ಶಾಲಾ ಹಾಜರಾತಿಗೆ ಜಾಗೃತಿ ಜಾಥಾ
Team Udayavani, May 31, 2019, 2:41 PM IST
ಬೈಲಹೊಂಗಲ: ತಾಲೂಕಿನ ದೊಡವಾಡ ಹೊಸ ಬಡಾವಣೆ ಸರಕಾರಿ ಶಾಲೆ ಮಕ್ಕಳಿಂದ ಗುರುವಾರ ಅಕ್ಷರ ಬಂಡಿ ಜಾಥಾ ನಡೆಯಿತು.
ಬೈಲಹೊಂಗಲ: ಬೇಸಿಗೆ ರಜೆಯ ಮಜಾ ಸವಿದು ಈಗಾಗಲೇ ಶಾಲೆಗೆ ಮರಳಿರುವ ತಾಲೂಕಿನ ದೊಡವಾಡ ಗ್ರಾಮದ ಶಾಂತಿ ನಗರದ ಹೊಸ ಬಡಾವಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಗೆ ಬಾರದೆ ಮನೆಯಲ್ಲಿ ಉಳಿದ ತಮ್ಮ ಸಹಪಾಠಿಗಳು, ಹೊಸದಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳು ಕೂಡ ಆದಷ್ಟು ಬೇಗ ಶಾಲೆಗೆ ಬಂದು ಆಟ ಪಾಠ ಅಭ್ಯಾಸ ಚಟುವಟಿಕೆಗಳಲ್ಲಿ ತೊಡಗಲಿ ಎಂಬ ಉದ್ದೇಶದಿಂದ ತಮ್ಮ ಶಿಕ್ಷಕರ ಜತೆಗೂಡಿ ಗ್ರಾಮದಲ್ಲಿ ಗುರುವಾರ ಅಕ್ಷರಬಂಡಿ ಮೆರವಣಿಗೆ ಜಾಥಾ ನಡೆಸಿದರು.
ತಾಪಂ ಸದಸ್ಯ ಸಂಗಯ್ಯ ದಾಭಿಮಠ ಜಾಥಾಗೆ ಚಾಲನೆ ನೀಡಿದರು. ಮಕ್ಕಳು ಡೊಳ್ಳು ಬಾರಿಸುತ್ತ ಮೆರವಣಿಗೆಯಲ್ಲಿ ಸಾಗಿದರು. ಸರಕಾರಿ ಶಾಲೆಗಳ ಸೌಲಭ್ಯ ಕುರಿತ ಜಾಗೃತಿ ಘೊಷಣಾ ಫಲಕಗಳನ್ನು ಪ್ರದರ್ಶಿಸಿ ಪಾಲಕರ ಗಮನ ಸೆಳೆದರು. ಶಿಕ್ಷಕರು ಧ್ವನಿ ವರ್ಧಕದ ಮೂಲಕ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಘೋಷಣೆ ಕೂಗಿದರು. ಬಿಆರ್ಪಿ ಎ.ಎಂ.ಜಖಾತಿ, ಸಿಆರ್ಪಿ ರಾಜು ಹಕ್ಕಿ, ಮುಖ್ಯ ಶಿಕ್ಷಕ ಜಿ.ಸಿ.ಬೆಳವಡಿ ಹಾಗೂ ಶಿಕ್ಷಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್