ಬೆಳಕಿನ ಹಬ್ಬಕ್ಕೆ ಹಣತೆ ವ್ಯಾಪಾರ ಜೋರು
Team Udayavani, Nov 14, 2020, 8:36 PM IST
ದೇವನಹಳ್ಳಿ: ಕೋವಿಡ್ ಕರಿನೆರಳಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಜೇಡಿ ಮಣ್ಣಿನಿಂದ ಬಣ್ಣ ಬಣ್ಣದ ಹಣತೆಗಳು ಸಿದ್ಧವಾಗಿವೆ. ಅಲ್ಲದೆ, ದೀಪಾಲಂಕಾರಕ್ಕೆ ಹತ್ತಾರು ಮಾದರಿಯಲ್ಲಿ ಹಣತೆಗಳು ಮಾರಾಟಕ್ಕೆ ಇಡಲಾಗಿದೆ.
ದೀಪಾವಳಿಗೆ ಸಂಪ್ರದಾಯ, ಧಾರ್ಮಿಕ, ಐತಿಹಾಸಿಕ ಪರಂಪರೆಯಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿದೆ. ನಗರದಲ್ಲಿ ಹಣತೆಗಳ ಖರೀದಿ ಜೋರಾಗಿನಡೆದಿದೆ.ಹತ್ತಾರುಮಾದರಿಯಹಣತೆಗಳು ಮಾರಾಟಕ್ಕಿಡಲಾಗಿದೆ. ಹಣತೆಗಳ ಬೆಲೆ ಹೆಚ್ಚಾಗಿದ್ದರೂ, ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿದೀಪ ಹೆಚ್ಚಿನ ಬೇಡಿಕೆ ಇದ್ದು, ಮಣ್ಣಿನ ಅಲಂಕಾರಿಕ ವಸ್ತುಗಳು 5 ರೂ.ನಿಂದ 150 ರೂ. ವರೆಗೆ ವ್ಯಾಪಾರ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟ ಮತ್ತು ಸುಡುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ.
ವಿವಿಧ ರೀತಿಯ ದೀಪಗಳು: ವಿವಿಧ ವಿನ್ಯಾಸದ ಹಣತೆ ದೀಪಗಳು ತಯಾರಿಸುವುದರಲ್ಲದೆ, ತೆಂಗಿನ ಕಾಯಿ ಮಾದರಿಯ ಆಕಾರ ಅದರಲ್ಲಿ ದೀಪ, ತಳಸಿಕಟ್ಟೆ, ಬೃಂದಾವನ, ತಟ್ಟೆಯ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕುವ ರೀತಿಯಲ್ಲಿ ಹಣತೆಯ ವಿನ್ಯಾಸ, ಮನೆ ಬಾಗಿಲಿನಲ್ಲಿ ದೀಪವಿಟ್ಟಾಗ ಗಾಳಿಯಲ್ಲಿ ಹಾರಿಹೋಗದಂತೆ ಪುರಾತನ ಕಾಲದ ಲ್ಯಾಂಪ್ ರೀತಿಯ ದೀಪಗಳು ಗಮನ ಸೆಳೆಯುತ್ತಿದೆ.
ಕೋವಿಡ್ ದಿಂದ ಕುಂಬಾರಿಕೆ ಕಷ್ಟವಾಗುತ್ತಿದೆ. ಹಣತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಹಣತೆ ದೊರೆಯುತ್ತಿದೆ. ಗ್ರಾಹಕರುಖರೀದಿಸುತ್ತಿದ್ದಾರೆ. –ಭಾಗ್ಯ, ವ್ಯಾಪಾರಸ್ಥರು
ಜೇಡಿ ಮಣ್ಣಿನ ದೀಪಗಳನ್ನುಖರೀದಿಸುತ್ತಿದ್ದೇವೆ. ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಕೋವಿಡ್ ಇಡೀ ವಿಶ್ವವನ್ನು ಬಿಟ್ಟು ತೊಲಗುವಂತೆ ಆಗಬೇಕು. –ರೂಪಾ, ಗ್ರಾಹಕರು
ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಕೊರೊನಾ ಇಡೀ ವಿಶ್ವವನ್ನು ಬಿಟ್ಟು ತೊಲಗುವಂತೆ ಆಗಬೇಕು. –ರೂಪಾ, ಗ್ರಾಹಕರು
ಜಿಲ್ಲೆಯಲ್ಲಿ ಕೋವಿಡ್ ದಿಂದ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹಸಿರು ಪಟಾಕಿ ಬಳಸಬೇಕು. ಸುರಕ್ಷತಾ ಕ್ರಮ ಪಾಲಿಸಿ, ಮಾಲಿನ್ಯ ರಹಿತ ದೀಪಾವಳಿ ಆಚರಿಸಬೇಕು. –ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ