ಅಥಣಿ ಜನತೆ ಜಾಗೃತರಾಗಿರಿ: ಸವದಿ
Team Udayavani, Apr 26, 2020, 5:10 PM IST
ಅಥಣಿ: ನಮ್ಮ ಅಥಣಿ ತಾಲೂಕು ಜನರು ಜಾಗ್ರತರಾಗಿರಬೇಕು. ಇಲ್ಲಿಯವರು ಹೊರಗೆ ಹೊಗಬೇಡಿ. ಹೊರಗಿನವರು ಯಾರಾದರೂ ಬಂದರೆ ತಕ್ಷಣ ತಾಲೂಕು ಆಡಳಿತಕ್ಕೆ ತಿಳಿಸಬೇಕೆಂದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಧ್ಯಮದ ಮೂಲಕ ಜನರಿಗೆ ಕೇಳಿಕೊಂಡಿದ್ದಾರೆ.
ಇಂದು ಆರೋಗ್ಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಲೂಕು ಪಕ್ಕದಲ್ಲಿ ಮಹಾರಾಷ್ಟ್ರ ಇದೆ. ಅದರಂತೆ ರಾಯಭಾಗ ತಾಲೂಕು, ವಿಜಯಪೂರ, ಬಾಗಲಕೋಟಿ ಜಿಲ್ಲೆ ಎಲ್ಲ ಸೀಮೆಗಳು ತಮ್ಮ ತಾಲೂಕಿಗೆ ಹತ್ತಿರ ಇವೆ. ಅಲ್ಲೆಲ್ಲ ಕೋವಿಡ್ 19 ಸೋಂಕಿತರು ಇರುವದರಿಂದ ನಾವು ಜಾಗೃತರಾಗಿರಬೇಕಿದೆ. ಸುದೈವದಿಂದ ನಮ್ಮ ತಾಲೂಕಿನಲ್ಲಿ ಒಂದೂ ಕೋವಿಡ್ 19 ಸೋಂಕಿತರಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾದರೆ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಸರಕಾರ ಮಾಡುವ ಕೆಲಸಕ್ಕೆ ಜನರು ಕೈಜೊಡಿಸಬೇಕು ಎಂದು ಹೇಳಿದರು.
ಸಂಚಾರಿ ದವಾಖಾನೆ ಉದ್ಘಾಟನೆ: ಸಾರಿಗೆ ಇಲಾಖೆಯಿಂದ 4 ಸಂಚಾರಿ ದವಾಖಾನೆ ಆರಂಭಿಸಲಾಗಿದೆ. ಸೀಲ್ ಡೌನ್, ಲಾಕ್ ಡೌನ್ ಪ್ರದೇಶಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸಂಚಾರಿ ದವಾಖಾನೆ ಕೆಲಸ ಮಾಡುತ್ತದೆ. ಅವಶ್ಯ ಬಿದ್ದರೆ ಇನ್ನೂ ಹೆಚ್ಚು ಸಂಚಾರಿ ದವಾಖಾನೆ ಆರಂಭಿಸಲಾಗುವುದು ಎಂದು ಹೇಳಿದರು.
ಲಾಕಡೌನ್ ತೆರವು: ಸರಕಾರ ಮಾಡಿರುವ ಈಗಿನ ಸಡಲಿಕೆ ರೇಡ್ ಝೋನ್, ಸೀಲ್ ಡೌನ್ ಏರಿಯಾ, ಬಫರ್ ಜೋನ್ಗಳಿಗೆ ಅನ್ವಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ