ಟೋಲ್‌ಗೇಟ್‌ ಗಳ ಬಳಿ ಮಧ್ಯವರ್ತಿಗಳ ಹಾವಳಿ


Team Udayavani, Dec 2, 2019, 3:22 PM IST

br-tdy-2

ನೆಲಮಂಗಲ: ಕೇಂದ್ರ ಸರ್ಕಾರ ಡಿ.1ರಿಂದ ಟೋಲ್‌ ಸಂಗ್ರಹ ವ್ಯವಸ್ಥೆಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಿದ ಬೆನ್ನಲ್ಲೆ ವಾಹನ ಮಾಲೀಕರಿಗೆ, ಸವಾರರಿಗೆ ಟ್ಯಾಗ್‌ ಕಮೀಷನ್‌ ಆಧಾರದಲ್ಲಿ ಟ್ಯಾಗ್‌ ವಿತರಿಸಲುಮಧ್ಯವರ್ತಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದುವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೀಲರ್‌ಗಳಿಗೆ ಅನುಮತಿ: ಫಾಸ್ಟ್‌ಟ್ಯಾಗ್‌ ವಿತರಣೆಗಾಗಿ ದೇಶಾದ್ಯಂತ 22 ಬ್ಯಾಂಕ್‌ಗಳಿಗೆಅನುಮತಿ ನೀಡಲಾಗಿದೆ.ಇದರ ಅನುಸಾರ ಬ್ಯಾಂಕ್‌ಗಳು ವಿತರಕರು, ಡೀಲರ್ಗಳು, ಚಾನಲ್‌ ಪಾಟ್ನರ್‌ ಗಳಿಗೆ ಪಾಸ್ಟ್‌ಟ್ಯಾಗ್‌ ವಿತರಣೆ ಮಾಡಲು ಅನುಮತಿ ನೀಡಿದ್ದಾರೆ.

ಅನುಮತಿ ಪಡೆದ ಡೀಲರ್ಗಳು, ಏಜೆನ್ಸಿಗಳ ಮೂಲಕ ಟ್ಯಾಗ್‌ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರ ಪರಿಣಾಮ ಏಜೆನ್ಸಿ ಪಡೆದವರು ಮಧ್ಯವರ್ತಿಗಳಾಗಿ ನಿಗದಿಯಾದ ಬೆಲೆಗಿಂತ ಹೆಚ್ಚಿನ ಮೊತ್ತ ಪಡೆದು ವಾಹನ ಸವಾರರಿಂದ ಹಣ ಲೂಟಿ ಮಾಡುತಿದ್ದಾರೆ.ಎಸ್‌ಬಿಐ ಬ್ಯಾಂಕ್‌ನಲ್ಲಿ ಫಾಸ್ಟ್‌ಟ್ಯಾಗ್‌ ವಿತರಣೆಗೆ ಮಾಡಲು ಕಾರಿಗೆ 400 ರೂ.ಸಣ್ಣ ಪ್ರಮಾಣದ ಖಾಸಗಿ ವಾಹನಕ್ಕೆ 140 ರೂ.ಬಸ್ಸುಗಳಿಗೆ 300 ರೂ.ಮಿನಿ ಬಸ್‌ಗೆ 140. ಟ್ರಕ್‌ಗೆ 300.ಟಾಟಾ ಎಸಿಗೆ 400 ರೂ.ನಿಗದಿ ಮಾಡಲಾಗಿದೆ.

ಹಣಲೂಟಿ: ಬ್ಯಾಂಕ್‌ ನಿಗದಿ ಮಾಡಿದ ಹಣಕ್ಕೆ ಕೆಲವು ಡೀಲರ್ಗಳು ಟ್ಯಾಗ್‌ ವಿತರಣೆ ಮಾಡಿದರೆ, ಡೀಲರ್ಗಳಿಂದ ಏಜನ್ಸಿ ಪಡೆದವರು, 400ರ ಟ್ಯಾಗ್‌ ಗೆ 500ರಿಂದ 800, 300 ಟ್ಯಾಗ್‌ಗೆ 500 ರಿಂದ 700, 100 ಟ್ಯಾಗ್‌ಗೆ 300ರಿಂದ 500ರೂ.ಗಳವರೆಗೂ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ನೆಲಮಂಗಲದ ನಾಲ್ಕು ಟೋಲ್‌ಗ‌ಳಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಮೂರು ಸಾವಿರ ಟ್ಯಾಗ್‌ ವಿತರಣೆ ಮಾಡಲಾಗಿದೆ.

ಕಚೇರಿಗೆ ಬೀಗ: ಟೋಲ್‌ಗ‌ಳಿಂದ ಫಾಸ್ಟ್‌ಟ್ಯಾಗ್‌ ವಿತರಿಸಲು ಕಚೇರಿಗಳು ತೆರೆಯಲಾಗಿದೆ. ಆದರೆಏಜನ್ಸಿಗಳು ಕಚೇರಿಯ ಬಾಗಿಲು ಹಾಕಿ ಕೆಲಸಗಾರರ ಮೂಲಕ ರಸ್ತೆಗಳಲ್ಲಿ ಬೈಕ್‌, ಕಾರುಗಳ ವಾಹನ ಸವಾರರ ಬಳಿ ಹೆಚ್ಚು ಹಣ ಪಡೆದು ಟ್ಯಾಗ್‌ ಮಾರಾಟ ಮಾಡುತ್ತಿದ್ದಾರೆ.

ಟ್ಯಾಗ್‌ ಖಾಲಿ?: ಕಚೇರಿಯ ಮೇಲೆ ಫಾಸ್ಟ್‌ಟ್ಯಾಗ್‌ಮಾಡಲಾಗುತ್ತದೆ ಎಂದು ನಾಮಫ‌ಲಕವಿದ್ದರೂ, ಕಚೇ ರಿಗೆ ಹೋಗಿ ಕೇಳಿದರೆ ಟ್ಯಾಗ್‌ ಖಾಲಿ ಎನ್ನುತ್ತಾರೆ, ಹೊರಗೆ ರಾಜರೋಷವಾಗಿ ಹೆಚ್ಚಿನ ಹಣಕ್ಕೆ ಟ್ಯಾಗ್‌ ಮಾರಾಟ ಮಾಡುತ್ತಾರೆ.

ಮಧ್ಯವರ್ತಿಗಳ ಕಂಟಕ: ಫಾಸ್ಟ್‌ಟ್ಯಾಗ್‌ ಕಡ್ಡಾಯ ವಾಗುವುದರಿಂದ ವಾಹನ ಸವಾರರು ಫಾಸ್ಟ್‌ಟ್ಯಾಗ್‌ಪಡೆಯುವುದು ಅನಿವಾರ್ಯವಾಗಿದ್ದು, ಇದನ್ನೇಬಂಡವಾಳ ಮಾಡಿಕೊಂಡ ಕೆಲ ಏಜೆನ್ಸಿಗಳು ಮಧ್ಯ ವರ್ತಿಗಳ ಮೂಲಕ ಹೆಚ್ಚಿನ ಮೊತ್ತ ಪಡೆದು ಹಣಲೂಟಿಯಲ್ಲಿ ತೊಡಗಿದ್ದಾರೆ.ವಾಹನ ಸವಾರರಿಗೆಟ್ಯಾಗ್‌ ಸರಿಯಾದ ಸಮಯಕ್ಕೆ ಸಿಗದೆ, ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

-ಕೊಟ್ರೇಶ್‌. ಆರ್‌

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.