ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ
100ರೂ. ಗಡಿ ದಾಟಿದ ದರ
Team Udayavani, Oct 22, 2020, 1:03 PM IST
ದೇವನಹಳ್ಳಿ: ಉತ್ತರ ಕರ್ನಾಟಕ , ಮಹಾರಾಷ್ಟ್ರದಲ್ಲಿ ಉಂಟಾದ ಪ್ರವಾಹದಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದ್ದು, ಇದರಿಂದ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ.
ಕಳೆದ 10-15ದಿನಗಳಿಂದ ಈರುಳ್ಳಿ ಬೆಲೆ ಕೆ.ಜಿ.ಗೆ 40 ರಿಂದ 50ರೂ. ಗೆ ಮಾರಾಟವಾಗುತ್ತಿತ್ತು. ಇದೀಗ ಈರುಳ್ಳಿ ಬೆಳೆ100ರೂ.ಗಡಿ ದಾಟಿದೆ. ಇದರಿಂದ ಈರುಳ್ಳಿ ಖರೀದಿಸುವು ದಾದರೂ ಹೇಗೆ ಎಂಬುವುದು ಗ್ರಾಹಕರ ಚಿಂತೆಯಾಗಿದೆ. ಹೊರರಾಜ್ಯಮತ್ತುವಿವಿಧಜಿಲ್ಲೆಗಳಾದ ಕೊಪ್ಪಳ, ಗದಗ, ಧಾರವಾಡ, ರಾಯಚೂರು, ವಿಜಯಪುರ ಹಾಗೂ ಇತರೆ ಉತ್ತರಕರ್ನಾಟಕಜಿಲ್ಲೆಗಳಿಂದಈರುಳ್ಳಿ ಸರಬರಾಜು ಆಗಬೇಕಿತ್ತು. ಆದರೆ, ಮಳೆ ಪ್ರವಾಹದಿಂದಾಗಿ ಈ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಶೇ.70ರಷ್ಟು ಹಾನಿಯಾಗಿದ್ದು, ಸಣ್ಣ, ಕಳಪೆ ಮಟ್ಟದ ಈರುಳ್ಳಿಗೂ ಬೆಲೆ ಬಂದಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗಬಹುದೆಂಬುವುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದು, ಸಣ್ಣ ಪ್ರಮಾ ಣದಈರುಳ್ಳಿಕೆ.ಜಿಗೆ70ರೂ.ಗೆ ಮಾರಾಟವಾಗುತ್ತಿದೆ. ಹಾಪ್ಕಾಮ್ಸ್ ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ 85 ರೂ.ಹಾಗೂ ಚಿಲ್ಲರೆ ದರ 120 ರವರೆಗೆ ದಾಟಿದೆ. ಹೋಟೆಲ್ಗಳಲ್ಲಿ ಈರುಳ್ಳಿ ದೋಸೆಯನ್ನು ಸ್ಥಗಿತಗೊಳಿಸಲಾಗಿದ್ದು, ಆಯುಧ ಪೂಜೆ, ವಿಜಯದಶಮಿ ವೇಳೆ ದರ ಇನ್ನೂ ಹೆಚ್ಚಾಗಬಹುದು, ಎಲ್ಲಿಯೂ ಈರುಳ್ಳಿ ಸಿಗುತ್ತಿಲ್ಲ. ಮುಂದಿನ ವಾರದಲ್ಲಿ ಈರುಳ್ಳಿ ಬೆಲೆ 120 ರೂ. ನಿಂದ 150 ರೂ. ದಾಟಿದರೂ ಆಶ್ಚರ್ಯ ಪಡುವಂತಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ.
ಈರುಳ್ಳಿ ಆಮದು ಕಡಿಮೆಯಾಗಿದೆ. ಎಲ್ಲಿಯೂ ಈರುಳ್ಳಿ ಸಿಗುತ್ತಿಲ್ಲ.ಇರುವ ಸ್ಟಾಕ್ನಲ್ಲಿಯೇಈರುಳ್ಳಿ ಮಾರಾಟಮಾಡುತ್ತಿ ದ್ದೇವೆ.ಇದೀಗಕೆ.ಜಿ.ಗೆ 100 ರೂ.ಇದೆ.ಇನ್ನು ಬೆಲೆ ಏರಿಕೆಯಾಗುವ ಸಂಭವವಿದೆ. –ಬಾಬು, ಈರುಳ್ಳಿ ಮಾರಾಟಗಾರ
ಈರುಳ್ಳಿ ಬೆಲೆ ಹೆಚ್ಚಾಗಿದ್ದರೂ,ಕೊಂಡುಕೊಳ್ಳಲೇಬೇಕಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದಕಣ್ಣಲ್ಲಿ ನೀರು ಬರುವಂತಾಗಿದೆ. ಅಡುಗೆಗೆ 4-5ಈರುಳ್ಳಿ ಮಾತ್ರ ಬಳಸುತ್ತಿದ್ದೇವೆ. – ಮಾಹಾದೇವಿ, ಗೃಹಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ