ಪ್ರಧಾನಿ ಭೇಟಿಗೆ ಹೊರಟ ಪಿ.ವೈ. ಹುಣಶ್ಯಾಳ ರೈತ
Team Udayavani, Jun 25, 2019, 8:07 AM IST
ಬೆಳಗಾವಿ: ದೇಶದಲ್ಲಿ ಮತ್ತೂಮ್ಮೆ ನೋಟು ಹಾಗೂ ಸಾರಾಯಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬೆಳಗಾವಿಯ ರೈತನೋರ್ವ ದೆಹಲಿಗೆ ಹೊರಟಿದ್ದಾನೆ.
ಗೋಕಾಕ ತಾಲೂಕಿನ ಪಿ.ವೈ. ಹುಣಶ್ಯಾಳ ಗ್ರಾಮದ ನಾರಾಯಣ ಬಸಪ್ಪ ಚೆನ್ನಾಳ ಎಂಬ ರೈತ ಮೋದಿಯನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾನೆ. ಘಟಪ್ರಭಾದಿಂದ ನೇರವಾಗಿದ ದೆಹಲಿಗೆ ರೈಲು ಮೂಲಕ ತೆರಳಿ ದೇಶದಲ್ಲಿ ಪ್ರಧಾನಿ ಮೋದಿ ಅವರ ನೀತಿ ಬೆಂಬಲಿಸಲಿದ್ದು, ಬಳಿಕ ರೈತರ ಬಗ್ಗೆ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಿದ್ದಾನೆ.
2016ರಲ್ಲಿ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗಿತ್ತು. ಅದರಂತೆ ಈಗ 2016ರಿಂದ ಜಮಾ ಆಗಿರುವ ನೋಟುಗಳನ್ನು ಮತ್ತೆ ಬ್ಯಾನ್ ಮಾಡಿದರೆ ಭ್ರಷ್ಟಾಚಾರಿಗಳಿಗೆ ಪಾಠ ಕಲಿಸಿದಂತಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಬಳಿ ಕೋಟ್ಯಂತರ ರೂ. ಕಪ್ಪು ಹಣ ಇದ್ದು, ಅದನ್ನು ಹೊರಗೆ ತೆಗೆಯಬೇಕಾದರೆ ನೋಟು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗುವುದು ಎನ್ನುತ್ತಾರೆ ರೈತ ನಾರಾಯಣ. ಈಗಾಗಲೇ ನಮ್ಮ ಭಾಗದಲ್ಲಿ ರೈಲ್ವೆ ಡಬ್ಲಿಂಗ್ ಕಾರ್ಯ ನಡೆದಿದ್ದು, ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಈ ಕಾರ್ಯ ಮುಗಿಸಲಿದ್ದಾರೆ. ಡಬ್ಲಿಂಗ್ ಕಾರ್ಯಕ್ಕೆ ಅಗತ್ಯ ಇರುವ ಜಮೀನು ಸ್ವಾಧೀನ ಪಡಿಸಿಕೊಂಡರೆ ರೈತರಿಗೆ ಪರಿಹಾರ ಧನ ವಿತರಿಸಿದ ಬಳಿಕವೇ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ