ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ದೂರಿ ತೆರೆ

ರಾಜ್ಯಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲ ಗೆಹಲೋತ್‌ರಿಂದ ಪ್ರಶಸ್ತಿ ಪ್ರದಾನ

Team Udayavani, Nov 15, 2021, 11:34 AM IST

ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ದೂರಿ ತೆರೆ

ಬೆಂಗಳೂರು: ನಾಲ್ಕು ದಿನಗಳ ಕಾಲ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನಡೆದ ಕೃಷಿ ಮೇಳ-2021ಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು. ಸಮಾರೋಪದಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಪ್ರಶಸ್ತಿ ಪ್ರದಾನ ಮಾಡಿ ಕೃಷಿ ಮಾಡಲು ಹುರಿದುಂಬಿಸಿದರು.

ಇನ್ನು ಭಾನುವಾರವಾಗಿದ್ದರಿಂದ ಮತ್ತು ಮಳೆ ಬಿಡುವು ನೀಡಿದ್ದರಿಂದ ಲಕ್ಷಾಂತರ ಜನರು ಕೃಷಿ ಮೇಳದ ಅನುಭವ ಪಡೆದರು. ಕೃಷಿ ಉಪಕರಣಗಳು, ನೂತನ ತಳಿಗಳು, ಆಧುನಿಕ ತಂತ್ರಜ್ಞಾನ, ಬಿತ್ತನೆ-ಬೀಜ, ತಾರಸಿ ಕೃಷಿ ಸೇರಿದಂತೆ ನೂತನ ಕೃಷಿ ಮಾದರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರತಿ ಮಳಿಗೆಗಳ ಮುಂದೆ ಜನರು ಕಿಕ್ಕಿರಿದು ತುಂಬಿದ್ದರು.

ಇದನ್ನೂ ಓದಿ:- ಮಕ್ಕಳ ಮನಸ್ಸು ನಿಷ್ಕಲ್ಮಷ: ಸಿದ್ಧಲಿಂಗ ಸ್ವಾಮೀಜಿ

ಅದೇ ರೀತಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಬೆಳೆದಿರುವ ರಾಗಿ, ಭತ್ತ, ಜೋಳ, ನವಣೆ, ಸಾಮೆ, ಆರ್ಕ, ಬರಗು, ಸುಗಂಧ ದ್ರವ್ಯಗಳ ಗಿಡಗಳು, ಔಷಧೀಯ ಸಸ್ಯಗಳು, ಹೈಡ್ರೋಫೋನಿಕ್ಸ್‌ ತಂತ್ರಜ್ಞಾನ, ಇಸ್ರೇಲ್‌ ಕೃಷಿ ಪದ್ಧತಿ, ಜೇನು ಕೃಷಿ ಸೇರಿದಂತೆ ಎಲ್ಲೆಡೆಯೂ ಜನ ಸಾಗರವೇ ತುಂಬಿತ್ತು. ಎಳೆ ಬಿಸಿಲು ಮತ್ತು ತುಸು ತಂಗಾಳಿ ಬೀಸುತ್ತಿದ್ದರಿಂದ ಜನರು ಆರಾಮಾಗಿ ಮೇಳವನ್ನು ಸಖತ್‌ ಎಂಜಾಯ್‌ ಮಾಡಿದರು.

ಜಾತ್ರೆಯಂತಾದ ಮೇಳ: ಮೊದಲ ಮೂರು ದಿನ ಜಿಟಿ ಜಿಟಿ ಮಳೆಯಲ್ಲೇ ನಡೆದ ಮೇಳ, ಕೊನೆಯ ದಿನವಾದ ಭಾನುವಾರ ಮಾತ್ರ ಜಾತ್ರೆಯ ಕಳೆ ಬಂದಿತ್ತು. ಮೇಳದ ಪ್ರತಿ ಬೀದಿಗಳಲ್ಲಿ ಕಡಲೆಪುರಿ, ಆಟಿಕೆಗಳು, ವಸ್ತ್ರಗಳು, ಬ್ಯಾಗ್‌ಗಳು, ಮನೆಬಳಕೆ ವಸ್ತುಗಳು, ಬಲೂನುಗಳು, ಭಜ್ಜಿ-ಬೋಂಡ, ಸ್ವೀಟ್‌ ಕಾರ್ನ್ ಸೇರಿದಂತೆ ಹತ್ತಾರು ಬಗೆಯ ತಿಂಡಿ-ತಿನಿಸುಗಳ ಮಾರಾಟವಾಗುತ್ತಿತ್ತು. ನಗರದ ಜನತೆಗೆ ಒಂದು ರೀತಿಯಲ್ಲಿ ಜಾತ್ರೆಯ ಅನುಭವ ಪಡೆದರು.

ರಾಜ್ಯಪಾಲರ ಭೇಟಿ - ಬೆಳೆಗಳ ವೀಕ್ಷಣೆ ನಿಷೇಧ: ಮಧ್ಯಾಹ್ನ 2.30ಕ್ಕೆ ರಾಜ್ಯಪಾಲರ ಕಾರ್ಯಕ್ರಮದ ಸಮಯ ನಿಗದಿಯಾಗಿತ್ತು. ಭೇಟಿ ವೇಳೆ ಈ ಬಾರಿ ಬಿಡುಗಡೆ ಮಾಡಿರುವ ಹತ್ತು ನೂತನ ತಳಿಗಳ ಬೆಳೆಯನ್ನು ಕೂಡ ರಾಜ್ಯಪಾಲರು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶಿಷ್ಟಾಚಾರ ಪಾಲನೆ ಮಾಡುವ ಉದ್ದೇಶದಿಂದ ಭದ್ರತಾ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆಯಿಂದಲೇ ತೋಟದ ಬೆಳೆಗಳ ವೀಕ್ಷಣೆಗೆ ಪ್ರವೇಶ ನಿಷೇಧಿಸಿದರು. ಸುಮಾರು ಎರಡು ಗಂಟೆಗಳ ಸಮಯ ಸಾರ್ವಜನಿಕರ ವೀಕ್ಷಣೆಗೆ ನಿಷೇಧ ಹೇರಿದ್ದರಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

8 ಲಕ ಜನ, ವರ್ಚುಯಲ್‌ನಲ್ಲಿ 38 ಲಕ್ಷ ಜನ ಭೇಟಿ:- 

ಮೇಳಕ್ಕೆ ಭಾನುವಾರ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2.64 ಲಕ್ಷ ಜನರು ಭೌತಿಕವಾಗಿ ಮತ್ತು 18.29 ಲಕ್ಷ ಜನರು ವರ್ಚುಯಲ್‌ ವೇದಿಕೆಯಲ್ಲಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಭೌತಿಕವಾಗಿ 8 ಲಕ್ಷ ಹಾಗೂ ವರ್ಚುಯಲ್‌ನಲ್ಲಿ 38.11 ಲಕ್ಷ ಮಂದಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಕೃಷಿ ವಿಶ್ವವಿದ್ಯಾಲಯದ ನಿರೀಕ್ಷೆಗೂ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನರು ಮೇಳವನ್ನು ವೀಕ್ಷಣೆ ಮಾಡಿದ್ದಾರೆ.

ಮೊದಲನೇ ದಿನ ಭೌತಿಕವಾಗಿ 60 ಸಾವಿರ ಮತ್ತು ಆನ್‌ಲೈನ್‌ನಲ್ಲಿ 1.55 ಸಾವಿರ, 2ನೇ ದಿನ ಮೇಳಕ್ಕೆ 1.76 ಲಕ್ಷ ಭೇಟಿ, ಆನ್‌ಲೈನ್‌ನಲ್ಲಿ 5.2 ಲಕ್ಷ, 3ನೇ ದಿನ 3 ಲಕ್ಷ ಮತ್ತು ಆನ್‌ಲೈನ್‌ನಲ್ಲಿ 12.96 ಲಕ್ಷ ಜನ ಭೇಟಿ ನೀಡಿದ್ದರು. ಕಳೆದ ವರ್ಷ ವರ್ಚುವಲ್‌ ವೇದಿಕೆಯಲ್ಲಿ ಮೇಳ ನಡೆಸಲಾಗಿತ್ತು. ಆನ್‌ಲೈನ್‌ನಲ್ಲಿ ಕೇವಲ 1.25 ಲಕ್ಷ ಮಂದಿಯಷ್ಟೇ ಭಾಗವಹಿಸಿದ್ದರು. ಇನ್ನು 2019ರಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ 14 ಲಕ್ಷ ಭೇಟಿ ನೀಡಿದ್ದರು.

ಟಾಪ್ ನ್ಯೂಸ್

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.