ಮೆಟ್ರೋ ಸೇವೆಯಲ್ಲಿ ವ್ಯತ್ಯಯ
Team Udayavani, Nov 30, 2021, 2:48 PM IST
ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗ ದಲ್ಲಿ ಸೋಮವಾರ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡು, ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ರೇಷ್ಮೆ ಸಂಸ್ಥೆ- ನಾಗಸಂದ್ರ ನಡುವಿನ ಪೀಣ್ಯ ಕೈಗಾರಿಕಾ ಪ್ರದೇಶ ನಿಲ್ದಾಣದ ಬಳಿ ಮಧ್ಯಾಹ್ನ 1.10ರ ಸುಮಾರಿಗೆ ತಾಂ ತ್ರಿಕ ದೋಷ ಕಾಣಿಸಿಕೊಂಡಿದೆ.
ಇದರಿಂದ ಹಿಂದಿನ ನಿಲ್ದಾಣದಲ್ಲೇ ರೈಲು ನಿಲುಗಡೆ ಮಾಡಿ, ವಾಪಸ್ ಕಳು ಹಿಸಲಾಯಿತು. ಇದರಿಂದ ಪ್ರಯಾ ಣಿಕರು ಕೆಲಹೊತ್ತು ಆತಂಕಕ್ಕೆ ಒಳಗಾದರು. ಅಲ್ಲದೆ ರೈಲು ಇಳಿದು, ರಸ್ತೆ ಮೂಲಕ ಪ್ರಯಾಣ ಬೆಳೆಸಬೇಕಾದ್ದರಿಂದ ಕಿರಿಕಿರಿಯೂ ಉಂಟಾಯಿತು. 1.10ರಿಂದ 1.35ರವರೆಗೆ ಅಂದರೆ ಸುಮಾರು 25 ನಿಮಿಷಗಳ ಕಾಲ ಸೇವೆಯಲ್ಲಿ ವ್ಯತ್ಯಯ ಉಂಟಾ ಯಿತು. ಆ ಮಾರ್ಗದಲ್ಲಿ ಬರುವ ಎಲ್ಲ ರೈಲುಗಳಿಗೂ ಇದರಿಂದ ಸಮಸ್ಯೆ ಆಯಿತು.
ಇದನ್ನೂ ಓದಿ:-ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು
ಹಾಗಾಗಿ, ರೇಷ್ಮೆ ಸಂಸ್ಥೆಯಿಂದ ಬರುವ ಮೆಟ್ರೋ ರೈಲುಗಳು ಯಶವಂತಪುರಕ್ಕೆ ಬಂದು ವಾಪಸ್ ಆದವು. 1.35ರ ನಂತರ ಎಂದಿನಂತೆ ಇಡೀ ಮಾರ್ಗಕ್ಕೆ ರೈಲುಗಳ ಕಾರ್ಯಾಚರಣೆ ಮುಂದುವರಿಯಿತು.
ಆಗಿದ್ದೇನು?: ಪ್ರತಿ ನಿಲ್ದಾಣದಲ್ಲೂ ಹಾಗೂ ರೈಲು ಮಾರ್ಗದುದ್ದಕ್ಕೂ “ಡಿಟೆಕ್ಷನ್ ಪಾಯಿಂಟ್’ ಇರುತ್ತದೆ. ಇದು ನೀಡುವ ಸೂಚನೆಗಳ ಆಧರಿಸಿ ನಿಲ್ದಾಣಗಳಿಗೆ ರೈಲುಗಳನ್ನು ಸ್ವೀಕರಿಸುವುದು ಮತ್ತು ಕಳುಹಿಸುವ ಕೆಲಸ ನಡೆಯುತ್ತದೆ. ಸುರಕ್ಷತೆ ಸೇರಿದಂತೆ ಎಲ್ಲ ಸೂಚನೆಗಳನ್ನೂ ಇದು ನೀಡುತ್ತದೆ.
ಯುಪಿಎಸ್ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುವ ಈ ಡಿಟೆಕ್ಷನ್ ಪಾಯಿಂಟ್ನಿಂದ ಸಿಗ್ನಲ್ ಬರದಿದ್ದರೆ, ಅದು ತಾಂತ್ರಿಕ ದೋಷ ಎಂದು ಪರಿಗಣಿಸಿ ರೈಲುಗಳನ್ನು ಸ್ವೀಕರಿಸುವುದಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶ ನಿಲ್ದಾಣದಲ್ಲಿ ಸೋಮವಾರ ಈ ಡಿಟೆಕ್ಷನ್ ಪಾಯಿಂಟ್ನಿಂದ ಮಧ್ಯಾಹ್ನ 1.10ಕ್ಕೆ ಯಾವುದೇ ಸೂಚನೆಗಳು ಬರಲಿಲ್ಲ. ಹಾಗಾಗಿ, ಸುರಕ್ಷತೆ ದೃಷ್ಟಿಯಿಂದ ಎರಡೂ ಕಡೆಯಿಂದ ಬರಬೇಕಾದ ರೈಲುಗಳನ್ನು ಹತ್ತಿರದ ನಿಲ್ದಾಣಗಳಲ್ಲೇ ನಿಲುಗಡೆಗೆ ಸೂಚಿಸಲಾಯಿತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು