ಹಸು ಮೈ ತೊಳೆಯಲು ಹೋದ ಇಬ್ಬರು ನೀರು ಪಾಲು
Team Udayavani, Feb 3, 2021, 3:57 PM IST
ಕನಕಪುರ: ಹಸುವಿನ ಮೈ ತೊಳೆಯಲು ಹೋದ ಬಾಲಕ ಮತ್ತು ಮಹಿಳೆ ಇಬ್ಬರು ನೀರು ಪಾಲಾಗಿರುವ ಘಟನೆ ಹುಣಸೆ ಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಹುಣಸೆ ಮರದ ದೊಡ್ಡಿ ಗ್ರಾಮದ ನಿವಾಸಿಗಳಾದ ದೀಪು(12) ಮತ್ತು ಭಾರತಿ(40) ಮೃತ ಪಟ್ಟ ದುರ್ದೈವಿಗಳು. ಹುಣಸೆಮರದದೊಡ್ಡಿಯ ನಿವಾಸಿ ಭಾರತಿ ಗ್ರಾಮದ ಸಮೀಪವಿರುವ ಕುಂಟೆಯಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದರು. ಇವರ ಜೊತೆಗೆ ಬಂದಿದ್ದ ಪಕ್ಕದ ಮನೆಯ ದೀಪು ಹಸುವಿನ ಮೈತೊಳೆಯಲು ಜಗ್ಗಿನಿಂದ ನೀರು ತಂದು ಕೊಡುತ್ತಿದ್ದ.
ಇದನ್ನೂ ಓದಿ :ಸುಬ್ರಹ್ಮಣ್ಯದಲ್ಲಿ ಶೌಚಾಲಯ ಸೇರಿದ್ದ ಚಿರತೆ ಕಾರ್ಯಚರಣೆ ವೇಳೆ ಎಸ್ಕೇಪ್!
ಈ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದಿದ್ದಾನೆ. ಬಾಲಕನ ರಕ್ಷಣೆಗೆ ಮುಂದಾದ ಭಾರತಿ ಸಹ ನೀರಿನಲ್ಲಿ ಮುಳುಗಿ ಸಾವನ್ನಿಪ್ಪಿ ದ್ದಾರೆ. ಕುಂಟೆಯಲ್ಲಿ ಹೂಳು ತುಂಬಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.