ಜನತಾ ಕರ್ಫ್ಯೂ ನಡುವೆ ಯೋಗದಾನ
Team Udayavani, May 7, 2021, 3:04 PM IST
ದೇವನಹಳ್ಳಿ: ಪಟ್ಟಣದ ರಾಣಿ ಸರ್ಕಲ್ನಬಳಿಯ ಮುತ್ತಪ್ಪರೈ ಲೇಔಟಿನಲ್ಲಿ ದೇವನಹಳ್ಳಿ ಪಟ್ಟಣದ ಯುವಕರ ತಂಡವೊಂದುಪಟ್ಟಣದಲ್ಲಿ ಬೀದಿ ಅಲೆಯುವ ಭಿಕ್ಷುಕರನನ್ನು ಕರೆತಂದು ಅವರಿಗೆ ಕ್ಷೌರ ಮಾಡಿಸಿ,ಉಡುಪು ನೀಡಿ ಹೊಸ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ.
ಪಟ್ಟಣದ ವಿವಿದ ಕಡೆಗಳ ಬಸ್ಸ್ಟಾಂಡ್,ಜಗುಲಿ, ದೇವಾಲಯ, ರಸ್ತೆ ಅಕ್ಕ ಪಕ್ಕಹಾಗೂ ಇತರೆ ಜಾಗಗಳಲ್ಲಿ ಹೊಟ್ಟೆಗೆ, ಬಟ್ಟೆಗೆಇಲ್ಲದೆ ನರಳುತ್ತಿರುವ ಭಿಕ್ಷುಕರನ್ನು ತಮ್ಮಸ್ವಂತ ವಾಹನದಲ್ಲಿ ಒಂದು ಜಾಗದಲ್ಲಿ ಕರೆತಂದು ಅವರಿಗೆ ಸೇವೆ ಸಲ್ಲಿಸಿ, ಅವರ ತಲೆಯುದ್ದಕ್ಕೂ ಬೆಳೆದ ಕೂದಲು ತೆಗೆದು, ಸ್ನಾನಮಾಡಿಸಿ, ಹೊಸ ಬಟ್ಟೆ ನೀಡಿ, ಊಟಕೊಟ್ಟು ಆಶ್ರಮಕ್ಕೆ ಸೇರಿಸುವ ಪ್ರಯತ್ನದೇವನಹಳ್ಳಿ ಯುವಕರ ತಂಡ ಮಾಡಿದೆ.
ಯುವಕ ಸಂತೋಷ್ ಮಾತನಾಡಿ,ಸುಮಾರು 50 ಜನ ಯುವಕರು ತಂಡೋಪತಂಡವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಲಾಕ್ಡೌನ್ ಸಂದರ್ಭ ದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ಸಿಗುತ್ತಿಲ್ಲ, ಆಕ್ಸಿಜನ್ ಕೊರತೆ ಆಗುತ್ತಿದೆ.ಅದೇ ರೀತಿ, ಫುಟ್ಬಾತ್ನಲ್ಲಿ ಬಿಕ್ಷುಕರುಯಾರಿದ್ದಾರೆ ಅವರಿಗೆ ಯಾರು ಸಹಾಯಮಾಡುತ್ತಿಲ್ಲ. ಅಂತಹವರಿಗೆ ನಮ್ಮ ಕೈಲಾದಸಹಾಯ ಮಾಡಲಾಗುತ್ತಿದೆ. ಈಗಾಗಲೇಸುಮಾರು ಐದಾರು ಮಂದಿಗೆ ಸೇವೆ ನೀಡಿದ್ದು, ಅದ ರಲ್ಲಿ ಕೆಲವರು ಗಾಯಗಳಿಂದಕೂಡಿದ ದೇಹಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ದೇವನಹಳ್ಳಿ ಆರಕ್ಷಕ ಠಾಣೆ ಮತ್ತು ಪಿಎಸ್ಐ ನಾಗರಾಜ್ ಅವರ ಸಹಕಾರದಲ್ಲಿಸೇವೆಗೆ ಮುಂದಾಗಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ