ಸುಂಟರ ಗಾಳಿಗೆ ಹಾರಿದ ಶೀಟ್ಗಳು
Team Udayavani, Mar 1, 2019, 7:13 AM IST
ದೇವನಹಳ್ಳಿ: ಸುಂಟರ ಗಾಳಿಯ ರಭಸಕ್ಕೆ ರೇಷ್ಮೆ ಹುಳು ಸಾಕಾಣಿಕೆ ಹೊಸದಾಗಿ ನಿರ್ಮಿಸಿದ್ಧ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ್ಧ ಶೀಟ್ ಗಳು ಗಾಳಿಗೆ ಹಾರಿದ ಘಟನೆ ತಾಲೂಕಿನ ಮೀಸಗಾನ ಹಳ್ಳಿಯಲ್ಲಿ ನಡೆದಿದೆ.
ಮೀಸಗಾನ ಹಳ್ಳಿ ಸರ್ವೆ ನಂಬರರ್ನಲ್ಲಿರುವ ಕೊಯಿರಾ ಗ್ರಾಮದ ನಿವಾಸಿ ಚಿಕ್ಕೇಗೌಡ ಅವರ ಜಮೀನಿನಲ್ಲಿ ರೇಷ್ಮೆ ಹುಳು ಸಾಕಾಣಿಕೆಗಾಗಿ ನಿರ್ಮಿಸಿದ್ದ ಹೊಸ ಕಟ್ಟಡ ಚಾವಣಿಯಲ್ಲಿ ಅಳವಡಿಸಿದ ಶೀಟ್ ಗಳು ಗಾಳಿಗೆ ಹಾರಿ ಹೋಗಿರುವುದರಿಂದ ಲಕ್ಷಾಂತರ ರೂ ನಷ್ಟವಾಗಿದೆ.
ರೈತ ಚಿಕ್ಕೇ ಗೌಡ ಮಾತನಾಡಿ ರೈತರು ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿಯಲ್ಲಿ ಸಾಕಷ್ಟು ಸಮಸ್ಯೆ ಗಳಿಗೆ ಸಿಲುಕಿದ್ದಾರೆ. ಆ ಸಮಸ್ಯೆ ಯ ಜೊತೆಯಲ್ಲಿ ಇದೀಗ ಪ್ರಕೃತಿ ವಿಕೋಪಕ್ಕೆ ರೈತ ತತ್ತರಿಸಿ ಹೋಗಿದ್ದು ವ್ಯವಸಾಯ ಸಾಕಾಗಿ ಹೋಗುವಂತೆ ಆಗಿದೆ. ಸುಂಟರ ಗಾಳಿಯ ರಭಸಕ್ಕೆ ಮೇಲ್ಚಾವಣಿ ಸಿಮೆಂಟ್ ಶೀಟ್ ಗಳು ಹಾರಿ ಹೋಗಿದೆ.
ಅಂರ್ತಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆಯ ಒಂದಾದರೆ ಮತ್ತೂಂದು ಸಮಸ್ಯೆ ಗಣಿ ಧೂಳು ಹೆಚ್ಚಾಗುತ್ತಿದೆ. ರೈತ ಯಾವ ರೀತಿ ಬೆಳೆಗಳನ್ನು ಬೆಳೆದು ಬದುಕಬೇಕು. ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಪರಿಹಾರ ಒದಗಿಸಬೇಕು. ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ