ನೆಲಮಂಗಲ: ಮನೆಗಳ್ಳತನ, ಸರಗಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ
Team Udayavani, Mar 12, 2022, 11:01 AM IST
ನೆಲಮಂಗಲ: ತಾಲೂಕು ಡಾಬಸ್ ಪೇಟೆಯ ಅಗಳಕುಪ್ಪೆ ಬಳಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ, ಕೊರಟೆಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾಮದ ನರೇಂದ್ರಬಾಬು ಬಿ.ಆರ್ (29) ಬಂಧಿತ ಆರೋಪಿ.
ಬಂಧಿತನಿಂದ ಸುಮಾರು 4.5 ಲಕ್ಷ ಮೌಲ್ಯದ 77 ಗ್ರಾಂ ಚಿನ್ನಾಭರಣ, 1/4 ಕೆ.ಜಿ ಬೆಳ್ಳಿ ಜಪ್ತಿ, 1 ಮನೆಗಳ್ಳತನ, 1 ಸರಗಳ್ಳತನ ಸೇರಿ ಎರಡು ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.
ಇದನ್ನೂ ಓದಿ:ಕೊಲೆ ಕೇಸ್ ನಲ್ಲಿ ಜೈಲಿಗೆ :ಖೈದಿಗಳಿಗೆ ಕುಸ್ತಿ ಪಟ್ಟು ಕಲಿಸುತ್ತಿರುವ ಸುಶೀಲ್ ಕುಮಾರ್
ಸಬ್ ಇನ್ಸ್ ಪೆಕ್ಟರ್ ಮುರಳಿಧರ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದು, ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.