ಲಾಕ್ಡೌನ್: ಊರುಗಳಿಗೆ ತೆರಳಿದ ಸಾರ್ವಜನಿಕರು
Team Udayavani, Jul 5, 2020, 6:31 AM IST
ದೇವನಹಳ್ಳಿ: ಕೋವಿಡ್ 19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಒಂದು ತಿಂಗಳು ಕಾಲ ಪ್ರತಿ ಭಾನುವಾರ ಲಾಕ್ಡೌನ್ಗೆ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ತೊರೆಯುತ್ತಿರುವ ನೂರಾರು ವಾಹನಗಳು ತಾಲೂಕಿನ ಪೂಜನಹಳ್ಳಿ ಗೇಟ್ ಬಳಿಯಿರುವ ಎಸ್ ಎಲ್ ಟೋಲ್ ಸುಂಕ ವಸೂಲು ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ನಿಂದ ಕೆಲಕಾಲ ವಾಹನ ಸವಾ ರರು ಮತ್ತು ಪ್ರಯಾಣಿಕರು ಪರಿತಪಿಸಿದ್ದು ಕಂಡು ಬಂತು.
ಕೋವಿಡ್ 19 ಆತಂಕ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರನ್ನು ಹೈದರಾಬಾದ್ನ ದಿನ ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾ ಣಿಸುತ್ತಿದ್ದು, ಟೋಲ್ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನಿನ್ನೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿದ್ದು, ಸೋಮ ವಾರ ಬೆಳಗ್ಗೆ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೆಕ್ಕಿಗಳು ಬೆಂಗ ಳೂರು ತೊರೆಯುತ್ತಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ 7ರ ವಿಮಾನ ನಿಲ್ದಾಣ ರಸ್ತೆ ದೇವನಹಳ್ಳಿಯ ಜನ ಹಳ್ಳಿ ಮತ್ತು ಸಾದಹಳ್ಳಿ ಸಮೀಪದ ಟೋಲ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿದೆ.