“ಪ್ರಪಂಚವೇ ಭಾರತೀಯ ಸನಾನತಾ ಧರ್ಮ ಒಪ್ಪಿಕೊಂಡಿದೆ’
Team Udayavani, Sep 5, 2017, 1:29 PM IST
ಆನೇಕಲ್: ಸನಾತನ ಧರ್ಮದ ಆಚರಣೆ, ಸಂಸ್ಕೃತಿಯನ್ನು ನೋಡಿ ಪ್ರಪಂಚವೇ ಭಾರತವನ್ನು ಅಪ್ಪಿಕೊಂಡಿದೆ ಎಂದು ಹಂಪಿಯ ಹೇಮಕೂಟದ ಗಾಯತ್ರಿ ಪೀಠದ ದೇವಾಂಗ ದಯಾನಂದ ಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮೀಪದ ಕಾವಲಹೊಸಹಳ್ಳಿ ಅರಿವಿನ ಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೇದಾದ್ರಿ ಮಹರ್ಷಿ ಅವರ ಧರ್ಮಪತ್ನಿ ಮಾತೆ ಲೋಗಾಂಬಾಳ್ ಅವರ 103ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಪತ್ನಿ ಪ್ರಶಂಸಾ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾತೃ ಋಣ ತೀರಿಸುವ ಕೆಲಸವಾಗಲಿ: ಭಾರತದ ಸಪ್ತನದಿಗಳು ಮಾತೃ ಹೆಸರಿನಲಿದ್ದು, ಮಾತೃ ಋಣ ತೀರಿಸುವ ಕೆಲಸವಾಗಬೇಕು. ಹೆಣ್ಣು, ತಾಯಿಯಾಗಿ, ಪತ್ನಿಯಾಗಿ ತನ್ನದೇ ನಿಟ್ಟಿನಲ್ಲಿ ಸಂಸ್ಕಾರ ನೀಡುವಂತವರು. ಹೀಗಾಗಿ ವೇದಾದ್ರಿ ಅವರು ಮಾಡಿರುವ ಚಿಂತನೆಯಿಂದ ಪತ್ನಿಯನ್ನು ಪ್ರಶಂಸಿಸುವ ನಿಟ್ಟಿನಲ್ಲಿ ಸೇರಿರುವುದು ಮೆಚ್ಚುವಂತಹ ಕೆಲಸ ಎಂದು ತಿಳಿಸಿದರು.
ಮನೆ ಸ್ವರ್ಗವಾಗಲಿ: ಧಾರ್ಮಿಕ ಚಿಂತಕಿ ವಿಜಯಾ ಮಾತನಾಡಿ, ಮನಸ್ಸಿನಲ್ಲಿರುವ ಪ್ರೀತಿ ವ್ಯಕ್ತಪಡಿಸುವ ಒಂದು ಭೂಮಿಕೆ ಇದಾಗಿದ್ದು, ಒಲವೇ ಜೀವನ ಸಾತ್ಕಾರದಂತೆ ಇರಬೇಕು. ಮನೆ ನರಕವಾಗದೇ ಸದಾ ಸ್ವರ್ಗ ಕಾಣುವಂತೆಯಾಗಬೇಕು ಮಾಡಬೇಕು ಎಂದು ತಿಳಿಸಿದರು.
ಇದರಿಂದ ಧಾರ್ಮಿಕ ಶಕ್ತಿ ವೃದ್ಧಿಗೊಂಡು ಮನಬಿಚ್ಚಿ ಮಾತನಾಡುವುದು ಒಳಗಡೆ ಮನಸ್ಸು ಪ್ರೀತಿ ತುಂಬಿರುರುತ್ತೇ ಹೇಳಿಕೊಳ್ಳಲು ಸಾಧ್ಯವಿರುವುದಿಲ್ಲ. ಧ್ಯಾನವು ಅಂತಹ ಶಕ್ತಿ ನೀಡಿ ಚೇತನಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ನ ಉಪಾಧ್ಯಕ್ಷ ಉಮಾಪತಿ ಮಾತನಾಡಿ, ನಾವು ಸುಮಾರು 15 ವರ್ಷಗಳಿಂದ “ಪತ್ನಿ ಪ್ರಶಂಸಾ ದಿನದಚರಣೆಮಾಡಿಕೊಂಡು ಬಂದಿದ್ದೇವೆ. ತಾಯಿ ದಿನ, ಮಕ್ಕಳ ದಿನ, ತಂದೆ ದಿನ, ಪರಿಸರ ದಿನ ಹೀಗೆ ಹಲುವು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ವೇದಾದ್ರಿ ಮಹರ್ಷಿ ಅವರ ಚಿಂತನೆಯ ಪತ್ನಿ ಪ್ರಶಂಸೆ ದಿನ ವಿಶೇಷವಾದದ್ದು, ಇದರಿಂದ ದಾಂಪತ್ಯ ಜೀವನದಲ್ಲಿ ಮನೋಬಲ ವೃದ್ಧಿಯಾಗಿ ಸಂಸ್ಕಾರ, ಧಾರ್ಮಿಕ ವಿಚಾರಧಾರೆಗಳಡಿಯಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಶಂಕರ್ ಕುಮಾರ್, ಕಸಾಪ ಅಧ್ಯಕ್ಷ ನವೀನ್ ಕುಮಾರ್ (ಬಾಬು), ವಿಜಯಾ, ತನುಜಾ ವಿಶೇಷ ಆಹ್ವಾನಿತ ದಂಪತಿಗಳಾಗಿ ಗವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಪ್ರೋ.ಎಂ.ಗೋವಿಂದರಾಜು, ಪೊ›.ಕೆ.ನರಸಿಂಹಯ್ಯ, ಪನ್ನೀರ್ ಸೆಲ್ವಂ, ಭ್ರಮರಾಂಭ, ಕೃಪಾನಿಧಿ, ಟಿ.ನಾಗಾರಾಜು ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ