ಕಾಂತಿವರ್ಧಕ ತಯಾರಿಕೆ ಘಟಕದ ಮೇಲೆ ದಾಳಿ


Team Udayavani, Jul 6, 2019, 10:38 AM IST

Udayavani Kannada Newspaper

ಬೆಳಗಾವಿ: ಔಷಧ ನಿಯಂತ್ರಣಾಕಾರಿಗಳ ತಂಡ ಖಚಿತ ಮಾಹಿತಿ ಆಧಾರದ ಮೇಲೆ ತಾಲೂಕಿನ ಕಾಕತಿ ಗ್ರಾಮದ ಲಕ್ಷ್ಮೀ ನಗರದಲ್ಲಿನ ಎರಡು ಪರವಾನಗಿರಹಿತ ಕಾಂತಿವರ್ಧಕ ತಯಾರಿಕಾ ಘಟಕ ಹಾಗೂ ಬೆಳಗಾವಿ ನಗರದ ಎರಡು ಕಾಂತಿವರ್ಧಕ ಮಾರಾಟಗಾರರ ಮೇಲೆ ದಾಳಿ ನಡೆಸಿ ಅಪಾರ ಮೌಲ್ಯದ ಕಾಂತಿವರ್ಧಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಕಾಕತಿಯ 6ನೇ ಅಡ್ಡ ರಸ್ತೆಯ ಫಜಲುಲ್ಲಾ ಫಾರೂಕಿ ಎಂಬವರ ಮನೆಯಲ್ಲಿ ಅನಧಿಕೃತವಾಗಿ ತಯಾರಿಸಿದ್ದ ಫಾರೂಖೀ ಅರಬಿ ಕ್ರೀಮ್‌ ಹಾಗೂ ಯಂತ್ರೋಪಕರಣ, ಪ್ಯಾಕಿಂಗ್‌ ಮಟೀರಿಯಲ್ಗಳು, ಲೇಬಲ್ಗಳು, ಪ್ಲಾಸ್ಟಿಕ್‌ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಕತಿಯ 3ನೇ ಅಡ್ಡ ರಸ್ತೆಯ ಜಹೀದಾಬಾನು ಬೇಪಾರಿ ಅವರ ಮನೆಯಲ್ಲೂ ಅನಧಿಕೃತವಾಗಿ ಜಹಿದಾಸ್‌ ಒರಿಜಿನಲ್ ಅರೆಬಿಕ್‌ ಕ್ರೀಮ್‌ಗಳನ್ನು ತಯಾರಿಸಿರುವುದು ಹಾಗೂ ಆಲೋಪಥಿ ಔಷಧಗಳು, ಯಂತ್ರೋಪಕರಣಗಳು, ಪ್ಯಾಕಿಂಗ್‌ ಮಟೀರಿಯಲ್ಗಳು, ಲೇಬಲ್ಗಳು, ಪ್ಲಾಸ್ಟಿಕ್‌ ಡಬ್ಬಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಟಿಬಯೋಟಿಕ್‌, ಸ್ಟಿರಾಯ್ಡ ಔಷಧಗಳ ಕಲಬೆರಕೆಯೊಂದಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹಾನಿಕಾರಕವಾಗುವಂತಹ ಕಾಂತಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿಯ ದರ್ಬಾರ್‌ ಗಲ್ಲಿಯ ಬೈಟುಜಾರಾ ಕಾಂಪ್ಲೆಕ್ಸ್‌ನ ಫಾರೂಕಿ ಅರಬಿ ಕ್ರೀಮ್‌ ಶಾಪ್‌ ಹಾಗೂ ಕೋನವಾಳ ಗಲ್ಲಿಯ ರಂಗರೇಜ ಜನರಲ್ ಸೋrರ್‌ನಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಫಾರೂಖೀ ಅರಬಿ ಕ್ರೀಮ್‌ ಹಾಗೂ ಜಹಿದಾಸ್‌ ಒರಿಜಿನಲ್ ಅರೆಬಿಕ್‌ ಕ್ರೀಮ್‌ಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ.

ನಾಲ್ಕೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಾಂತಿವರ್ಧಕ, ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿಟ್ಟುಕೊಳ್ಳಲು ಬೆಳಗಾವಿಯ 2ನೇ ಹಾಗೂ 4ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಫಾರೂಖೀ ಅರಬಿ ಕ್ರೀಮ್‌ ಹಾಗೂ ಜಹಿದಾಸ್‌ ಒರಿಜಿನಲ್ ಅರೆಬಿಕ್‌ ಕ್ರೀಮ್‌ಗಳನ್ನು ಫಜಲುಲ್ಲಾ ಫಾರೂಕಿ ಹಾಗೂ ಜಾಹೀದಾಬಾನು ಬೇಪಾರಿ ಆಲೋಪಥಿಕ್‌ ಔಷಧಗಳನ್ನು ಬೆರೆಸಿ ಕ್ರೀಮ್‌ಗಳನ್ನು ತಯಾರಿಸಿರುವ ಹಾಗೂ ಕ್ರೀಮ್‌ಗಳನ್ನು ಜೋಳದ ಹಿಟ್ಟು, ಕಡಲೆ ಹಿಟ್ಟು, ಅರಿಷಿನ ಪುಡಿಗಳನ್ನು ಬೆರೆಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಲೈಂಗಿಕ ಆಸಕ್ತಿ ಉತ್ತೇಜಿಸುವ ಮಾತ್ರೆಗಳ ವಶ: ಇಲ್ಲಿಯ ಆಜಾದ್‌ ನಗರ, ಕರ್ನಾಟಕ ಚೌಕ್‌ ರವಿವಾರ ಪೇಟೆಯ ಅಮರ್‌ ಪ್ಯಾಲೇಸ್‌ ಲಾಡ್ಜ್ ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಲೈಂಗಿಕ ಆಸಕ್ತಿ ಉತ್ತೇಜಿಸುವ ಮಾತ್ರೆಗಳನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಹುಬ್ಬಳ್ಳಿ ಮೂಲದ ಕೃಷ್ಣಮೂರ್ತಿ ಧರಿಗಬವಡರ ಎಂಬಾತನನ್ನು ಬಂಧಿಸಲಾಗಿದೆ. ಈತ ಬೆಳಗಾವಿ ಸಮೃದ್ಧಿ ಫಾರ್ಮಾ ಹಾಗೂ ಶ್ರೇಯಾ ಮೆಡಿಕಲ್ ಹೆಸರಿನ ನಕಲಿ ಬಿಲ್ಗಳನ್ನು ಉಪಯೋಗಿಸಿ ಅನಧಿಕೃತ ಔಷಧ ಮಾರಾಟದಲ್ಲಿ ತೊಡಗಿದ್ದನು. ಕಾಳಸಂತೆಯಲ್ಲಿ ಇದನ್ನು ಮಾರಾಟ ಮಾಡುತ್ತಿದ್ದನು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ

Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.