ನಾಯಿಗೆ ಸ್ನಾನ ಮಾಡಿಸುತ್ತಿದ್ದವನ ಎಡಗೈ ತಿಂದ ಮೊಸಳೆ
Team Udayavani, Jun 26, 2017, 11:22 AM IST
ಕನಕಪುರ, ಜೂ. 25: ಕೆರೆಯಲ್ಲಿ ನಾಯಿಗಳಿಗೆ ಸ್ನಾನ ಮಾಡಿಸಲು ಹೋದ ಬೆಂಗಳೂರಿನ ಇಂದಿರಾನಗರ
ನಿವಾಸಿ ಮಧು ಅವರ ಎಡಗೈಯನ್ನು ಮೊಸಳೆಯೊಂದು ತಿಂದು ಹಾಕಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ
ತಾಲೂಕಿನ ಕಣಿವೆ ಮಾದೇಶ್ವರ ಸ್ವಾಮಿ ದೇಗುಲ ಬಳಿಯ ಕೆರೆಯೊಂದರಲ್ಲಿ ರವಿವಾರ ಸಂಭವಿಸಿದೆ.
ರವಿವಾರ ಬೆಳಗ್ಗೆ ತನ್ನ ಗೆಳತಿ ಸುಶ್ಮಿತಾ ಜತೆ ಮಧು ಬೆಂಗಳೂರಿನಿಂದ ತಟ್ಟೆಕೆರೆ ಬಳಿಯ ಕಣಿವೆ ಮಾದೇಶ್ವರಸ್ವಾಮಿ ದೇಗುಲದ ಬಳಿಯ ಬನ್ನೇರು ಘಟ್ಟ ರಾಷ್ಟ್ರೀಯ ಅರಣ್ಯ ವ್ಯಾಪ್ತಿಗೆ ಸೇರಿದ ಕೆರೆಯಲ್ಲಿ ನಾಯಿಮರಿಗಳಿಗೆ ಸ್ನಾನ ಮಾಡಿಸಲು ಇಳಿದಿದ್ದಾರೆ. ಆಗ ಕೆರೆಯಲ್ಲಿ ಇದ್ದ ಮೊಸಳೆ ಮಧು ಕೈಯನ್ನು ಕಚ್ಚಿದ ಸಂದರ್ಭ ದಡದಲ್ಲಿದ್ದ ಸುಶ್ಮಿತಾ ಕಿರುಚಿಕೊಂಡ ತತ್ ಕ್ಷಣ ಮೊಸಳೆ ಕೈ ಬಿಟ್ಟು ಮತ್ತೆ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದೆ. ಸಮೀಪದಲ್ಲೇ ಇದ್ದ ಅರಣ್ಯ ಸಿಬಂದಿ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ
ಹಾಸ್ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.