ದೇವನಹಳ್ಳಿಯಲ್ಲಿ ಅಪಘಾತ:ಬಾಲಕಿ ಸಾವು;ಉದ್ವಿಗ್ನ ಸ್ಥಿತಿ
Team Udayavani, Jan 6, 2018, 10:26 AM IST
ಬೆಂಗಳೂರು: ನರಗದ ಹೊರವಲಯದ ದೇವನಹಳ್ಳಿಯ ಬೀರಸಂದ್ರ ಗೇಟ್ ಬಳಿ ಮುಖ್ಯರಸ್ತೆಯಲ್ಲಿ ಟಾಟಾಸುಮೋವೊಂದು ಢಿಕ್ಕಿಯಾಗಿ 14 ವರ್ಷದ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಶನಿವಾರ ಬೆಳಗ್ಗೆ ನಡೆದಿದ್ದು, ಘಟನೆಯ ಬಳಿಕ ಸಾವಿರಾರು ಸ್ಥಳೀಯರು ಜಮಾಯಿಸಿ ರಸ್ತೆ ತಡೆದು, ಟಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.
ಮೃತ ವಿದ್ಯಾರ್ಥಿನಿ ಬೈರದೇನಹಳ್ಳಿ ನಿವಾಸಿ ಹರ್ಷಿತಾ ಎಂದು ತಿಳಿದು ಬಂದಿದ್ದು, ಶಾಲೆಗೆ ತೆರಳಲು ಮುಖ್ಯ ರಸ್ತೆ ದಾಟುತ್ತಿದ್ದ ವೇಳೆ ಟಾಟಾಸುಮೋ ಢಿಕ್ಕಿಯಾಗಿದೆ.
ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ತೀವ್ರ ವಾಗ್ವಾದ ನಡೆದಿದೆ.
2 ಗಂಟೆಗೂ ಹೆಚ್ಚು ಕಾಲ ಡಾಬಸ್ಪೇಟೆ -ಹೊಸೂರು ಮುಖ್ಯರಸ್ತೆಯನ್ನು ತಡೆ ಹಿಡಿದಿರುವ ಬಗ್ಗೆ ವರದಿಯಾಗಿದೆ.
ವಿದ್ಯಾರ್ಥಿನಿಯ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.