ಉಪಗ್ರಹ ಆಧಾರಿತ ತರಬೇತಿಗೆ ಅಧಿಕಾರಿಗಳು ಚಕ್ಕರ್
Team Udayavani, Sep 25, 2019, 3:00 AM IST
ನೆಲಮಂಗಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಯೋಜನೆ ಹಾಗೂ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಕೇಂದ್ರ ಸರಕಾರದ ಸಬ್ ಕೀ ಯೋಜನಾ ಸಬ್ ಕೀ ವಿಕಾಸ್ ಎಂಬ ಉಪಗ್ರಹ ಆಧಾರಿತ ತರಬೇತಿ ಅಧಿಕಾರಿಗಳ ಬದಲು ಖಾಲಿ ಕುರ್ಚಿಗಳಿಗೆ ನೀಡಲಾಗಿದೆ.
ತಾಲೂಕಿನ 29 ಇಲಾಖೆ ಮುಖ್ಯಸ್ಥರು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯ ಮೈಸೂರಿನಿಂದ ನೇರವಾಗಿ ವೀಡಿಯೊ ಕಾನ್ಪರೆನ್ಸ್ ಮೂಲಕ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ತರಬೇತಿಯಲ್ಲಿ ಇಬ್ಬರು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದು, ಉಪಗ್ರಹ ಆಧಾರಿತ ತರಬೇತಿ ಖಾಲಿ ಕುರ್ಚಿಗಳಿಗೆ ಸೀಮಿತವಾಯಿತು.
ಅಧಿಕಾರಿಗಳ ಗೈರು: ಅಚ್ಚರಿ ಎಂಬಂತೆ ತರಬೇತಿಗೆ ಇಬ್ಬರು ಅಧಿಕಾರಿಗಳು ಪೂರ್ಣವಿದ್ದರೆ, 4 ಮಂದಿ ಅಧಿಕಾರಿಗಳು ಸಹಿ ಮಾಡಿ. ಅಧಿಕಾರಿಗಳಿಲ್ಲ ಎಂದು ವಾಪಸ್ ಹೋದರು. 25 ಇಲಾಖೆಯ ಮುಖ್ಯಸ್ಥರು ಹಾಗೂ ಅಧಿಕಾರಿಗಳು ತರಬೇತಿಗೆ ಗೈರಾಗಿದ್ದು, ಇದರಿಂದ ಖಾಲಿ ಕುರ್ಚಿಗಳು ಮಾತ್ರ ಪರದೆಯ ಮೂಲಕ ಉಪಗ್ರಹ ಆಧಾರಿತ ತರಬೇತಿಯನ್ನು ವೀಕ್ಷಣೆ ಮಾಡಿದಂತಿತ್ತು. ಲಕ್ಷಾಂತರ ಹಣ ಖರ್ಚುಮಾಡಿ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಅಧಿಕಾರಿಗಳು ಸ್ಪಂಧಿಸಲಿಲ್ಲ.
ಇಬ್ಬರ ಉಪಸ್ಥಿತಿ: ತರಬೇತಿಯಲ್ಲಿ ತಾಲೂಕಿನ ರೇಷ್ಮೆ ಇಲಾಖೆಯ ಶ್ರೀನಿವಾಸಮೂರ್ತಿ, ಪಶು ಸಂಗೋಪನೆ ಇಲಾಖೆಯ ಶಾರದಮ್ಮ ಪೂರ್ಣ ಭಾಗವಹಿಸಿದರೆ, ಮೀನುಗಾರಿಕೆ, ಬೆಸ್ಕಾಂ ಹಾಗೂ ಪುರಸಭೆ ಇಲಾಖೆಯ 4 ಸಿಬ್ಬಂದಿ ಸೇರಿ ಜನರು ಸಹಿ ಮಾಡಿ ಅರ್ಧಗಂಟೆ ಮಾತ್ರ ತರಬೇತಿಯಲ್ಲಿ ಭಾಗವಸಿದ್ದರು. 29 ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಸಗಿಬೇಕಾದ ತರಬೇತಿಯಲ್ಲಿ ಕೇವಲ 6 ಮಂದಿ ಅಧಿಕಾರಿಗಳು ಭಾಗಹಿಸಿದ್ದು, ತರಬೇತಿಗೆ ಅರ್ಥವಿಲ್ಲದಂತಾಯಿತು.
ಕೇಳೋರಿಲ್ಲ: ತಾಪಂ ಇಒ ಅವರಿಂದ ಸಬ್ ಕೀ ಯೋಜನಾ ಸಬ್ ಕೀ ವಿಕಾಸ್ ಎಂಬ ಉಪಗ್ರಹ ಆಧಾರಿತ ತರಬೇತಿ ಬಗ್ಗೆ ಜ್ಞಾಪನ ಪತ್ರವನ್ನು ನೀಡಲಾಗಿದ್ದು, ಕಂದಾಯ, ವಲಯ ಅರಣ್ಯ, ಆರೋಗ್ಯ, ತಾಪಂ, ತೋಟಗಾರಿಕೆ, ಕೃಷಿ, ನೀರಾವರಿ, ಶಿಶು ಹಾಗೂ ಮಹಿಳಾ ಸಬಲೀಕರಣ, ಶಿಕ್ಷಣ ಸೇರಿದಂತೆ 24 ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ತರಬೇತಿಗೆ ಆಗಮಿಸದಿದ್ದರೂ ಯಾರು ಕೇಳೋರಿಲ್ಲದಂತಾಗಿದೆ.
ಸಿಇಓ ಸಭೆ ಕಾರಣವೇ?: ತಾಪಂಯಲ್ಲಿ ಜಿಪಂ ಸಿಇಒ ನಾಗರಾಜು ಅವರು, ಪಿಡಿಓ ಹಾಗೂ ನರೇಗಾ ಯೋಜನೆಯ 8 ಇಲಾಖೆಗಳ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಎಲ್ಲಾ ಪಂಚಾಯತಿ ಪಿಡಿಓ ಹಾಗೂ 8 ಇಲಾಖೆ ಮುಖ್ಯಸ್ಥರು ಹಾಜರಿದ್ದರು. ಆದರೆ ಕೆಲವು ಅಧಿಕಾರಿಗಳು ಸಿಇಓ ಸಭೆ ಎಂದು ಹೇಳಿ ತರಬೇತಿಗೆ ಗೈರಾಗಿದ್ದಾರೆ, ತರಬೇತಿಯಲ್ಲಿ ಭಾಗವಸಲು ಸಿಇಓ ಸಭೆ ಕಾರಣವಲ್ಲ ಎಂದು ಸಿಇಓ ತಿಳಿಸಿದ್ದಾರೆ.
ಇಂದಾದರೂ ಬನ್ನಿ : ಪಿಡಿಒ ಹಾಗೂ ಅಧಿಕಾರಿಗಳಿಗೆ ಸೆ.25 ರಿಂದ ಸೆ.27ರವರಗೆ ಉಪಗ್ರಹ ಆಧಾರಿತ ತರಬೇತಿ ನಡೆಯಲಿದ್ದು ಈಗಲಾದರೂ, ತರಬೇತಿ ಪಡೆದು ಸಾರ್ವಜನಿಕರ ಯೋಜನೆಗಳು ಕ್ರಮಬದ್ದವಾಗಿ ತಲುಪಲಿ ಎಂಬುದು ಸಾರ್ವಜನಿಕರ ಆಶಯ. ಸಾರ್ವಜನಿಕರ ಅನಕೂಲಕ್ಕಾಗಿ ಅಧಿಕಾರಿಗಳಿಗೆ ತರಬೇತಿ ಉಪಗ್ರಹ ಆಧಾರಿತ ತರಬೇತಿ ನೀಡಲು ಸರ್ಕಾರ ಮುಂದಾದರೆ, ಮೇಲಾಧಿಕಾರಿಗಳು ಯಾರು ನೋಡುವುದಿಲ್ಲ, ಕೇಳುವುದಿಲ್ಲ ಎಂದು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್ರಿಯಿಸಿ ಉಪಗ್ರಹ ಆಧಾರಿತ ತರಬೇತಿಯ ಬಗ್ಗೆ ನನಗೆ ಮಾತಿಯಿಲ್ಲ. ಇದ್ದಿದ್ದರೆ, ಸಭೆ ಮುಂದೂಡಬಹುದಿತ್ತು. ಅಧಿಕಾರಿಗಳು ತರಬೇತಿಗೆ ಬರದಿರಲು ನಮ್ಮ ಸಭೆ ಕಾರಣವಲ್ಲ. ತರಬೇತಿಯ ಸ್ಥಳ ಪರಿಶೀಲಿಸಿ ಗೈರಾದವರಿಗೆ ನೋಟಿಸ್ ನೀಡುವಂತೆ ತಿಳಿಸಿದ್ದೇನೆ.
-ನಾಗರಾಜು, ಜಿಪಂ ಸಿಇಒ
* ಕೊಟ್ರೇಶ್. ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ