ಅಕಾಲಿಕ ಮಳೆಗೆ ಸಿಲುಕಿದ ಅನ್ನದಾತ‌ನ ಕಣ್ಣಿರು


Team Udayavani, Nov 16, 2021, 1:40 PM IST

ಅಕಾಲಿಕ ಮಳೆಗೆ ಸಿಲುಕಿದ ಅನ್ನದಾತ‌ನ ಕಣ್ಣಿರು

ಆನೇಕಲ್‌: ಕಳೆದ4-5 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದರೆ, ತರಕಾರಿ ಹೂವಿನ ಬೆಳೆಗೂ ಅಕಾಲಿಕ ಮಳೆ ಹೊಡೆತ ನೀಡಿದೆ.  ಈ ಮೂಲಕ ಅನ್ನದಾತನ ಬದುಕು ಸಂಕಷ್ಟಕ್ಕೆ ಸಿಲುಗಿದೆ.

ಕಟಾವು ಹಂತದಲ್ಲಿತ್ತು: ಮಳೆ ಇದೇ ರೀತಿ ಇನ್ನೂ ಒಂದು ವಾರ ಮುಂದುವರಿದರೆ ರೈತ ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕ ಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ 6060 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಸೂಕ್ತ ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರಿಂದ ರಾಗಿ ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿತ್ತು. ಇನ್ನೇನು ಒಂದು ತಿಂಗಳಲ್ಲಿ ರಾಗಿ ತೆನೆಕಟಾವು ಮಾಡುವು ಹಂತದಲ್ಲಿತ್ತು. ಅಷ್ಟರಲ್ಲಿ ಕಳೆದ 4-5 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಗಿ ತೆನೆ ನೆಲ ಕಚ್ಚಿದೆ.

ಮಳೆ ಮುಂದುವರಿದರೆ ನಷ್ಟ: ಒಂದಷ್ಟು ಕಡೆ ರಾಗಿ ಹೊಲ ಮಳೆ ನೀರಿನಲ್ಲಿ ಮುಳುಗಿದೆ.

ಮಳೆ ನಿಲ್ಲಲಿ: ತಾಲೂಕಿನ ಹಳೇಹಳ್ಳಿ, ಮುಗಳೂರು, ಸುಣವಾರ, ವಣಕನಹಳ್ಳಿ, ಸಮಂದೂರು ಭಾಗಗಲ್ಲಿ ರಾಗಿ ತೊಗರಿ, ಹಲಸಂದೆ ಟೊಮೇಟೋ ಬೆಳೆ ಮಳೆಯಿಂದ ಹಾನಿಯಾಗಿದೆ. ಅದರಲ್ಲೂ ಪ್ರಮುಖ ಬೆಳೆಯಾದ ರಾಗಿ ತೆನೆ ನೆಲ ಕಚ್ಚಿದೆ. ಸದ್ಯ ಮಳೆ ನಿಂತು ಬಿಸಿಲು ಬಂದರಷ್ಟೇ ರೈತನಿಗೆ ರಾಗಿ ಫ‌ಸಲು ಕೈ ಸೇರಲಿದೆ. ಇಲ್ಲದಿದ್ದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ.

ರಾಗಿ ಬೆಳೆಗೆ ಈಗಿನ ಮಳೆ ಮಾರಕವಾಗಿದೆ: ಲತಾ:

ಈಗ, ಸುರಿಯುತ್ತಿರುವ ಮಳೆ ಸದ್ಯದ ಬೇಸಾಯಕ್ಕೆ ಮಾರಕವಾಗಿದೆ.ಈ ರೀತಿ ಸುರಿಯುವ ಮಳೆ ಯಾವುದೇ ಬೆಳೆಗೂಸೂಕ್ತವಲ್ಲ.ಅದರಲ್ಲೂ ಮಳೆಯಾಶ್ರಿತಬೆಳೆಗೆ ಸದ್ಯದ ವಾತಾವರಣಮಾರಕವಾಗಲಿದೆ ಎಂದು ತಾಲೂಕು ಕೃಷಿ ಇಲಾಖೆ ತಾಂತ್ರಿಕಅಧಿಕಾರಿ ಸಿ.ಲತಾ ತಿಳಿಸಿದ್ದಾರೆ.

ತಾಲೂಕಿನಲ್ಲಿಈಸಾಲಿನಲ್ಲಿ 6060ಹೆಕ್ಟೇರ್‌ ನಲ್ಲಿ ರಾಗಿಬಿತ್ತನೆ ಮಾಡಿದ್ದರು. ಮಳೆಯಿಂದಾಗಿ ಸುಮಾರು 350ಹೆಕ್ಟೇರ್‌ನಲ್ಲಿನ ರಾಗಿ ತೆನೆ ನೆಲಕಚ್ಚಿದೆ ಎಂದು ವರದಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ನೆಲ ಕಚ್ಚಿದ ರಾಗಿ ತೆನೆ ಸಂಪೂರ್ಣಹಾಳಾಗಲಿದೆ ಎಂದರು. ಇಲ್ಲಿಯವರೆಗೂ ರಾಗಿ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ಯಾವುದೇ ರೈತರು ದೂರು ನೀಡಿಲ್ಲ. ನಮ್ಮ ಗಮನಕ್ಕೂಬಂದಿಲ್ಲ. ನಮಗೆ ಮಾಹಿತಿ ಸಿಕ್ಕಿರುವುದು ಮಾತ್ರ ಗಾಳಿಗೆ ರಾಗಿ ತೆನೆ ನೆಲಕಚ್ಚಿದೆ ಎಂಬುದು.  ಈಗಲುಬಿಸಿಲು ಬಂದರೆ ನೆಲ ಕಚ್ಚಿರುವ ತೆನೆ ರೈತರ ಕೈ ಸೇರಲಿದೆ ಎಂದು ತಿಳಿಸಿದರು. ಸದ್ಯ ಮಳೆಯಿಂದ ರಾಗಿಬೆಳೆ ಹಾನಿಯಾದರೆ ಅವರಿಗೆ ಪರಿಹಾರ ಕೊಡಬೇಕಾದರೆ ಹಾನಿಗೊಳಗಾದ ರೈತರು ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿರಬೇಕು. ಅದೂ ಒಟ್ಟು ಬೆಳೆಯ ಶೇ.33ಕ್ಕಿಂತ ಹೆಚ್ಚು ಹಾನಿಯಾಗಿರ ಬೇಕು. ಆಗ ಮಾತ್ರ ಬೆಳೆ ನಷ್ಟ  ಪರಿಹಾರ ಪಡೆಯಲು ಅರ್ಹರು ಎಂದು ಸಿ.ಲತಾ ತಿಳಿಸಿದರು.

ಮಳೆಯಿಂದ ಹೊಲದಲ್ಲಿ ಹೆಚ್ಚು ನೀರು ನಿಂತು ರಾಗಿ ಬೆಳೆ ಸಂಪೂರ್ಣ ಹಾಳಾಗಿದೆ.ಕಳೆದ 4 ತಿಂಗಳಿನಿಂದ ಬಿಸಿಲು ಮಳೆ ಎನ್ನದೆಕಷ್ಟ ಪಟ್ಟು ಬೆಳೆದ ಬೆಳೆಕೈ ಸೇರುವ ಸಮಯದಲ್ಲಿ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ನಮಗೆ ಸರ್ಕಾರ ಪರಿಹಾರ ನೀಡಿದರಷ್ಟೇ ನಮ್ಮ ಬದುಕು ಸಾಗಲಿದೆ. ಇಲ್ಲವಾದರೆ ದೇವರೇ ದಿಕ್ಕು. – ಮಹೇಶ್‌, ನಷ್ಟಕ್ಕೊಳಗಾದ ರೈತ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.