ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬನ್ನಿ
Team Udayavani, Jan 5, 2021, 3:10 PM IST
ದೇವನಹಳ್ಳಿ: ಸಭೆಗೆ ಬಂದು ಹೋದರೆ ಸಾಲದು, ಸಮರ್ಪಕ ಮಾಹಿತಿಯೊಂದಿಗೆಹಾಜರಾಗಬೇಕು ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೊರೊನಾ,ಗ್ರಾಪಂ ಚುನಾವಣೆ ನೀತಿ ಸಂಹಿತೆ, ಇತರೆಕಾರಣಗಳಿಂದ ಸರ್ವ ಸದಸ್ಯರ ಸಾಮಾನ್ಯಸಭೆ ಒಂದು ತಿಂಗಳು ಮುಂದೂಡಲಾಗಿತ್ತು.ಸಭೆಯಲ್ಲಿ ಏನೋ ಒಂದು ಹರಕೆ ಉತ್ತರನೀಡಬಹುದೆಂದು ಅಧಿಕಾರಿಗಳುಅಂದುಕೊಂಡಿದ್ದಾರೆ. ಆದರೆ, ಎಲ್ಲಾಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು.
ಕಠಿಣ ಕ್ರಮದ ಎಚ್ಚರಿಕೆ: ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರರು, ನರ್ಸ್ ಗಳಿಗೆ ಆರೇಳು ತಿಂಗಳಾದರೂ ಸಂಬಳನೀಡುತ್ತಿಲ್ಲ ಎಂದು ದೂರುಗಳು ಬರುತ್ತಿವೆ.ಆದರೆ, ಜಿಲ್ಲಾ ಆರೋಗ್ಯಾಧಿಕಾರಿಗಳುಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇಸಂಬಳ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಗಳಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದೂರಿದರು.
ವರ್ಗ ಮಾಡಿಸಿಕೊಂಡು ಹೋಗಿ: ಆರೋಗ್ಯ ಅಧಿಕಾರಿಗಳೇ ನಿಮಗೆ ಒಂದುತಿಂಗಳ ಸಂಬಳ ಅಗದಿದ್ದರೆ ಏನುಮಾಡುತ್ತೀರಿ? ಕೋವಿಡ್ ಸಂದರ್ಭದಲ್ಲಿಡಿ ದರ್ಜೆ ನೌಕರರು, ನರ್ಸ್ಗಳಿಗೆ ಸಂಬಳಇಲ್ಲದಿದ್ದರೆ ಹೇಗೆ ಜೀವನ ಸಾಗಿಸುತ್ತಾರೆ.ಮಾನವೀಯ ರೀತಿ ಕೆಲಸ ಮಾಡಿ,ಇಲ್ಲದಿದ್ದರೆ ಬೇರೆ ಜಿಲ್ಲೆಗೆ ವರ್ಗಮಾಡಿಸಿಕೊಂಡು ಹೋಗಿ ಎಂದು ಹೇಳಿದರು.
ಡೀಸಿ, ಸಿಇಒಗೆ ಮನೆ ನಿರ್ಮಾಣ: ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಜನರಿಗೆಅನುಕೂಲವಾಗುವ ರೀತಿ ಕೆಲಸಮಾಡಬೇಕು. ಕಾಟಾಚಾರಕ್ಕೆ ಬಂದುಹೋದರೆ ಆಗದು. ಕೋವಿಡ್ 2ನೇ ಅಲೆಬರುತ್ತಿದೆ. ಅದಕ್ಕೆ ಪೂರಕವಾಗಿಕಾರ್ಯಕ್ರಮ ರೂಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಕೋವಿಡ್ ಲಸಿಕೆ ಬಂದರೆ ದಾಸ್ತಾನು ಮಾಡಲು, ಈಗಾಗಲೇ ರೂಪುರೇಷೆಕೈಗೊಂಡು, ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಮನೆ ನಿರ್ಮಿಸಲು ದೊಡ್ಡಬಳ್ಳಾಪುರದ ಬಳಿ ಜಾಗ ಗುರುತಿಸಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನೀರಿಗೆ ತೊಂದರೆ ಆಗದಿರಲಿ: ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಬೇಸಿಗೆ ಸಮೀಪಿಸುತ್ತಿರುವ ಕಾರಣ 4 ತಾಲೂಕುಗಳಲ್ಲಿ ಕುಡಿಯುವನೀರಿಗೆ ಎಲ್ಲೆಲ್ಲಿ ಸಮಸ್ಯೆ ಇರುವುದೆಂದು ನೋಡಿಕೊಂಡು, ನಿರ್ವಹಣೆ ಮಾಡಲುಗ್ರಾಪಂಗೆ ಹೊಣೆ ನೀಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.
ಸರ್ಕಾರ ವಿವಿಧ ಇಲಾಖೆಗಳ ಕಾಮಗಾರಿಗೆ ಈಗಾಗಲೇ ಹಣಬಿಡುಗಡೆಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಬಳಸಿಕೊಂಡುಮಾ.5 ರೊಳಗೆ ಖಜಾನೆಗೆ ಹಣಬಳಕೆಪತ್ರವನ್ನು ಸಲ್ಲಿಸಬೇಕು. ಹಣ ಒಂದು ವೇಳೆದುರುಪಯೋಗವಾದಲ್ಲಿ ಸಂಬಂಧಿಸಿದಇಲಾಖೆಯ ಅಧಿಕಾರಿಗಳ ಸಂಬಳದಿಂದ ನಷ್ಟ ಪಡೆಯಲಾಗುವುದು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ ಎಂದರು.
ಜಿಪಂ ಉಪಕಾರ್ಯದರ್ಶಿ ಕರಿಯಪ್ಪ,ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾಲೆಕ್ಕಾಧಿಕಾರಿ ರಮೇಶ್ ರೆಡ್ಡಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು