2500 ಮರಗಳ ಮಾರಣ ಹೋಮ


Team Udayavani, Jun 13, 2019, 3:00 AM IST

2500maraga

ಆನೇಕಲ್‌: 9 ವರ್ಷಗಳ ಹಿಂದೆ ಇಲ್ಲೊಂದು ಕೆರೆ ಇತ್ತು. ನೀರು ಸಂಗ್ರಹವಾಗದೆ ಬೀಡು ಬಿಟ್ಟಿತ್ತು. ಜನಪ್ರತಿನಿಧಿ ಹಾಗೂ ಅರಣ್ಯ ಅಧಿಕಾರಿಯೊಬ್ಬರ ಇಚ್ಛಾಶಕ್ತಿಯಿಂದಾಗಿ ಕೆರೆಯ 49 ಎಕರೆ ಜಾಗ ಚಿಕ್ಕ ಕಾಡಾಗಿ ಬೆಳೆದಿತ್ತು. ಆದರೆ ಆ ಕಾಡು ಈಗ ಆಟದ ಮೈದಾನವಾಗಿ ಪರಿವರ್ತನೆಯಾಗಿದೆ. ಈ ಕಾಡು ನಾಶವಾಗಿದ್ದು ವಿಶ್ವ ಪರಿಸರ ದಿನಾಚರಣೆ ತಿಂಗಳಲ್ಲಿ ಎಂಬುದು ದುರಂತದ ಸಂಗತಿಯಾಗಿದೆ.

ಕೆರೆ ಕಾಡಾಗಿದ್ದು ಹೇಗೆ?: ತಾಲೂಕಿನ ಬ್ಯಾಗಡದೇನ ಹಳ್ಳಿಯಲ್ಲಿನ ಕೆರೆ ಹತ್ತಾರು ವರ್ಷಗಳಿಂದ ನೀರು ಸಂಗ್ರಹವಾಗದೇ ಬರಿದಾಗಿತ್ತು. 9 ವರ್ಷಗಳ ಹಿಂದೆ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಂಕರ, ಒತ್ತುವರಿ ಭೂತಕ್ಕೆ ಕೆರೆಯನ್ನು ಬಲಿಕೊಡಬಾರದೆಂಬ ಉದ್ದೇಶದಿಂದ ವಿಶೇಷ ಆಸಕ್ತಿ ವಹಿಸಿದ್ದರು. ಬಳಿಕ ಅರಣ್ಯ ಇಲಾಖೆ ಸಹಾಯದಿಂದ ಕೆರೆಯಲ್ಲಿ ಗಿಡ ನೆಟ್ಟು, ಅವುಗಳನ್ನು ಪೋಷಿಸಿದ್ದರು.

ಗಿಡ ನೆಡುವ ಆಂದೋಲನ: ಪಂಚಾಯಿತಿಯಲ್ಲಿ ಗುಂಡಿ ಅಗೆಯುವುದಕ್ಕೆ ಇದ್ದ ಅಲ್ಪ ಪ್ರಮಾಣದ ಹಣದಲ್ಲಿ ಸುಮಾರು 6,400 ಗುಂಡಿಗಳನ್ನು ಅಗೆದು ಒಂದೇ ವಾರದಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ನೆರಳೆ, ಬಿದಿರು, ಮತ್ತಿ ಸಸಿಗಳನ್ನು ನೆಡಿಸಿದ್ದರು. ಗಿಡಗಳಿಗೆ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಕೆರೆ ಸುತ್ತಲು ಬೇಲಿ ಸಹ ಹಾಕಿಸಲಾಗಿತ್ತು. ಆಗಿನ ವಲಯ ಅರಣ್ಯಾಧಿಕಾರಿ ಬೈಲಪ್ಪ ಅವರ ಶ್ರಮ, ಸಹಕಾರವನ್ನು ಜನರು ಈಗಲೂ ಸ್ಮರಿಸುತ್ತಾರೆ.

ಗಿಡಗಳಿಗಾಗಿ ಟ್ರಾಕ್ಟರ್‌ ಖರೀದಿ: ಕೆರೆಯಲ್ಲಿ ನೆಟ್ಟ ಗಿಡಗಳು ಒಣಗಿಹೋಗಬಾರದೆಂಬ ಉದ್ದೇಶದಿಂದ ಅಧ್ಯಕ್ಷ ಶಂಕರ್‌, ಸ್ವಂತ ಹಣದಿಂದಲೇ ಟ್ರ್ಯಾಕ್ಟರ್‌ ಖರೀದಿಸಿ ಗಿಡಗಳಿಗೆ ಅವಶ್ಯವಿರುವ ನೀರು ಉಣಿಸುವ ಮೂಲಕ ಪೋಷಣೆ ಮಾಡಿದರು. ಪಕ್ಕದ ಅಗ್ರಹಾರದ ಕೆರೆಯಲ್ಲೂ ನೆಟ್ಟಿದ್ದ ಸಾವಿರಾರು ಮರಗಳಿಗೂ ಅವರೇ ನೀರುಣಿಸುವ ಹೊಣೆ ಹೊತ್ತರು. ಸತತ ಎರಡು ವರ್ಷಗಳ ಕಾಲ ಗಿಡಗಳಿಗೆ ನೀರು ಹಾಕಿ ಕಾಳಜಿಯಿಂದ ನೋಡಿಕೊಳ್ಳಲಾಗಿತ್ತು.

ಪಕ್ಷಿಗಳ ಆಶ್ರಯ ತಾಣ ಮೈದಾನ: ಸುಮಾರು 6400 ಸಸಿಗಳಲ್ಲಿ ಶೇ.90ರಷ್ಟು ಮರಗಳು ಬೆಳೆದು ನಿಂತಿದ್ದವು. ಹೊಂಗೆ, ನೇರಳೆ, ಬಿದಿರು, ಮತ್ತಿ ಹೀಗೆ ಹಲವು ಜಾತಿ ಮರಗಳ ಸಮ್ಮಿಲನದ ಕಾಡಾಗಿ ಬೆಳೆದಿದ್ದ ಬ್ಯಾಗಡದೇನಹಳ್ಳಿ ಕೆರೆ ರಾತ್ರೋ ರಾತ್ರಿ ಆಟದ ಮೈದಾನವಾಗಿ ಬಿಟ್ಟಿದೆ. 9 ವರ್ಷಗಳಿಂದ ಹಿಂದೆ ನೆಟ್ಟಿದ್ದ ಮರಗಳನ್ನು ಬುಡ ಸಮೇತ ಇಲ್ಲವಾಗಿಸಿದ್ದಾರೆ. ಅಲ್ಲಿ ಮರಗಳು ಇತ್ತು, ಇದ್ದ ನೆರೆಳೆ ಮರಗಳಲ್ಲಿ ಹಣ್ಣು ಇತ್ತು ಎಂಬುದಕ್ಕೆ ಇನ್ನೂ ಉಳಿದಿರುವ ಮರಗಳೇ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಅದೆಷ್ಟು ಪಕ್ಷಿಗಳು ತಮ್ಮ ಆಶ್ರಯ ತಾಣ ನಿರ್ಮಿಸಿಕೊಂಡಿದ್ದವೋ, ಈಗ ತಮ್ಮ ಗೂಡು ಕಳೆದುಕೊಂಡು ಅನಾಥರಾಗಿವೆ.

ಇಟ್ಟಿಗೆ ಕಾರ್ಖಾನೆ ಮಾಫಿಯಾ: ಕೆರೆಯಲ್ಲಿದ್ದ ಮರಗಳನ್ನು ಕಡಿದದ್ದು, ಯಾರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲದೆ ಇಷ್ಟು ದೊಡ್ಡ ಪ್ರಮಾಣದ ಮರಗಳ ಮಾರಣ ಹೋಮ ನಡೆಸಿದ್ದರ ಹಿಂದೆ ದೊಡ್ಡ ರಾಜಕಾರಣಿಗಳ ಪ್ರಭಾವವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ಎರಡು ತಿಂಗಳಿನಿಂದ ರಾತ್ರೋ ರಾತ್ರಿ ಈ ಕೃತ್ಯ ಎಸಗಿದ್ದಾರೆ. ಕೆರೆಯಲ್ಲಿ ಮಣ್ಣು ತೆಗೆಯುವ ನೆಪದಲ್ಲಿ ಸುಮಾರು 3000 ಸಾವಿರ ಮರಗಳನ್ನು ಕಾಣದಂತೆ ಮಾಡಿದ್ದಾರೆ.

ಶಿಕ್ಷೆಗೆ ಆಗ್ರಹ: ಕೆರೆಯಲ್ಲಿದ್ದ ಮರಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಆಗ್ರಹ ಪಡಿಸಿದೆ. ಜೂ.5ರಂದು ವಿಶ್ವ ಪರಿಸರ ದಿನಾಚರಣೆ ದೇಶ ಸೇರಿದಂತೆ ಜಗತ್ತು ಪರಿಸರ ಕಾಳಜಿ ತೋರುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಗಿಡ ನೆಡುವ ಆಂದೋಲ ನಡೆಯುತ್ತಿದೆ. ಆದರೆ ಸುಮಾರು 3,000ಕ್ಕೂ ಹೆಚ್ಚು ಮರಗಳು ಕಡಿದು ಬುಡ ಸಮೇತ ಮುಚ್ಚಿಡುವ ಕೃತ್ಯ ನಡೆದಿದ್ದು, ನಾಚಿಕೆಗೇಡಿನ ಸಂಗತಿ.

ಇಂತಹ ತಪ್ಪು ಮಾಡಿರುವ ವ್ಯಕ್ತಿ ವಿರುದ್ಧ ಕೂಡಲೆ ಕಾನೂನು ಕ್ರಮ ಜರುಗಿಸ ಬೇಕು ಎಂದು ಸಮಿತಿ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ. ಗೌಡ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಸಾವಿರಾರು ಗಿಡ ನಾಶ ಮಾಡಿರುವವರ ವಿರುದ್ಧ ಕೇವಲ ಎಫ್ಐ ಆರ್‌ ಹಾಕಿದರೆ ಸಾಲದು, ನ್ಯಾಯಾಂಗ ಬಂಧನಕ್ಕೆ ಕಳುಹಿಸ ಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲದಲ್ಲಿ ಆಕ್ರೋಶ: ಪರಿಸರ ಸಂರಕ್ಷಕಿ ಮಧುಶ್ರೀ ಸುದ್ದಿ ತಿಳಿದು ಕೆರೆ ಅಂಗಳಕ್ಕೆ ಭೇಟಿ ನೀಡಿ, ವಾಸ್ತವವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಲೈವ್‌ ಮಾಡಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜತೆಗೆ ಪರಿಸರ ಕಾಳಜಿ ತೋರಿದ್ದು, ತಪ್ಪಿತಸ್ಥರ ವಿರುದ್ಧ ಹೋರಾಟಕ್ಕೂ ಮುಂದಾಗಿದ್ದಾರೆ. ಈಗಾಗಲೆ ಸಾಮಾಜಿಕ ಜಾಲ ತಾಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಹೋರಾಟವನ್ನು ಬೆಂಬಲಿಸಿದ್ದಾರೆ.

ಜೆಸಿಬಿ ಯಂತ್ರ ವಶ: ಸ್ಥಳೀಯ ಸುನ್ನಪ್ಪ ಎಂಬುವರು ಕೆರೆಯಲ್ಲಿನ ಮರಗಳ ನಾಪತ್ತೆ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಿದ್ದಂತೆ ಆನೇಕಲ್‌ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ರಂಗಸ್ವಾಮಿ ಸ್ಥಳಕ್ಕೆ ಧಾವಿಸಿ, ಅಲ್ಲಿದ್ದ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಂತ್ರ ಹಾಗೂ ಕಾರ್ಖಾನೆ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲು ಮೀನಾಮೇಶ ಏಣಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ಒತ್ತಡಗಳು ಕಾರಣ ಎಂಬ ಮಾತುಗಳು ಕೇಳುತ್ತಿವೆ. ಈ ಸುದ್ದಿ ತಿಳಿದ ಮಾಜಿ ಅಧ್ಯಕ್ಷ ಶಂಕರ್‌ ಅವರು ಖುದ್ದು ಅರಣ್ಯ ಕಚೇರಿಗೆ ಭೇಟಿ ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

* ಮಂಜುನಾಥ ಎನ್‌ ಬನ್ನೇರುಘಟ್ಟ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.