ಕೋವಿಡ್ ಸಂಕಷ್ಟ: ಹಾಲಿನ ದರ ಕುಸಿತ, ರೈತ ಕಂಗಾಲು

ಹೈನೋದ್ಯಮಕ್ಕೆ ಭಾರೀ ಹೊಡೆತ

Team Udayavani, Jul 20, 2020, 9:52 AM IST

ಕೋವಿಡ್ ಸಂಕಷ್ಟ: ಹಾಲಿನ ದರ ಕುಸಿತ, ರೈತ ಕಂಗಾಲು

ನೆಲಮಂಗಲ: ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಿದ್ದು, ಕೋವಿಡ್ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಪ್ರಮಾಣ ಕಡಿಮೆ ಯಾಗಿದೆ. ಹೀಗಾಗಿ ಬಮೂಲ್‌ ನಷ್ಟ ಪರಿಹಾರಕ್ಕಾಗಿ ಲೀಟರ್‌ ಹಾಲಿಗೆ 4 ರೂ. ಕಡಿತಗೊಳಿಸಿದೆ. ಆದರೆ ಆದರೆ ಪಶು ಆಹಾರದ ದರ ಮಾತ್ರ ಯಥಾಸ್ಥಿತಿಯಲ್ಲಿ ಮುಂದು ವರಿದಿದ್ದು, ಹೈನೋದ್ಯಮಿಗಳು ಕಂಗಾಲಾಗಿದ್ದಾರೆ.

ಪ್ರತಿನಿತ್ಯ ಹಳ್ಳಿಗಳ ಡೇರಿಗಳಿಗೆ ಹಾಲು ಸರಬರಾಜು ಮಾಡುವ ಹೈನೋದ್ಯಮಿಗಳಿಗೆ ಒಂದು ಲೀಟರ್‌ ಹಾಲಿಗೆ ಈ ಹಿಂದೆ 28 ರೂ. ಜತೆ ಸಹಾಯ ಧನ 5 ರೂ. ನೀಡಲಾಗುತ್ತಿತ್ತು. ಒಂದು ತಿಂಗಳ ಹಿಂದೆ ಲೀಟರ್‌ಗೆ 1.5 ರೂ. ಕಡಿಮೆ ಮಾಡಿದ ಒಕ್ಕೂಟ ಮತ್ತೆ ಜು.16ರಿಂದ ಲೀಟರ್‌ಗೆ 2.5 ರೂ. ಕಡಿಮೆ ಮಾಡಿ, ಲೀಟರ್‌ಗೆ 24ರೂ. ಜತೆ 5 ರೂ. ಸಹಾಯ ಧನ ನೀಡಲು ಬಮೂಲ್‌ ನಿರ್ಧರಿಸಿ ಆದೇಶ ನೀಡಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತಿದ್ದ ರೈತರಿಗೆ ಪಶುಸಂಗೋಪನೆ ವರವಾಗಿತ್ತು. ಆದರೆ ಈಗ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ದುಬಾರಿಯಾದ ಕಾರಣ ರೈತರು ಮತ್ತು ಹೈನುಗಾರಿಕೆ ಜೀವನೋಪಾಯ ಮಾಡಿಕೊಂಡಿರುವವರಿಗೆ ಸಂಕಷ್ಟ ಎದುರಾಗಿದೆ. ಹೆಚ್ಚಾಯ್ತು ಪಶು ಆಹಾರ ದರ: ಹಾಲಿನ ದರ ಏರಿಕೆ ವೇಳೆ ಪಶು ಆಹಾರದ ದರ ಹೆಚ್ಚಳವಾಗುತ್ತದೆ. 2-3 ತಿಂಗಳ ಹಿಂದೆಯಷ್ಟೇ ಒಕ್ಕೂಟ ನೀಡುವ 50 ಕೆ.ಜಿ.ಯ ಪಶು ಆಹಾರ (ಫೀಡ್‌)ದರ 25 ರೂ. ಹೆಚ್ಚಳ ಮಾಡಿತ್ತು. ಆದರೆ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ಇಳಿಕೆ ಮಾಡದಿರುವುದು ಹೈನೋದ್ಯಮಿ ಗಳು ಮತ್ತು ರೈತರಲ್ಲಿನ ಬೇಸರದ ಸಂಗತಿ ಎಂದು ಹಾಲು ಉತ್ಪಾದಕರು ಬೇಸರಿಸಿದ್ದಾರೆ.

ಆಹಾರ ನೀಡುವ ಪ್ರಮಾಣ: ಪಶು ಸಂಗೋಪನೆಯಲ್ಲಿ ತೊಡಗಿರುವ ಪ್ರಗತಿಪರ ರೈತ ಹಾಗೂ ಪಶು ವೈದ್ಯರ ಪ್ರಕಾರ 10 ಲೀ. ಹಾಲು ನೀಡುವ ಹಸುವಿಗೆ ದಿನಕ್ಕೆ 6 ರಿಂದ 7 ಕೆ.ಜಿ.ಯಷ್ಟು ಹಸಿಹುಲ್ಲು ಬಿಟ್ಟು ಎಲ್ಲ ರೀತಿಯ ಪಶು ಆಹಾರ ನೀಡಿದರೆ ತಿಂಗಳಿಗೆ ಒಂದು ಹಸುವಿಗೆ ಅಂದಾಜು 180ರಿಂದ 210 ಕೆಜಿ ಆಹಾರ ನೀಡಬೇಕಾಗುತ್ತದೆ. ಒಂದು ಹಸುವಿಗೆ ಕೇವಲ ಪಶು ಆಹಾರಕ್ಕಾಗಿಯೇ ಅಂದಾಜು 5ರಿಂದ 6 ಸಾವಿರದಷ್ಟು ಖರ್ಚು ಮಾಡಬೇಕಾಗಿದೆ.

ಮನವಿ: ಕೋವಿಡ್ ಸಂಕಷ್ಟದಲ್ಲಿ ಹಾಲಿನ ದರ ಕಡಿಮೆ ಮಾಡಿದಂತೆ ಪಶು ಆಹಾರ ಕಡಿಮೆ ಮಾಡುವುದು ಅಥವಾ ರಿಯಾಯಿತಿ ದರದಲ್ಲಿ ವಿತರಣೆ ಮಾಡಿದರೆ ಪಶುಸಂಗೋಪನೆ ಉಳಿಯಲು ಸಾಧ್ಯ. ಸರಕಾರ ಅದರ ಬಗ್ಗೆ ಗಮನ ವಹಿಸಿ, ರೈತರ ಪರ ನಿಲ್ಲ ಬೇಕು ಎಂದು ರೈತ ಸಂಘಟನೆಗಳು, ಹಾಲು ಉತ್ಪಾದಕರು ಮನವಿ ಮಾಡಿದ್ದಾರೆ.

16 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗಬೇಕಾಗಿದ್ದ ಸಮಯದಲ್ಲಿ 19 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದೆ. 12 ಲಕ್ಷ ಲೀಟರ್‌ ಬೇಡಿಕೆಯಿದ್ದ ಹಾಲಿನ ಮಾರಾಟ ಕೋವಿಡ್ ಆರಂಭವಾದ ನಂತರ 8 ಲಕ್ಷ ಲೀಟರ್‌ಗೆ ಕುಸಿತವಾಗಿದೆ. ಹಾಲಿನ ದರ ಕಡಿಮೆ ಮಾಡುವ ಅನಿವಾರ್ಯವಿದೆ. ಪಶು ಆಹಾರದ ಬಗ್ಗೆ ಚರ್ಚೆ ಮಾಡಲಾಗುತ್ತದೆ ನರಸಿಂಹಮೂರ್ತಿ, ಬಮೂಲ್‌ ಅಧ್ಯಕ

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.