ಜಾನಪದ ಸಂಸ್ಕೃತಿ ಉಳಿವಿಗೆ ಕೈಜೋಡಿಸಿ: ರಮೇಶ್
Team Udayavani, Apr 2, 2021, 11:44 AM IST
ವಿಜಯಪುರ: ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಜಾನಪದ ಕಲೆ ಬಗ್ಗೆ ಅಧ್ಯಯನ ಮಾಡುವ ಮೂಲಕ ಅನೇಕರುಕಟ್ಟಿಕೊಟ್ಟಿರುವ ಜಾನಪದ ಸಂಸ್ಕೃತಿಉಳಿವಿಗೆ ಶ್ರಮಿಸಿ, ಕೈಜೋಡಿಸಬೇಕು ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿ.ಎನ್.ರಮೇಶ್ ತಿಳಿಸಿದರು.
ಪಟ್ಟಣದ ಜ್ಞಾನಗಂಗಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಪನಹಳ್ಳಿ ಪರಿರ್ವತನಾ ಟ್ರಸ್ಟ್ನಿಂದ ನಡೆದ 2021ನೇ ಜಾನಪದ ಉತ್ಸವದಲ್ಲಿಡೋಲು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯಾವುದೇ ಸುಶಿಕ್ಷಿತಭಾಷೆಗೆ ಜೋತು ಬೀಳದೆ ತಮ್ಮದೇಶೈಲಿಯಲ್ಲಿ ಹಾಡು ಕಟ್ಟಿ ಹಾಡಿ ಇಂದಿನಪೀಳಿಗೆವರೆಗೂ ಉಳಿಸಿ ಹೋಗಿದ್ದಾರೆ. ಇಂದಿನ ನಾಗರಿಕರ ಅಕ್ಷರ ಜಗತ್ತಿನಲ್ಲಿಯೂ ಜಾನಪದ ಹಾಡುಗಳು ಅವುಗಳ ಶ್ರೇಷ್ಠತೆ ಉಳಿಸಿಕೊಂಡಿವೆ ಎಂದರು.
ಕಲೆಗೆ ಸಾವಿಲ್ಲ: ಜ್ಞಾನಗಂಗಾ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, ಜಾನ ಪದ ಕಲೆಗೆ ಸಾವಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತಿವೆ. ಇದರಿಂದಾಗಿ ಅಧ್ಯಯನಕಾರರಿಗೆ ಮೂಲ ಕಲೆಗಳ ಮಾಹಿತಿ ಕೊರತೆಯಿಂದ ಸಂಶೋಧನೆಗೆ ತೊಡಕಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಾನಪದ ಕಲೆ ಉಳಿಸುವ ಯೋಜನೆ ರೂಪಿಸಬೇಕೆಂದರು.
ಕಲಾವಿದರಿಗೆ ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ತಾರತಮ್ಯ ಮಾಡದೆಜಾನಪದ ಕಲಾವಿದರಿಗೂ ಅಗತ್ಯ ಮನ್ನಣೆನೀಡಬೇಕು. ಯುವ ಜನರಲ್ಲಿ ನಮ್ಮಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಭಿಮಾನ ಮೂಡಿಸಲು ಜಾನಪದ ಗೀತೆಗಳ ಗಾಯನ ಸಹಕಾರಿ ಎಂದರು.
ಇದೇ ವೇಳೆ ವೀರಗಾಸೆ, ತಮಟೆ, ಕೋಲಾಟ, ನಾದಸ್ವರ, ಸುಗಮ ಸಂಗೀತ,ಜಾನಪದ ಗೀತೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಪ್ರಸನ್ನ ಕುಮಾರ್, ಬಲಿಜ ಜನಾಂಗದ ಅಧ್ಯಕ್ಷ ಮಹತ್ಯಾಂಜನೇಯ, ಎಂ.ವಿ.ನಾಯ್ಡು, ಶಿಕ್ಷಕ ವೃಂದ, ಕಲಾವಿದರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ