ನೆಲಮಂಗಲ: ಕೆಐಎಡಿಬಿ ಭೂ ಸ್ವಾಧೀನಕ್ಕೆ ಗ್ರಾಮಸ್ಥರಿಂದ ಅಡ್ಡಿ,ಪ್ರತಿಭಟನೆ
ಜೀವ ಬಿಟ್ಟೇವು ಭೂಮಿ ಬಿಡುವುದಿಲ್ಲ
Team Udayavani, Mar 25, 2022, 4:07 PM IST
ನೆಲಮಂಗಲ: ತಾಲೂಕಿನ ಓಬಾಳಪುರ ಗ್ರಾಮದಲ್ಲಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ಪಾಕ್೯ ನಿರ್ಮಾಣಕ್ಕೆ ಭೂಮಿಯನ್ನು ಒತ್ತುವರಿ ಮಾಡಲಾಗುತ್ತಿದ್ದು, ಸುಮಾರು 850 ಎಕರೆ ಭೂ ಒತ್ತುವರಿಗೆ ವಿರೋಧ ವ್ಯಕ್ತವಾಗಿದೆ. ಶಾಸಕರ ಸ್ವಗ್ರಾಮದಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು, ಜೀವ ಬಿಟ್ಟೇವು ಭೂಮಿ ಬಿಡುವುದಿಲ್ಲ ಎಂದು ಹೋರಾಟಕ್ಕಿಳಿದಿದ್ದಾರೆ.
ಕೆಐಎಡಿಬಿ ದರ ನಿಗದಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಪೂರ್ವಬಾವಿ ಸಭೆ ನಡೆಸಿ, ಮತ್ತೊಂದು ಸಭೆ ನಡೆಸದೇ ಒತ್ತುವರಿ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಲಾಗಿದೆ. ಓಬಾಳಪುರ ಗ್ರಾಮದ ರಸ್ತೆ ತಡೆದು ಗ್ರಾಮದವರಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಕೆಐಎಡಿಬಿ ಎಕರೆಗೆ 90 ಲಕ್ಷ ದರ ನಿಗದಿ ಮಾಡಿದ್ದು, ಗ್ರಾಮಸ್ಥರು 3 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆದಿದ್ದು, ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.