ಬಸವಕಲ್ಯಾಣ: ಬರದ ಹೊಡೆತಕ್ಕೆ ಹಣ್ಣುಗಳ ಬೆಲೆ ಏರಿಕೆ
ಹೊರ ರಾಜ್ಯ-ಜಿಲ್ಲೆಗಳಿಂದ ಹಣ್ಣುಗಳ ಆಮದು
Team Udayavani, May 13, 2019, 10:51 AM IST
ಬಸವಕಲ್ಯಾಣ: ಕೇರಳದಿಂದ ಆಮದು ಮಾಡಿಕೊಂಡ ಪೈನಾಪಲ್ ಹಣ್ಣುಗಳನ್ನು ವ್ಯಾಪಾರಿಯೊಬ್ಬರು ಶುಚಿಗೊಳಿಸುತ್ತಿರುವುದು
ಬಸವಕಲ್ಯಾಣ: ಮಳೆ ಅಭಾವದಿಂದ ಹಣ್ಣಿನ ಬೆಲೆ ಏರಿಕೆಯಾಗಿರುವುದು ಸಾರ್ವಜನಿಕರಿಗಲ್ಲದೆ ರಂಜಾನ್ ನಿಮಿತ್ತ ಒಂದು ತಿಂಗಳು ಕಾಲ ಉಪವಾಸ ಮಾಡುವವರ ಮೇಲೆ ಭಾರೀ ಪರಿಣಾಮ ಬೀರಿದೆ.
ಪ್ರಸಕ್ತ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಕೇರಳ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಸೇರಿದಂತೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಹಣ್ಣುಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಬೆಲೆ ದುಬಾರಿಯಾಗಿ ಪರಿಣಮಿಸಿದೆ.
ಪೈನಾಪಲ್ 80ರಿಂದ 90, ಪಪಾಯಿ 30ರಿಂದ 40, ಕಲ್ಲಂಗಡಿ 25ರಿಂದ 35, ಸೌತೆಕಾಯಿ 50ರಿಂದ 60, ಬಾಳೆ ಹಣ್ಣು 50ರಿಂದ 60, ಸೇಬು 100ರಿಂದ 150 ರೂ.ಗೆ ಕೆ.ಜಿ. ಮಾರಾಟವಾದರೆ, ಖಜೂರ್ 80 ರೂ.ಗೆ ಕೆಜಿ ಆರಂಭದಿಂದ ನೀಡಲಾಗುತ್ತಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಹಣ್ಣಿನ ಬೆಲೆ ದುಬಾರಿ ಆಗಿರುವುದರಿಂದ ಗ್ರಾಹಕರು ಯೋಚಿಸಿ ಹಣ್ಣುಗಳನ್ನು ಖರೀದಿ ಮಾಡುವಂತಾಗಿದೆ. ಅಲ್ಲದೇ ಇದು ಸಾರ್ವಜನಿಕರಿಗೆ ಹೊರೆ ಕೂ ಆಗಿದೆ. ನಿತ್ಯ ಮೆನೆಗೆ ಕೆಜಿ ಹಣ್ಣು ತೆಗೆದುಕೊಂಡು ಹೋಗುವವರು ಅರ್ಧ ಕೆಜಿ, ಮುಕ್ಕಾಲು ಕೆಜೆ ತೆಗೆದುಕೊಂಡು ಹೋಗುವಂತಾಗಿದೆ.
ಆದರೆ ರಂಜಾನ್ ಹಬ್ಬದ ಅಂಗವಾಗಿ ಉಪವಾಸ ಮಾಡುವ ಕುಟುಂಬದವರು ಹಣ್ಣಿನ ಬೆಲೆ ದುಬಾರಿ ಯಾದರೂ ಬಡವರು, ಶ್ರೀಮಂತರು ಎನ್ನದೇ ಅನಿವಾರ್ಯವಾಗಿ ಹಣ್ಣುಗಳು ಖರೀದಿ ಮಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.
ವ್ಯಾಪಾರಿಗಳು ಕೂಡ ಹೆಚ್ಚಿನ ಲಾಭ ನೋಡದೆ, ದಿನದ ಕೂಲಿ ಬಂದರೆ ಸಾಕು ಎಂಬಂತೆ ಗ್ರಾಹರನ್ನು ನೋಡಿಕೊಂಡು ವ್ಯಾಪಾರ ವಹಿವಾಟು ಮಾಡಬೇಕಾಗುತ್ತಿದೆ ಎಂದು ವ್ಯಾಪಾರಿ ಮೈನೋದ್ದಿನ್ ಮಾಹಿತಿ ನೀಡಿದರು.
ಬರದ ಪರಿಣಾಮವಾಗಿ ಇನ್ನೂ ಸ್ವಲ್ಪದಿನದಲ್ಲಿ ತರಕಾರಿ, ಹಣ್ಣುಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವೀರಾರೆಡ್ಡಿ ಆರ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ