ಪೌರಕಾರ್ಮಿಕರ ಸೇವೆ ಅನನ್ಯ: ಮಂಜುನಾಥ್
Team Udayavani, Jun 11, 2021, 5:18 PM IST
ದೇವನಹಳ್ಳಿ: ಪೌರಕಾರ್ಮಿಕರು ತಮ್ಮ ಜೀವದಹಂಗು ತೊರೆದು ಪಟ್ಟಣವನ್ನು ಸ್ವತ್ಛ ಮಾಡುವಕೆಲಸದಲ್ಲಿ ತೊಡಗಿರುವುದು ಉತ್ತಮಕಾರ್ಯವಾಗಿದೆ ಎಂದು ತಾಲೂಕು ಬಿಜೆಪಿಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್ತಿಳಿಸಿದರು.
ಪಟ್ಟಣದ ಪುರಸಭ ಕಚೇರಿ ಆವರಣದಲ್ಲಿಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ ನಾರಾಯಣಸ್ವಾಮಿಸಹಕಾರದೊಂದಿಗೆ ಪೌರ ಕಾರ್ಮಿಕರಿಗೆ ವಿವಿಧಪರಿಕರ ವಿತರಿಸಿ ಮಾತನಾಡಿ, ಪೌರಕಾರ್ಮಿಕರುಕೊರೊನಾ ವಾರಿಯರ್ಸ್ನಂತೆ ಕೆಲಸಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಿದರೆ,ತಮ್ಮ ಕಾರ್ಯವನ್ನು ಮತ್ತಷ್ಟು ಚೆನ್ನಾಗಿಮಾಡುತ್ತಾರೆ. ಪೌರ ಕಾರ್ಮಿಕರು ಪಟ್ಟಣದಸ್ವತ್ಛತಾ ಕಾರ್ಯದಲ್ಲಿ ಸುರಕ್ಷತಾ ಕ್ರಮವಹಿಸಬೇಕು. ಸ್ಯಾನಿಟೈಸರ್, ಕೈಗ್ಲೋಸ್ ಮತ್ತಿತರಪರಿಕರಗಳನ್ನು ಬಳಸಬೇಕು ಎಂದು ಹೇಳಿದರು.
ಆರೋಗ್ಯ ಲೆಕ್ಕಿಸದೆ ಸೇವೆ: ಜಿಲ್ಲಾ ಬಿಜೆಪಿ ಎಸ್ಸಿಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ಬಾಬು ಮಾತನಾಡಿ, ಪಟ್ಟಣವನ್ನುಸ್ವತ್ಛಗೊಳಿಸುತ್ತಾ ಕಾಯಕವೇ ಕೈಲಾಸ ಎಂದುನಂಬಿ ಬದುಕುತ್ತಿರುವ ಪೌರಕಾರ್ಮಿಕ ವರ್ಗತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮಾಡುತ್ತಿರುವಸೇವೆ ಶ್ಲಾಘನೀಯ. ಪಟ್ಟಣವನ್ನು ಸ್ವತ್ಛವಾಗಿಇಡುವ ಪೌರಕಾರ್ಮಿಕರಿಗೆ ಸಹಾಯಮಾಡುವುದು ದೇವರಿಗೆ ಮಾಡುವ ಕೆಲಸವಿದ್ದಂತೆಎಂದು ಹೇಳಿದರು.
ಪುರಸಭಾ ಸದಸ್ಯರಾದ ಲಕ್ಷ್ಮೀ ಅಂಬರೀಶ್,ಚೈತ್ರ ವಿಜಯಕುಮಾರ್, ಪುರಸಭಾಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸೈನಿಕಪ್ರಕೋಷ್ಟದ ಸಂಚಾಲಕ ವೆಂಕಟೇಶ್, ಮುಖಂಡಅಮರ್ ನಾರಾಯಣ್, ಆರೋಗ್ಯ ನಿರೀಕ್ಷಕರಾದಶ್ರೀದೇವಿ, ತೃಪ್ತಿ ಹಾಜರಿದ್ದರು.