ಬಿಜೆಪಿಯಿಂದ ಗಾಂಧಿ ವಿಚಾರಧಾರೆ ಪ್ರಚಾರ
Team Udayavani, Oct 7, 2019, 2:47 PM IST
ದೇವನಹಳ್ಳಿ: ಗಾಂಧೀಜಿಯ 150 ನೇ ಜಯಂತಿ ಅಂಗವಾಗಿ ಗಾಂಧಿ ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದು, ಈ ಕುರಿತು ಎಲ್ಲಾ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದಮುಖಾಂತರ ಸಾರ್ವಜನಿಕರಿಗೆ ತಿಳಿಯು ವಂತಾ ಗಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ ಹೇಳಿದರು.
ತಾಲೂಕಿನ ಚನ್ನಹಳ್ಳಿ ಮಾರಮ್ಮದೇವಾಲಯ ಆವರಣದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣದಿಂದ ಬೂದಿಗೆರೆ ಗ್ರಾಮದವರೆಗೆ ಕಾರ್ಯಕರ್ತರು ಗಾಂಧೀ ವಿಚಾರಗಳ ಬಗ್ಗೆ ಕಾಲ್ನಡಿಗೆ ಮುಖಾಂತರ ಪಥ ಚಲನೆ ಮಾಡುವುದಕ್ಕೆದಿನಾಂಕ ನಿಗದಿ ಮಾಡಲಾಗುವುದು. ಪ್ರತಿ ಗ್ರಾಮದಿಂದ 25 ಜನ ಆಗಮಿಸಬೇಕು ಎಂದು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಹೆಚ್.ಎಂ.ರವಿಕುಮಾರ್ ಮಾತನಾಡಿ, ಗಾಂಧಿ ವಿಚಾರಧಾರೆಯನ್ನು ತಿಳಿಸಲು ಯಾವುದೇ ಪಕ್ಷಪಾತ ಇಲ್ಲದೆ ಎಲ್ಲರೂ ಭಾಗಿಯಾಗಲು ಕೋರಲಾಗಿದೆ. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ಗೌಡ, ಹೋಬಳಿ ಅಧ್ಯಕ್ಷ ರಾಮಾಂಜಿನೇಯ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರಾಜಣ್ಣ, ಪಕ್ಷದ ಮುಖಂಡರಾದ ಗೋಕರೆಗೋಪಾಲ್, ನಂದೀಶ್, ಮಾರೇಗೌಡ, ನಲ್ಲೂರು ಗ್ರಾಪಂ ಮಾಜಿ ಸದಸ್ಯ ಶಿವಪ್ರಸಾದ್ ಮತ್ತಿತರರಿದ್ದರು.