ಮಳೆನೀರು ಕೊಯ್ಲುನಿಂದ ಸಾವಯವ ಕೃಷಿ


Team Udayavani, Jun 11, 2019, 3:00 AM IST

maleneeru

ನೆಲಮಂಗಲ: ಜಗತ್ತಿನಲ್ಲಿ ನೀರಿನ ಬವಣೆ ಹೆಚ್ಚಾಗುವ ಜೊತೆ ಅಂತರ್ಜಲದ ಮಟ್ಟ ಸಂಪೂರ್ಣವಾಗಿ ಕುಸಿತ ಕಂಡಿದೆ. ಧರೆಗೆ ಬರುವ ಮಳೆಯ ನೀರನ್ನು ಸಂಗ್ರಹಿಸದೇ ಕೊಳವೆ ಬಾವಿ ತೆಗೆದು ಭೂಮಿಯ ಒಡಲನ್ನು ಖಾಲಿ ಮಾಡುತ್ತಿರುವ ಜನರ ಮಧ್ಯೆ ಮಳೆನೀರಿನಿಂದ ಸಾವಯವ ಕೃಷಿ ಮಾಡಿಕೊಂಡು, ನಿತ್ಯಜೀವನದಲ್ಲಿ ಮಳೆಯ ನೀರನ್ನು ಬಳಸುತ್ತಿರುವ ಅಪರೂಪದ ವ್ಯಕ್ತಿಯ ಪರಿಚಯ.

ಭೂಮಿಯ ಮೇಲೆ ಬಿದ್ದ ಅಪಾರ ಮಳೆಯನೀರು ಹಿಂಗುವುದಕ್ಕಿಂತ ಹರಿದು ಹೋಗುವುದು ಹೆಚ್ಚು, ಇದನ್ನು ಮನಗಂಡ ಕೆಲವರು ಮಳೆನೀರಿನ ಕೊಯ್ಲು ವಿಧಾನದಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಆಧುನಿಕ ಯುಗದಲ್ಲಿ ಮಳೆಯ ನೀರಿನ ಬಳಕೆಯಿಂದ ನಿತ್ಯಜೀವನ ನಡೆಸುತ್ತಿರುವವರನ್ನು ಕಾಣುವುದೇ ಅಪರೂಪವಾಗಿದೆ.

ತಾಲೂಕಿನ ಮರಸರಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ನಡೂರು ರವೀಂದ್ರನಾಥ್‌ ಶೆಟ್ಟಿ ಮೂಲತಃ ಹಾಸನದ ನಡೂರಿನವರು, ಶಿಕ್ಷಣ ಮುಗಿದ ನಂತರ ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ ನೌಕರರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ನಂತರ ತಂದೆಯ ಕೃಷಿ ಆಸಕ್ತಿಯನ್ನು ಮನಗಂಡು ನೆಲಮಂಗಲದ ಮರಸರಹಳ್ಳಿಯಲ್ಲಿ ಒಂದು ಕಾಲು ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಮುಂದಾಗಿ ಯಶಸ್ಸನ್ನು ಕಂಡಿದ್ದಾರೆ.

ಮಳೆನೀರು ಕೊಯ್ಲು: ಸಾವಯವ ಕೃಷಿ ಮಾಡಲು ಜಮೀನು ಖರೀದಿಸಿದ ನಂತರ ನೀರಿನ ಅನಿವಾರ್ಯತೆ ಎದುರಾಗುತ್ತದೆ. ಆ ವೇಳೆಯಲ್ಲಿ ಕೊಳವೆ ಬಾವಿಯ ಕಡೆ ಮುಖ ಮಾಡದೆ, ಒಂದು ಕಾಲು ಎಕರೆಯ ಸುತ್ತಲು ಕಾಲುವೆ ಹಾಗೂ ಬದುಗಳನ್ನು ನಿರ್ಮಾಣ ಮಾಡಿ ಮಳೆಯ ನೀರು ಹಿಂಗುವಂತೆ ಮಾಡಿದ್ದಾರೆ, ಅದಲ್ಲದೇ ಹೊಲದಲ್ಲಿ ಬೀಳುವ ನೀರು ಸಂಪೂರ್ಣವಾಗಿ ಸಂಗ್ರಹಣೆಯಾಗುವಂತೆ ಹಿಂಗುಗುಂಡಿ ನಿರ್ಮಾಣ ಮಾಡಿದ್ದಾರೆ. ಜಮೀನಿನಲ್ಲಿ ಮನೆ ಹಾಗೂ ತೋಟಕ್ಕೆ ಸಂಪೂರ್ಣ ಮಳೆನೀರು ಕೊಯ್ಲು ಯೋಜನೆ ಅಳವಡಿಸಿಕೊಂಡು, 14 ವರ್ಷದಿಂದ ಕೃಷಿ ಹಾಗೂ ಮನೆಯ ಬಳಕೆಗೆ ಮಳೆನೀರು ಬಳಸುತ್ತಿದ್ದಾರೆ.

ಸಾವಯವ ಕೃಷಿ: ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಾವಯವ ಆಹಾರ ಮುಖ್ಯ ಎಂದು ತಿಳಿದ ಎನ್‌ಆರ್‌ಶೆಟ್ಟಿ ತೋಟದಲ್ಲಿ ಒಂದು ಹನಿ ಹೊರಗಿನ ನೀರನ್ನು ಬಳಸದೇ ಮಳೆಯ ನೀರನ್ನು ಬಳಸಿಕೊಂಡು ಐವತ್ತಕ್ಕೂ ಅಧಿಕ ತಳಿಯ ಮರಗಳು ಹಾಗೂ ಮಾವು , ಸೀತಾಫ‌ಲ, ನೆಲ್ಲಿ, ಸಪೋಟ, ಸೀಬೆ, ನೇರಳೆ, ಹಲಸು ಸೇರಿದಂತೆ ಅನೇಕ ಹಣ್ಣಿನ ಮರಗಳನ್ನು ಬೆಳೆಯವುದರ ಜೊತೆಗೆ ಬಯಲು ಸೀಮೆ ಭೂಮಿಯ ಲಕ್ಷಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ತೋಟದ ಸುತ್ತಲು ಕಡಿಮೆ ಖರ್ಚಿನಲ್ಲಿ ಆಗ್ರೋ ಫಾರೆಸ್ಟ್‌ ಮಾದರಿಯಲ್ಲಿ ತೇಗ,

ಹೊನ್ನೆ, ಬೀಟೆ, ಬಿದಿರು, ಸಿಲ್ವರ್‌, ಎಬೋನಿ, ಮಹಾಗನಿ ಸೇರಿದಂತೆ ಹತ್ತು ಹಲವು ಮರಗಳನ್ನು ಬೆಳೆಯುವುದಲ್ಲದೆ ಒಂದು ಕಾಲು ಎಕರೆ ಜಾಗವನ್ನು ಮಲೆನಾಡಿನ ಅರಣ್ಯದಂತೆ ಮಾಡಿದ್ದಾರೆ. ಮನೆಗೆ ಬೇಕಾದ ಎಲ್ಲಾ ಅಗತ್ಯ ತರಕಾರಿಗಳನ್ನು ಸಂಪೂರ್ಣ ಸಾವಯವ ಹಾಗೂ ಮಳೆನೀರು ಕೊಯ್ಲು ತೊಟ್ಟಿನಿಂದ ನೀರನ್ನು ಹಾಯಿಸಿ ಗ್ರಾಮೀಣ ಪ್ರದೇಶದ ರೈತರಿಗೆ ವೈಜ್ಞಾನಿಕ ಕೃಷಿ ತಜ್ಞರಾಗಿದ್ದಾರೆ.

20 ಸಾವಿರ ಲೀಟರ್‌ ಸಂಗ್ರಹ: ನೆಲಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುವ ಪ್ರಮಾಣವನ್ನು ಮನಗಂಡು ಅದರ ಉಪಯೋಗ ಪಡೆಯಲು ಮುಂದಾದೆ, ಮರಸರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ 800 ರಿಂದ 900 ಮಿ.ಮೀ ಮಳೆಯಾಗುವುದರಿಂದ 240 ಅಡಿ ವಿಸ್ತೀರ್ಣದಲ್ಲಿ 20 ಸಾವಿರ ಲೀಟರ್‌ ನೀರು ಸಂಗ್ರಹವಾಗುತ್ತದೆ. ಈ ನೀರು 6 ರಿಂದ 7 ತಿಂಗಳು ಬಳಸುತ್ತೇವೆ. ಈ ಭಾಗದಲ್ಲಿ ನವೆಂಬರ್‌, ಡಿಸೆಂಬರ್‌ ಸಮಯದಲ್ಲಿ ಮಳೆಯಾಗುವುದರಿಂದ ವರ್ಷ ಪೂರ್ಣ ಮಳೆಯ ನೀರಿನ ಬಳಕೆಮಾಡಲು ಸಹಕಾರಿಯಾಗಿದೆ ಎಂದು ಎನ್‌.ಆರ್‌.ಶೆಟ್ಟಿ ಉದಯವಾಣಿಗೆ ತಿಳಿಸಿದರು.

ಸಣ್ಣ ಹಿಡುವಳಿದಾರಿಗೆ ಅನುಕೂಲ: ನನ್ನ ಬಳಿ ಕಡಿಮೆ ಜಮೀನಿದೆ ನಾನು ವ್ಯವಸಾಯ ಮಾಡಲು ಸಾಧ್ಯವಿಲ್ಲ ಕೊಳವೆ ಬಾವಿ ತೆಗೆಸಲು ಹಣವಿಲ್ಲ ಎನ್ನುವ ರೈತರಿಗೆ ಎನ್‌.ಆರ್‌.ಶೆಟ್ಟಿಯವರು ಮಾದರಿ, ಒಂದು ಕಾಲು ಎಕರೆಯಲ್ಲಿ ಮಾಡಿರುವ ಸಾವಯವ ಕೃಷಿ ತೋಟ ಹಾಗೂ ಮಳೆನೀರು ಕೊಯ್ಲು ವಿಧಾನ ಸಣ್ಣ ಹಿಡುವಳಿದಾರ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ.

14 ವರ್ಷ ಜೀವನ: ತಾಲೂಕಿನ ಮರಸರಹಳ್ಳಿ ಗ್ರಾಮಕ್ಕೆ ಬಂದ ಎನ್‌.ಆರ್‌.ಶೆಟ್ಟಿ ಹಾಗೂ ಪತ್ನಿ ಸರಸ್ವತಿ 14 ವರ್ಷಗಳಿಂದ ಗ್ರಾಪಂನಿಂದ ಬರುವ ಕುಡಿಯುವ ನೀರು ಅಥವಾ ಕೊಳವೆ ಬಾವಿಯ ನೀರನ್ನು ಬಳಸದೇ 15 ಅಡಿ ಅಗಲ, 30 ಅಡಿ ಉದ್ದವಿರುವ ಹಂಚಿನ ಮನೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯಿಂದ ಸಂಪಿನಲ್ಲಿ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ಕುಡಿಯಲು, ಅಡುಗೆಗೆ ಹಾಗೂ ದಿನನಿತ್ಯ ಚಟುವಟಿಕೆಗಳಲ್ಲಿ ಮಳೆಯ ನೀರನ್ನೇ ಬಳಸುತ್ತಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ: ಎನ್‌.ಆರ್‌.ಶೆಟ್ಟಿ ಬೆಂಗಳೂರಿನಲ್ಲಿ ಸಹಜ ಸಮೃದ್ಧ ಟ್ರಸ್ಟ್‌ ರಚಿಸಿಕೊಂಡು ಕಳೆದ ಹದಿನೈದು ವರ್ಷಗಳಿಂದ ಸಾವಯುವ ಕೂಟ ರಚಿಸಿದ್ದಾರೆ. ಈ ಕೂಟಕ್ಕೆ 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ.

ಮಡಿಕೆಯ ನೀರು: 14 ವರ್ಷಗಳ ಹಿಂದೆಯೇ ಅಗೋಫಾರೆಸ್ಟ್‌ ಮಾಡಿ ಬೇಸಿಗೆಯಲ್ಲಿ ಮರಗಳಿಗೆ ನೀರು ಒದಗಿಸಲು ಮರದ ಬುಡಕ್ಕೆ ಮಡಿಕೆಯನ್ನು ಹೂದಿಗಿಸಿ ನೀರನ್ನು ಹಾಯಿಸಿ ಅಂದಿನ ಕಾಲದಲ್ಲೇ ಇಂದಿನ ಇಸೇಲ್‌ ಮಾದರಿ ಕೃಷಿಯನ್ನು ಅಳವಡಿಸಿಕೊಂಡ ಸಸಿಗಳನ್ನು ಮರಗಳಾಗಿ ಮಾಡಿರುವ ಎನ್‌.ಆರ್‌.ಶೆಟ್ಟಿಯವರ ಪರಿಶ್ರಮ ನಿಜಕ್ಕೂ ಮಾದರಿ.

* ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.