ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಆರೋಪಿ ಬಂಧನ
ಹಲಕಿ ಗ್ರಾಮದ 200 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬೆಂಕಿ
Team Udayavani, Mar 31, 2022, 3:04 PM IST
ಸವದತ್ತಿ: ತಾಲೂಕಿನ ಹಲಕಿ ಗ್ರಾಮದ 200 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಬೆಂಕಿ ತಗುಲಿ ಸುಮಾರು 20 ಹೆಕ್ಟೇರ್ಗೂ ಅಧಿಕ ಅರಣ್ಯ ನಾಶವಾಗಿದೆ. ಅರಣ್ಯ ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಕಾಡು ಪ್ರಾಣಿಗಳ ಬೇಟೆ ನೆಪದಲ್ಲಿ ಪದೇ ಪದೇ ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹನಮಂತ ಫಕ್ಕೀರಪ್ಪ ಕೊಟ್ರೆನ್ನವರ (65) ಬಂಧಿತ ಆರೋಪಿ.
ಮೂಲತಃ ಹಲಕಿ ಗ್ರಾಮದವನಾದ ಆರೋಪಿ ಹನಮಂತ ರಾತ್ರಿ ವೇಳೆ ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಬೆಂಕಿ ಹಚ್ಚಿ, ತಂತಿ ಬಳಸಿ ವನ್ಯ ಪ್ರಾಣಿಗಳ ಬೇಟೆಯಾಡುವುದನ್ನೇ ಕಸುಬಾಗಿಸಿ ಕೊಂಡಿದ್ದನು. ಸಿಬ್ಬಂದಿ ವಿಚಾರಿಸಿದಾಗ ಜೇನು ಬಿಡಿಸಲು ಬಂದಿರುವುದಾಗಿ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದನು. ಆಗಾಗ್ಗೆ ಬೆಂಕಿ ತಗುಲಿರುವದನ್ನು ಗಮನಿಸಿದ ಇಲಾಖೆ ವ್ಯವಸ್ಥಿತವಾದ ತನಿಖೆಯೊಂದಿಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಅವಘಡದಲ್ಲಿ ಕೆಲ ವನ್ಯ ಪ್ರಾಣಿಗಳು ಸುಟ್ಟು ಹೋಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಗೋಕಾಕ ವಿಭಾಗದ ಆಂಥೋನಿ ಮರಿಯಪ್ಪ, ರಾಜೇಶ್ವರಿ ಈರನಟ್ಟಿ, ಸವದತ್ತಿ ವಲಯ ಅರಣ್ಯಾ ಧಿಕಾರಿ ಶಂಕರ ಅಂತರಗಟ್ಟಿ ನೇತೃತ್ವದಲ್ಲಿ ಎಸ್.ಬಿ.ಹಟ್ಟೆನ್ನವರ, ಎಚ್.ಬಿ. ದಿಡಗನ್ನವರ, ಸೋಮನಿಂಗ ಕೊಪ್ಪದ, ನಾಗಪ್ಪ ಶೆಳ್ಳೆಮ್ಮಿ ಪ್ರಕರಣ ಭೇದಿಸುವಲ್ಲಿ ಭಾಗಿಯಾಗಿದ್ದರು.
ಅರಣ್ಯಕ್ಕೆ ತಗುಲಿದ ಬೆಂಕಿ ಪತ್ತೆ ಮಾಡಲು ಕಳೆದ ವರ್ಷ ಇಲಾಖೆಯಿಂದ ಫ1ರ್ ಅಲರ್ಟ್ ಪೋರ್ಟಲ್ ಸಿದ್ಧಪಡಿಸಿದ್ದು, ಅವಘಡ ಸಂಭವಿಸುತ್ತಲೇ ಸೆಟ್ಲೈಟ್ ಮೂಲಕ ನೇರವಾಗಿ ದೂರ ಸಂವೇದಿ ಕೇಂದ್ರಕ್ಕೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದ ಇಲಾಖೆಯ ಮುಖ್ಯ ಕಚೇರಿ, ಜಿಲ್ಲಾಧಿಕಾರಿ, ಆರ್ಎಫ್ಓಗಳಿಗೆ ತ್ವರಿತ ಮಾಹಿತಿ ಸಿಕ್ಕು ಬೆಂಕಿ ನಂದಿಸುವಲ್ಲಿ ಅನುಕೂಲವಾಗಿದೆ. ಪ್ರದೇಶವಾರು ಬೆಂಕಿ ಕಾವಲುಗಾರರನ್ನು ನೇಮಿಸಲಾಗಿದೆ ಎನ್ನುತ್ತಾರೆ ಆರ್ಎಫ್ಓ ಶಂಕರ ಅಂತರಗಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ