ಕುಣಿದ “ಕರಗ’, ಕಣ್ತುಂಬಿದ “ವೈಭೋಗ’


Team Udayavani, May 20, 2019, 3:00 AM IST

kunida

ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಭಕ್ತರು ಮಲ್ಲಿಗೆ ಹೂವನ್ನು ಕರಗದ ಮೇಲೆ ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ದೀಪಾಲಂಕಾರ ಕಣ್ಮನ ಸೆಳೆದರೆ, ರಂಗೋಲಿ ಬಿಡಿಸಿ ಮಹಿಳೆಯರು ಕರಗವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ದೇವನಹಳ್ಳಿ: ಶ್ರೀ ಮೌಕ್ತಿಕಾಂಬ ಅಮ್ಮನ ಕರಗ ಮಹೋತ್ಸವ ಅಂಗವಾಗಿ ಪಟ್ಟಣದ ಪರ್ವತಪುರ ರಸ್ತೆಯ ಮರಳುಬಾಗಿಲಿನಲ್ಲಿ 1.5 ಟನ್‌ ಹೂ ನಲ್ಲಿ ಕರಗಕ್ಕೆ ವಿಶೇಷ ನವರಂಗಿ ಅಲಂಕಾರ ಮಾಡಲಾಗಿತ್ತು.

1.5 ಟನ್‌ನ ಎಲ್ಲಾ ತರಹದ ಹೂ ಗಳನ್ನು ಅಲಂಕಾರದ ರೀತಿಯಲ್ಲಿ ರಸ್ತೆಯಲ್ಲಿ ಮಾಡಲಾಗಿತ್ತು. ಮಲ್ಲಿಗೆ 800ಕೆ.ಜಿ., ಚೆಂಡು ಹೂ 500ಕೆ.ಜಿ., ಕನಕಾಂಬರ 200ಕೆಜಿ ಹಾಗೂ ಬಟನ್ಸ್‌ ರೋಜ್‌ 250ಕೆ.ಜಿ., ಕೆಂದೇರಿ ಹೂ 200ಕೆ.ಜಿ. ಹಾಗೂ ಇತರೆ ಹೂಗಳನ್ನು ಹಾಕುವುದರ ಮೂಲಕ ವಿಜೃಂಭಣೆಯಿಂದ ಮಾಡಲಾಗಿತ್ತು.

ಕರಗಕ್ಕೆ ಸ್ವಾಗತ: ರಸ್ತೆಯಲ್ಲಿ ಕರಗ ನಡೆದಾಡಲು ಈ ಅಲಂಕಾರ ಮಾಡಲಾಗಿತ್ತು. ಒಂದೂವರೆ ಲಕ್ಷ ರೂ. ಗೂ ಅಧಿಕ ಮೌಲ್ಯದ ಬಿಡಿ ಹೂವುಗಳನ್ನು ರಸ್ತೆಯಲ್ಲಿ ಹಾಕಿ ರಂಗೋಲಿ ಚಿತ್ರದ ಆಕೃತಿಯ ಮೂಲಕ ಹೂ.ಗಳನ್ನು ಹಾಸಿ ಕರಗವನ್ನು ಸ್ವಾಗತಿಸಿದರು. ಇದಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ವಿ.ನಾರಾಯಣ್‌ ಮತ್ತು ಸ್ನೇಹಿತರು, ವೆಂಕಟರಾಯಪ್ಪ ಕುಟುಂಬ ನೇತೃತ್ವ ವಹಿಸಿದ್ದರು.

ಮಳೆ-ಬೆಳೆಯಾಗಲಿ: ಕರವೇ ಗೌರವಾಧ್ಯಕ್ಷ ವಿ.ನಾರಾಯಣ್‌ ಮಾತನಾಡಿ, ಸತತ 6ನೇ ವರ್ಷಗಳಿಂದ ಕರಗ ಪ್ರಯುಕ್ತ ಹೂವಿನ ಅಲಂಕಾರ ಮಾಡಿ ಕರಗ ನಡೆದಾಡುವಂತೆ ಮಾಡಲಾಗುತ್ತಿದೆ. ತಾಯಿ ಮೌಕ್ತಿಕಾಂಬ ಬರಗಾಲದಿಂದ ತತ್ತರಿಸಿರುವ ರೈತರಿಗೆ ಉತ್ತಮ ಮಳೆಯನ್ನು ಕರುಣಿಸಿ, ಸಮೃದ್ಧ ಜೀವನ ಸಾಗಿಸುವಂತೆ ಆಗಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ವೆಂಕಟರಾಯಪ್ಪ, ವಿ.ಶ್ರೀನಿವಾಸ್‌, ವಿ.ನಾರಾಯಣಸ್ವಾಮಿ, ವಿ. ಗೋಪಾಲ್‌, ವಾಸು, ಮಂಜುನಾಥ್‌, ಟೌನ್‌ ಬಿಜೆಪಿ ಅಧ್ಯಕ್ಷ ಮಂಜುನಾಥ್‌ ಇದ್ದರು. ಕರಗ ಹೊತ್ತ ಪೂಜಾರಿ ರವಿಕುಮಾರ್‌ ಸುಮಾರು ಹತ್ತು ನಿಮಿಷ ಹೂವಿನ ಮೇಲೆ ನೃತ್ಯ ಮಾಡಿದರು. ಇದನ್ನು ನೋಡಿ ನೆರೆದಿದ್ದ ಜನ ಪುಳಕಿತಗೊಂಡು ಗೋವಿಂದ-ಗೋವಿಂದ ಎಂದು ಪಠಿಸಿದರು.

ನೀರಗಂಟಿ ಪಾಳ್ಯ ಮತ್ತು ಅಕ್ಕುಪೇಟೆ ತಿಗಳ ಸಮುದಾಯದ ಮುಖಂಡರಿಂದ ಕರಗ ಮಹೋತ್ಸವದ ಅಂಗವಾಗಿ 300ಕೆ.ಜಿ. ಹೂಗಳಲ್ಲಿ ತ್ರಿಶೂಲ, ನವಿಲು, ಸ್ವಾಸ್ಥಿಕ್‌, ಓಂ, ಇತರೆ ವಿನ್ಯಾಸದ ಚಿತ್ರ ಮಾಡಲಾಗಿತ್ತು. ಕೋಟಿ ದ್ವಾರದಿಂದ ಚಿಕ್ಕಕೆರೆ ತನಕ ಹೂವಿನ ವಿನ್ಯಾಸ ಮಾಡಿದ್ದರು. ಮಲ್ಲಿಗೆ 80ಕೆಜಿ, ಚೆಂಡು ಹೂ. 60ಕೆ.ಜಿ., ಗುಲಾಬಿ 40ಕೆ.ಜಿ., ಗೆನ್ನೇರಿ 60ಕೆ.ಜಿ., ಹಳದಿ ಬಣ್ಣದ ಚೆಂಡು ಹೂ 50ಕೆ.ಜಿ., ಪತ್ರೆ 10 ಕೆ.ಜಿ. ಹೂಗಳಿಂದ ಅಲಂಕರಿಸಲಾಗಿತ್ತು.

ಟಾಪ್ ನ್ಯೂಸ್

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.