ಹಣ ಗಳಿಕೆ ಮುಖ್ಯವಲ್ಲ: ಕೊಲ್ಹಾರ
ಸಂಗಮೇಶ್ವರ ದೇವಸ್ಥಾನ ಉದ್ಘಾಟನೆ
Team Udayavani, Apr 8, 2019, 4:45 PM IST
ಬಸವನಬಾಗೇವಾಡಿ: ಕೇವಲ ಹಣ ಗಳಿಸುವುದರಿಂದ,
ಅಧಿ ಕಾರ ಪಡೆಯುವುದರಿಂದ ಜೀವನ ಸಾರ್ಥಕವಾಗುವುದಿಲ್ಲ. ಧರ್ಮದ ಚೌಕಟ್ಟಿನಲ್ಲಿ, ಹಿಂದಿನ ಪರಂಪರೆ, ಸಂಪ್ರದಾಯ ಮುಂದುವರಿಸಿಕೊಂಡು ಹೋದಾಗ ಬದುಕು ಸಾರ್ಥಕವಾಗುತ್ತದೆ
ಎಂದು ಹಿರಿಯ ಸಂಶೋಧಕ, ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ಕೊಲ್ಹಾರ ಪಟ್ಟಣದ ಸಂಗಪ್ಪ ಗಣಿಯವರ
ಉಪ್ಪಲದಿನ್ನಿ ರಸ್ತೆಯ ತೋಟದಲ್ಲಿ ನೂತನವಾಗಿ ನಿರ್ಮಿಸಿರುವ
ಸಂಗಮೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ
ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಪ್ರತಿಯೊಂದು ಊರಿಗೆ, ಸಮಾಜಕ್ಕೆ ಹಾಗೂ ಮನೆತನಗಳಿಗೆ ತನ್ನದೇಯಾದ ಇತಿಹಾಸವಿರುತ್ತದೆ. ಕೇವಲ ಮಂತ್ರ, ತಂತ್ರಗಳಲ್ಲಿ, ಹೋಮ ಹವನಗಳಲ್ಲಿ ಆಶೀರ್ವಚನಗಳಲ್ಲಿ ಧರ್ಮವಿಲ್ಲ. ಸಂಪ್ರದಾಯದಿಂದ ಬಂದಂತಹ ಹಿರಿಯರು ಹಾಕಿಕೊಟ್ಟ ದಾರಿಯನ್ನು ಚಾಚು ತಪ್ಪದೇ ಮುಂದುವರಿಸಿಕೊಂಡು ಹೋಗುವುದೇ ಧರ್ಮ ಎಂದು ಹೇಳಿದರು.
ಅಂತಹ ಧರ್ಮವನ್ನು ರಾಯಪ್ಪ ಗಣಿಯವರು ಮೂರನೇ ತಲೆಮಾರಿನ ಗುರುಪಾದಪ್ಪ ಗಣಿಯವರು ಹಳೆ ಕೊಲ್ಹಾರದ ಅವರ ಹೊಲದಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ಸಂಗಮೇಶ್ವರ ದೇವಸ್ಥಾನವನ್ನು ಅದೇ ಮಾದರಿಯಲ್ಲಿ ಉಪ್ಪಲದಿನ್ನಿ ರಸ್ತೆಯ ತಮ್ಮ ಹೊಲದಲ್ಲಿ ನಿರ್ಮಿಸುವ ಮೂಲಕ ಈ ಭಾಗದ ಜನರಿಗೆ ಸಂಗಮೇಶ್ವರ ದೇವಸ್ಥಾನದ ದರ್ಶನದ ಭಾಗ್ಯ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಕೃಷ್ಣಾ ನದಿಯ ಪಕ್ಕದಲ್ಲಿದ್ದ ಅಂದಿನ ಕೊಲ್ಹಾರದ ನಿಸರ್ಗ ಸೃಷ್ಟಿ ಸೌಂದರ್ಯ, ರಾಚೋಟೇಶ್ವರ ದೇವಸ್ಥಾನ, ಅರಣ್ಯ, ಸಿಮಿಗಡ್ಡಿ ಅರಣ್ಯ ಹಾಗೂ ಹೊಳೆ ಸಾಲು ಇವೆಲ್ಲಾ ಮಲೆನಾಡನ್ನೇ ನಾಚಿಸುವಂತಿತ್ತು. ಸಹ್ಯಾದ್ರಿ ಬೆಟ್ಟದಲ್ಲಿ ಸಿಗುವ ಎಲ್ಲಾ ತರಹದ ಗಿಡಮರಗಳು, ಸಸ್ಯಗಳು, ಔಷ ಧೀಯ ಸಸ್ಯಗಳು ಕೊಲ್ಹಾರದ ಷ್ಣಾ ನದಿ ತೀರದಲ್ಲಿ ಸಿಗುತ್ತಿದ್ದವು ಎಂದರು.
ಚಿಮ್ಮಲಗಿಯ ಹಿರೇಮಠದ ನೀಲಕಂಠ ಶಿವಾಚಾರ್ಯರು, ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ
ಶಿವಾಚಾರ್ಯರು, ಮುರುಘೇಂದ್ರ ಸ್ವಾಮಿಗಳು, ಕೊಲ್ಹಾರ ದಿಗಂಬರೇಶ್ವರ ಮಠದ ಸ್ವಾಮಿಗಳು ಹಾಗೂ ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ.ವಿ.ಡಿ. ಐಹೊಳೆ, ಸ್ಥಾನಿಕ ಸಂಪಾದಕ ವಾಸುದೇವ ಹೆರಕಲ್ ಸೇರಿದಂತೆ ಇತರರು ಭಾವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!