ಉತ್ತಮ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ
Team Udayavani, Apr 15, 2022, 12:59 PM IST
ಆನೇಕಲ್: ಡಾ. ಅಂಬೇಡ್ಕರ್ ಮಾರ್ಗ ದರ್ಶನ, ಹಿತನುಡಿ ಇಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ ಹೇಳಿದರು.
ಮರಸೂರು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬೇ ಡ್ಕರ್ ಜಯಂತಿಯಲ್ಲಿ ಮಾತನಾಡಿ, ಜನ ಪ್ರತಿನಿಧಿಗಳಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಜನ ನಮ್ಮನ್ನು ಚುನಾಯಿತ ರಾಗಿ ಕಳುಹಿಸಿ ಕೊಡುತ್ತಾರೆ. ಆದರೆ, ನಾವು ಸಂವಿಧಾನದ ಅಡಿಯಲ್ಲಿ ಅಂಬೇಡ್ಕರ್ ಆದರ್ಶ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಜವಾ ಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಮಾಜ ಕಟ್ಟುವಲ್ಲಿ ಕೆಲಸ: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪುರು ಷೋತ್ತಮ ರೆಡ್ಡಿ ಮಾತನಾಡಿ, ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಗಲ್ಲಿಗಲ್ಲಿಗಳಲ್ಲಿ ಮಾಡುತ್ತಿದ್ದಾರೆ. ಅವರ ತತ್ವಾದರ್ಶಗಳು ನಮಗೆ ಮಾದರಿಯಾಗಬೇಕು. ಎಲ್ಲ ಜಾತಿ ಜನಾಂಗ ಪ್ರೀತಿ, ವಿಶ್ವಾಸ ಸಹಬಾಳ್ವೆಯಿಂದ ಬದುಕಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು. ನಾವೆ ಲ್ಲರೂ ಸಂವಿಧಾನದ ಅಡಿ ಯಲ್ಲಿ ಅಧಿಕಾರಕ್ಕೆ ಬಂದವರು. ಅದೇ ರೀತಿ ಕಾರ್ಯ ಕ್ರಮ ರೂಪುರೇಷೆ ಮಾಡಿ ಉತ್ತಮ ಸಮಾಜ ಕಟ್ಟುವಲ್ಲಿ ಕೆಲಸ ಮಾಡಬೇಕಿದೆ ಎಂದರು.
ಜಿಪಂ ಮಾಜಿ ಸದಸ್ಯ ಬಂಡಾಪುರ ರಾಮಚಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಭಾಕರ ರೆಡ್ಡಿ, ಗ್ರಾಪಂ ಉಪಾಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಗ್ರಾಪಂ ಸದಸ್ಯೆ ರಶ್ಮಿ, ವನಿತಾ, ಮಣಿಕಂಠ, ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ರಾಮಕೃಷ್ಣ ರೆಡ್ಡಿ, ಮುಖಂಡ ರಮೇಶ್ ರೆಡ್ಡಿ, ರಾಧಾಕೃಷ್ಣ, ಪಿಡಿಒ ಮುರಳಿ ಹಾಗೂ ಮತ್ತಿತರರು ಇದ್ದರು. ಇದೇ ವೇಳೆ ರೋಟೆಕ್ ಸಂಸ್ಥೆಯಿಂದ ಮರಸೂರು ಆರೋಗ್ಯ ಕೇಂದ್ರಕ್ಕೆ ಉಚಿತ ಆ್ಯಂಬುಲೆಸ್ಸ್ ವಾಹನವನ್ನು ಗ್ರಾಪಂ ಅಧ್ಯಕ್ಷರ ಮೂಲಕ ಹಸ್ತಾಂತರ ಮಾಡಲಾಯಿತು.