ಮುಂದುವರಿದ ಐಟಿ ದಾಳಿ
Team Udayavani, Feb 19, 2021, 6:16 PM IST
ದೇವನಹಳ್ಳಿ: ರಿಯಲ್ ಎಸ್ಟೇಟ್ ಉದ್ಯಮಿ ಮುನಿರಾಜು ಮಾಲೀಕತ್ವದ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಎರಡನೇ ದಿನವೂ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಫೆ.17ರ ಬೆಳಗ್ಗೆ 4.30ರಿಂದ ಪ್ರಾರಂಭ ವಾಗಿರುವ ಐಟಿ ದಾಳಿ ಎರಡನೇ ದಿನವೂ ಅಧಿಕಾರಿಗಳು ಪರಿಶೀಲನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮುನಿರಾಜು 25 ಎಕರೆ ವ್ಯಾಪ್ತಿಯಲ್ಲಿ ಶಾಲೆ,ಕಾಲೇಜು ಹಾಗೂ ಮೆಡಿಕಲ್ ಕಾಲೇಜು ನಿರ್ಮಿಸಿದ್ದಾರೆ.
ಮತ್ತೂಂದು ತಂಡದ ಅಧಿಕಾರಿಗಳ ತಂಡ ಮುನಿರಾಜು ವಾಸವಾಗಿರುವ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆಯಲ್ಲಿಯೂ ಶೋಧ ನಡೆದಿದ್ದು, ಮಹತ್ವದ ದಾಖಲೆ ಮತ್ತು ಕಂಪ್ಯೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಐಟಿ ದಾಳಿ ಹಿನ್ನೆಲೆ, ಸಾರ್ವಜನಿಕರ ವಲಯದಲ್ಲಿ ಯಾವ ದಾಖಲೆ ಸಿಕ್ಕಿದೆ ಎಂಬುವುದು ನಿಗೂಢವಾಗಿದೆ. ಸಾರ್ವ ಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರಿಶೀಲನೆ ವೇಳೆ ಮಹತ್ವ ದಾಖಲೆ ಲಭ್ಯವಾಗಿದ್ದು, ಇನ್ನೂ ಸಾಕಷ್ಟು ಕಡತಗಳ ಪರಿಶೀಲನೆ ಮಾಡಬೇಕು ಎಂದು ಮೂಲಗಳು ತಿಳಿಸಿವೆ.