ಪ್ರಯಾಣಿಕರಿಗೆ ನ್ಯೂ ಇಯರ್ ‌ಕೊಡುಗೆ

ಕೆಂಪೇಗೌಡ ವಿಮಾನ ನಿಲ್ದಾ ಣದ ದಕ್ಷಿಣ ರನ್‌ವೇಯನ್ನು ಕ್ಯಾಟ್‌MMM1 ಹಂತಕ್ಕೆ ಮೇಲ್ದರ್ಜೆಗೆ ಏರಿಕೆ

Team Udayavani, Jan 1, 2021, 4:14 PM IST

ಪ್ರಯಾಣಿಕರಿಗೆ ನ್ಯೂ ಇಯರ್ ‌ಕೊಡುಗೆ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು(ಕೆಐಎಬಿ/ಬೆಂಗಳೂರು ವಿಮಾನನಿಲ್ದಾಣ)ರಿನ ದಕ್ಷಿಣ ರನ್‌ವೇ(ನೂತನ ರನ್‌ವೇ)ಈಗಕ್ಯಾಟ್‌-3ಬಿ ನಿಯಮಗಳಿಗೆ ತಕ್ಕಂತೆ ಸಜ್ಜಾಗಿದೆ. ಡಿ.31ರಬೆಳಗಿನ 5.30 ಗಂಟೆಯಿಂದ ಇದು ಜಾರಿಗೆ ಬಂದಿದೆ ಎಂದು ಬಿಐಎಎಲ್‌ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐ.ಎಲ್‌.ಎಸ್‌.), ವಿಮಾನದ ರನ್‌ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್ ಫೀಲ್ಡ್‌ ಗ್ರೌಂಡ್‌ ಲೈಟ್‌ (ಎ.ಜಿ.ಎಲ್‌.) ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್‌ ಮಿಸ್ಸೋ ಮೀಟರ್‌, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ(ಎ.ಡಬ್ಲ್ಯೂ.ಒ.ಎಸ್‌.), ಮೇಲ್ಮೆ„ಚಲನೆಯ ರ್ಯಾಡಾರ್‌(ಎಸ್‌.ಎಂ.ಆರ್‌.) ಮತ್ತು ಇತರೆ ಮಾರ್ಗ ಸೂಚಿಸುವ ನೆರವು ಒಳಗೊಂಡ ವ್ಯವಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಪ್ರತಿಕೂಲ ಹವಾಮಾನ ಮತ್ತು ಮಂಜು ಮುಸುಕಿದ ಸ್ಥಿತಿಗಳಿಂದ ವಿಮಾನದ ಚಲನೆಯ ಮೇಲೆ ಈಗ ಕನಿಷ್ಠ ಪರಿಣಾಮ ಉಂಟಾಗಲಿದೆ.

ಈ ಮೇಲ್ದರ್ಜೇಗೇರಿಸುವ ರನ್‌ವೇ ವ್ಯವಸ್ಥೆಯೊಂದಿಗೆ 50 ಮೀಟರ್‌ಗಳಷ್ಟು ಕಡಿಮೆ ರನ್‌ವೇ ವಿಷುವಲ್‌ ರೇಂಜ್‌ನಲ್ಲಿ ವಿಮಾನ ಇಳಿಯಲು ಮತ್ತು 125 ಮೀಟರ್‌ ರನ್‌ವೇ ವಿಷುವಲ್‌ ರೇಂಜ್‌ನಲ್ಲಿ ವಿಮಾನ ಹಾರಲು ಅವಕಾಶ ಮಾಡಿಕೊಡಬಹುದಾಗಿದೆ.ಇದುವರೆಗೆ ವಿಮಾನ ಕೆಳಗಿಳಿಯಲು 550 ಮೀಟರ್‌ ಮತ್ತು ಮೇಲೆ ಹಾರಲು 300 ಮೀಟರ್‌ ವಿಷುವಲ್‌ರೇಂಜ್‌ಗೆ ಪರವಾನಗಿ ಇರುತಿತ್ತು. ಇದರೊಂದಿಗೆಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ ಕ್ಯಾಟ್‌ MMM1 ರನ್‌ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ದೇಶದ 6ನೇ ವಿಮಾನ ನಿಲ್ದಾಣವಾಗಿದೆ.

ಮಂಜು ಮುಸುಕಿದ್ರೂ ವಿಮಾನ ಇಳಿಯುತ್ತೆ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇದುವರೆಗೆ ಮಂಜುಕವಿದ ವಾತಾವರಣದಿಂದ ವಿಮಾನ ಹಾರಾಟ ಮತ್ತು ವಿಮಾನಗಳುಇಳಿಯುವುದರಲ್ಲಿ ವಿಳಂಬವಾಗು ತ್ತಿತ್ತಲ್ಲದೇ, ಅವುಗಳನ್ನು ಬೇರೆಡೆಗೆ ಕಳುಹಿಸುವ ಕ್ರಮಗಳು ನಡೆಯುತ್ತಿದ್ದವು. ಇದರಿಂದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುವುದಲ್ಲದೆ, ವೈಮಾನಿಕಉದ್ಯಮಕ್ಕೆ ಹಣಕಾಸು ನಷ್ಟಗಳು ಉಂಟಾಗುತ್ತಿದ್ದವು.ಭಾರತಕ್ಕೆ ನೂತನ ಪ್ರವೇಶದ್ವಾರವಾಗಿರುವುದರೊಂದಿಗೆ ಪ್ರಯಾಣಗಳಿಗೆ ಅವಕಾಶಮಾಡಿಕೊಡುವ, ಅನುಭವಗಳನ್ನು ಸೃಷ್ಟಿಸುವ, ಮತ್ತು ಜೀವನಗಳನ್ನು ಸ್ಪರ್ಷಿಸುವ ದೃಷ್ಟಿಕೋನದೊಂದಿಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಅನುಭವವನ್ನು ಸೀಮಾತೀತ,ಆನಂದಪೂರ್ಣ ಮತ್ತು ನೆನಪಿಸಿಸಿಕೊಳ್ಳುವಂತೆಮಾಡುವ ಉದ್ದೇಶದೊಂದಿಗೆ ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಪರಿಚಯಿಸುವುದನ್ನು ಬಿಐಎಎಲ್‌ ಮುಂದುವರಿಸಲಿದೆ.

ತರಬೇತಿ ಪಡೆದ ಸಿಬ್ಬಂದಿ ನೇಮಕ: ಪರೀಕ್ಷಾರ್ಥ ಹಾಗೂ ಮಾಪನಾಂಕ ನಿರ್ಣಯದ ಹಾರಾಟಗಳು ಮತ್ತು ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಜಿಸಿಎ)ದಿಂದ ನಿರೀಕ್ಷಣೆಗಳ ಯಶಸ್ವಿ ಮುಕ್ತಾಯದ ನಂತರ ರನ್‌ವೇ ಕಾರ್ಯಾಚರಣೆನಡೆಸಲು ನಿಯಂತ್ರಣಾ ಒಪ್ಪಿಗೆಗಳನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಈ ಸೌಲಭ್ಯದ ಬಳಕೆಯನ್ನು ಗರಿಷ್ಠವಾಗಿಸಲು ವಿಮಾನಯಾನ ಸಂಸ್ಥೆಗಳು ಕ್ಯಾಟ್‌- ||| ಕಾರ್ಯಾಚರಣೆಗಳಿಗೆ ತರಬೇತಿ ಪಡೆದಿರುವ ಸಿಬ್ಬಂದಿಯನ್ನು ನಿಯೋಜಿಸಬೇಕು.

ಮಂಜು: ಕುರಿತ ವಿಶ್ಲೇಷಣಾ ಅಧ್ಯಯನ :

ವಿಮಾನ ನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಸಹಭಾಗಿತ್ವದಲ್ಲಿ ಅಧ್ಯಯನ ನಡೆಸಲು ಜವಾಹರ್‌ಲಾಲ್‌ ನೆಹರು ಉನ್ನತ ವೈಜ್ಞಾನಿಕಸಂಶೋಧನಾ ಕೇಂದ್ರ(ಜೆ.ಎನ್‌.ಸಿ.ಎ.ಎಸ್‌.ಆರ್‌.)ದಜೊತೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜುಕವಿಯುವುದನ್ನು ಮುಂಚಿತವಾಗಿ ತಿಳಿಸುವಸಾಮರ್ಥ್ಯವಿರುವ ಸಂಖ್ಯಾತ್ಮಕ ಅನುಕರಣಾಉಪಕರಣವನ್ನು ಅಭಿವೃದ್ಧಿ ಪಡಿಸಲು ಈ ನಾಲ್ಕು ವರ್ಷಗಳ ಅಧ್ಯಯನ ಪ್ರಸ್ತುತ ನಡೆಯುತ್ತಿದೆ.

ಉತ್ತರ ರನ್‌ವೇ ನವೀಕರಣ :

ಜೂ.22 ರಿಂದ ಕಾಯಾಚರಣೆ ನಿಲ್ಲಿಸಲಾಗಿರುವ ಉತ್ತರ ರನ್‌ವೇ ಯ ಪುನರ್‌ವಸತಿ ಕಾರ್ಯಪ್ರಗತಿಯಲ್ಲಿದೆ. ರನ್‌ವೇಗೆ ಹೊಸದಾಗಿ ಮೇಲ್ಮೈ ಹಾಸು ಹಾಕುವುದು ಜೊತೆಗೆ ಎಲ್‌ ಇಡಿ ರನ್‌ವೇ ಸೆಂಟರ್‌ಲೈಟ್‌ಗಳು ಮತ್ತು ರನ್‌ವೇ ಕೊನೆಯ ಲೈಟ್‌ಗಳನ್ನು ಅಳವಡಿಸುವುದು ನವೀಕರಣ ಕಾರ್ಯದಲ್ಲಿ ಸೇರಿವೆ. ಕಡಿಮೆ ದೃಶ್ಯ ಸಾಧ್ಯತೆಯ ಮತ್ತು ಪ್ರತಿಕೂಲಹವಾಮಾನ ಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯ ಸಡಿಲತೆಯನ್ನು ಈ ವಿಸ್ತರಣಾ ಕಾರ್ಯಗಳು ಸಾದರಪಡಿಸಲಿವೆ.

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.