ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿದ್ದ ಜಿ.ಪ್ರಶಾಂತ್ ಅವರನ್ನು ರಾಜ್ಯ ಸಮಿತಿಯ ಸೂಚನೆಮೇರೆಗೆ ವಜಾಗೊಳಿಸಿ, ತೆರವಾದ ಸ್ಥಾನಕ್ಕೆಬೇಡರಪುರ ಬಸವಣ್ಣ ಅವರನ್ನು ನೇಮಿಸಲಾಗಿದೆ.ಹನೂರು ಮಂಡಲದ ಅಧ್ಯಕ್ಷರಾಗಿದ್ದ ನಾಗೇಂದ್ರಬಾಬು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆಎಂ.ಸಿದ್ದಪ್ಪ ಅವರನ್ನು, ಹನೂರು ತಾಲೂಕುಭೌಗೋಳಿಕವಾಗಿ ಹೆಚ್ಚು ವಿಸ್ತಾರಗೊಂಡಿರುವ ಹಿನ್ನೆಲೆಯಲ್ಲಿ ಸಂಘಟನೆಗಾಗಿ ಮತ್ತೂಂದುಮಹದೇಶ್ವರ ಬೆಟ್ಟ ಮಂಡಲ ರಚನೆ ಮಾಡಿ, ಈಮಂಡಲದ ಅಧ್ಯಕ್ಷರನ್ನಾಗಿ ವೀರಭದ್ರ ಅವರನ್ನುನೇಮಕ ಮಾಡಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆಹೆಚ್ಚು ಒತ್ತು ನೀಡಲಾಗಿದೆ ಎಂದರು.
ಮಾಜಿ ಶಾಸಕರಾದ ಪರಿಮಳಾ ನಾಗಪ್ಪ,ಜಿ.ಎನ್. ನಂಜುಂಡಸ್ವಾಮಿ, ಹಾಸನ ಜಿಲ್ಲಾ ಬಿಜೆಪಿಉಸ್ತುವಾರಿ ಜಿ.ನಿಜಗುಣರಾಜು, ಜಿಲ್ಲಾಉಪಾಧ್ಯಕ್ಷರಾದ ದತ್ತೇಶಕುಮಾರ್, ಪಿ.ವೃಷಭೇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದಮಂಗಲಶಿವಕುಮಾರ್, ನಾರಾಯಣಪ್ರಸಾದ್,ಜಿಲ್ಲಾ ಕಾರ್ಯದರ್ಶಿ ಮಹೇಶ್ ಇತರರಿದ್ದರು.