ಆನೇಕಲ್‌ನಲ್ಲಿ ಕಾಡಾನೆ ಹಿಂಡು ದಾಳಿ: ರಾಗಿ ಬೆಳೆ ನಾಶ


Team Udayavani, Dec 1, 2021, 12:56 PM IST

ಆನೆಗಳ ಹಿಂಡು

ಆನೇಕಲ್‌: ರಾಗಿ ತೆನೆ ವಾಸನೆ ಜಾಡು ಹಿಡಿದು ಕಾಡಿನಿಂದ ಹಳ್ಳಿಗಳತ್ತ ಬಂದ ಆರು ಕಾಡಾನೆಗಳ ಹಿಂಡು ಹಳ್ಳಿಯ ಕೆರೆಯೊಂದರಲ್ಲಿ ಉಳಿದ ಘಟನೆ ಆನೇಕಲ್‌ ತಾಲೂಕಿನ ತೆಲಗರಳ್ಳಿ ಬಳಿ ನಡೆದಿದೆ. ಸಹಜವಾಗಿ ಕಾಡಾನೆಗಳು ವರ್ಷದ ಕೊನೆ ಮತ್ತು ಆರಂಭದ ಮೂರು ತಿಂಗಳು ಆಹಾರ ಹರಸಿ ಹಳ್ಳಿಗಳತ್ತ ಬರುವುದು ಸಹಜ.

ಅಂತೆಯೇ ತಡ ರಾತ್ರಿ 4 ಗಂಡು, 2 ಹೆಣ್ಣು ಆನೆಗಳು ಗಡಿ ಅರಣ್ಯ ಭಾಗವಾಗದ ಮುತ್ತ್ಯಾಲಮಡುವು ಭಾಗದಿಂದ ಸೋಲೂರು ಬಳಿ ಆನೇಕಲ್‌ ಗುಮ್ಮಾಳಪುರ ರಸ್ತೆ ದಾಟಿ ವಣಕನಹಳ್ಳಿ ಸುತ್ತಮುತ್ತಲಿನ ರಾಗಿ ಬೆಳೆ ತಿಂದು ಸುತ್ತಾಡಿ ಬೆಳಗಾಗುತ್ತಲೇ ಅದೇ ರಸ್ತೆ ದಾಟುವ ವೇಳೆ ಜನ ಪಟಾಕಿ ಹಚ್ಚಿದ್ದರಿಂದ ಆನೆಗಳು ಗಾಬರಿಗೊಂಡು ಮತ್ತೇ ವಣಕನಹಳ್ಳಿ, ತೆಲಗರಲ್ಲಿ ಕಾಳನಾಯಕನಹಳ್ಳಿ ಭಾಗಗಲ್ಲಿ ಬೀಡು ಬಿಟ್ಟಿದ್ದವು.

ದೀಪಾವಳಿ ಪಟಾಕಿ: ಸುದ್ದಿ ತಿಳಿದ ಸುತ್ತಮುತ್ತಲಿನ ಜನರ ಗುಂಪು ಆನೆಗಳಿರುವ ನೀಲಗಿರಿ ತೋಪು ಸುತ್ತುವರೆದು ಎಲ್ಲೆಂದರಲ್ಲಿ ಪಟಾಕಿ ಹಚ್ಚಿ ಆನೆಗಳಿಗೆ ದಿಕ್ಕು ತೋಚದಂತೆ ಮಾಡಿದರು.

ಅರಣ್ಯ ಸಿಬ್ಬಂದಿ ಹರಸಾಹಸ: ಸುದ್ದಿ ತಿಳಿದ ಆನೇಕಲ್‌ ಪ್ರಾದೇಶಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಕೃಷ್ಣ ನೇತೃತ್ವದ ತಂಡ ಇಡೀ ದಿನ ಕಾರ್ಯಚರಣೆ ನಡೆಸಿ ಸಂಜೆ 4.30ರಲ್ಲಿ ಆನೇಕಲ್‌ – ಗುಮ್ಮಾಳಪುರ ರಸ್ತೆ ದಾಟಿಸಿ ಸಂಜೆ 6ರ ಸುಮಾರಿಗೆ ಕಾಡಿಗಟ್ಟಲು ಯಶಸ್ವಿಯಾದರು.

ಬೆಳೆ ಹಾನಿ: ವಣಕನಹಳ್ಳಿ, ತೆಲಗರಳ್ಳಿ, ಕಾಳನಾಯಕನಳ್ಳಿ ಸುತ್ತ ಮುತ್ತಲಿನ ರಾಗಿ ಬೆಳೆ ,ಬದನೆ, ಟೊಮೆಟೋ ಬೆಳೆ ಹಾನಿಯಾಗಿದೆ. ನೀಲಗಿರಿ ತೋಪಿನಲ್ಲಿದ್ದ ಮರಗಳು ನೆಲಕ್ಕುರುಳಿದ್ದು ಅಪಾರ ನಷ್ಟವಾಗಿದೆ.

ತಮಿಳುನಾಡಿನಿಂದ ಬಂದ ಆನೆಗಳು: ಆನೇಕಲ್‌ ತಾಲೂಕಿನ ಹಳ್ಳಿಗಳು ಒಂದು ಭಾಗದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಭಾಗ ಮತ್ತು ಕೆಲ ಭಾಗದಲ್ಲಿ ತಮಿಳು ನಾಡಿನ ಜವಳಗೆರೆ ಅರಣ್ಯ ಭಾಗ ಆವರಿಸಿದೆ. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದಿಂದ ಆನೆಗಳು ಹಳ್ಳಿಗಳತ್ತ ಬಾರದಂತೆ ಅರಣ್ಯ ಸಿಬ್ಬಂದಿ ರಾತ್ರಿ ಹಗಲು ಕಾವಲು ಕಾಯುತ್ತಿದ್ದಾರೆ. ಜತೆಗೆ ರೈಲ್ವೆ ಹಳಿ ಬೇಲಿ ಹಾಕಿದ್ದಾರೆ.

ಈಗ, ಬಂದಿರುವ ಆನೆಗಳು ಜವಳಗೆರೆ ಅರಣ್ಯದಿಂದ ಗುಮ್ಮಾಳಪುರ ಮಾರ್ಗವಾಗಿ ಮುತ್ಯಾಲಮಡುನ ಬಳಿ ಇರುವ ಹ್ಯಾಪಿ ಹೋಮ್‌ ರೆಸಾರ್ಟ್‌ ಬಳಿಯಿಂದ ಸೋಲೂರು ಬಳಿ ಹೊಲಗಳತ್ತ ಕಾಡಾನೆಗಳು ಬಂದಿವೆ ಎಂದು ಆನೇಕಲ್‌ ಪ್ರಾದೇಶಿಕ ಅರಣ್ಯ ವಿಭಾಗದ ಉಪ ವಲಯಅರಣ್ಯಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿರಾದರ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.