ಬಿತ್ತನೆಗೆ ಭರವಸೆ ಮೂಡಿಸಿದ ಮಳೆ
•ಬಸವಕಲ್ಯಾಣದಲ್ಲಿ 24.86 ಎಂಎಂ ಮಳೆ •ಕೃಷಿ ಚಟುವಟಿಕೆ ಆರಂಭ
Team Udayavani, Jun 23, 2019, 10:17 AM IST
ಬಸವಕಲ್ಯಾಣ: ಶನಿವಾರ ಸುರಿದ ಮಳೆಯಿಂದ ಶಿವಪೂರ ರಸ್ತೆಯ ಪಕ್ಕದ ಹೊಲಗಳಲ್ಲಿ ನೀರು ನಿಂತಿರುವುದು.
ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಕಾರಹುಣ್ಣೆಮೆ ಕಳೆದರೂ ಮುಂಗಾರು ಮಳೆ ಬಾರದಿರುವುದರಿಂದ ರೈತರು ಆಕಾಶದ ಕಡೆ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಮಳೆ ಸುರಿದಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾತ್ರಿ ಸುರಿದ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದೆ ಹಾಗೂ ಬಂಡೆಯಂದಿದ್ದ ಮಣ್ಣಿನ ಹೆಂಟೆಗಳು ಕರಗಿ ಭೂಮಿ ಬಿತ್ತಗೆ ಹದವಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ಕಂಡುಬಂತು.
ತಾಲೂಕಿನ ಹೋಬಳಿ ಗ್ರಾಮಗಳಾದ ಮಂಠಾಳ 25 ಎಂಎಂ, ಕೋಹಿನೂರ 17 ಎಂಎಂ, ಮುಡಬಿ 36 ಎಂಎಂ, ರಾಜೇಶ್ವರ 30.2 ಎಂಎಂ, ಹುಲಸೂರು 17 ಎಂಎಂ ಹಾಗೂ ಬಸವಕಲ್ಯಾಣ 24 ಎಂಎಂ ಸೇರಿದಂತೆ ಒಟ್ಟು 24.85 ಎಂಎಂ ಮಳೆ ಸುರಿದೆ.
ರೈತರು ಬಿತ್ತನೆ ಮಾಡುವಷ್ಟು ಮಳೆ ಬಂದಿದೆ. ಆದರೆ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಭೂಮಿ ಬೇಗ ಒಣಗಿ ಹೋಗುತ್ತದೆ. ಹೀಗಾಗಿ ಇನ್ನೊಂದು ಮಳೆ ಬಂದರೆ ಭೂಮಿ ಜಾಸ್ತಿ ದಿನ ನೀರು ಹಿಡಿದಿಟ್ಟುಕೊಳ್ಳುತ್ತದೆ. ಆಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ರೈತ ರಾಮಲಿಂಗ ಸಾಗಾವೆ ಅವರ ಅಭಿಪ್ರಾಯವಾಗಿದೆ.
ಪ್ರತಿವರ್ಷ ಅನ್ನದಾತ ಸಾಲಸೂಲ ಮಾಡಿ ಬಹಳ ನಿರೀಕ್ಷೆ ಇಟ್ಟುಕೊಂಡು ಭೂಮಿಗೆ ಬೀಜ ಬಿತ್ತುತ್ತಾನೆ. ಆದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತನ ನಿರೀಕ್ಷೆಯನ್ನು ಮಳೆ ಹುಸಿ ಮಾಡುತ್ತಿದ್ದು, ಸಂಕಷ್ಟ ಅನುಭವಿಸುವಂತೆ ಮಾಡಿದೆ. ಈ ವರ್ಷವಾದರೂ ಸಮಯಕ್ಕೆ ಸರಿಯಾಗಿ ಮಳೆ ಬಂದು ಮಂದಹಾಸ ತರುತ್ತದೆ ಎಂಬದು ರೈತರ ನಿರೀಕ್ಷೆಯಾಗಿದೆ.
ರೈತರು ಬಿತ್ತನೆ ಮಾಡುವಷ್ಟು ಮಳೆ ಆಗಿದೆ. ಆದರೆ ಇನ್ನೊಂದು ಸಲ ಮಳೆ ಬಂದಾಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ.
• ವೀರಶೆಟ್ಟಿ ರಾಠೊಡ,
ಕೃಷಿ ಸಹಾಯಕ ನಿರ್ದೇಶಕ, ಬಸವಕಲ್ಯಾಣ
ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಾ ಇದ್ದೆವು. ಈ ಮಳೆಯಿಂದ ಸ್ವಲ್ಪ ಬಿತ್ತನೆಯ ಆಶೆ ಮೂಡಿದೆ. ಇನ್ನೂ ಹೆಚ್ಚು ಮಳೆ ಬಂದಾಗ ಮಾತ್ರ ತಾಲೂಕಿನಾದ್ಯಂತ ಬಿತ್ತನೆ ಕಾರ್ಯವನ್ನು ರೈತರು ಚುರುಕಗೊಳಿಸಬಹುದು.
• ಸನ್ಮೂಖಪ್ಪಾ ಜಯಪ್ಪಾ, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ