ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್ವೆಲ್
Team Udayavani, Jun 2, 2023, 5:39 PM IST
ತೆಲಸಂಗ: ಗ್ರಾಮದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸುಮಾರು 8 ತಿಂಗಳ ಹಿಂದೆ ಬೋರ್ವೆಲ್ ಕೊರೆಯಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.
ಬೋರ್ವೆಲ್ ಒಳಗಡೆ ನಾಲ್ಕಾರು ಪೈಪ್ ಹಾಕಿ ಅದಕ್ಕೆ ವಿದ್ಯುತ್ ವೈರ್ ಜೋಡಿಸಿ ಮೇಲೆಯೂ ಪೈಪ್ ಜೋಡಿಸಿ ಬಿಟ್ಟಿದ್ದಾರೆ ಆದರೆ ನೀರು ಮಾತ್ರ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬೋರ್ವೆಲ್ ರೀ ಬೋರ್ ಮಾಡಿದರೆ ಮಾತ್ರ ಪೈಪ್ಗ್ಳನ್ನು ಒಳಗಡೆ ಇಳಿಸಲು ಸಾಧ್ಯ ಅಂತ ಒಮ್ಮೆ ಹೇಳುತ್ತಾರೆ.
ಮತ್ತೊಮ್ಮೆ ಕೇಳಿದರೆ ವಿದ್ಯುತ್ ಕನೆಕ್ಷನ್ ಕೊಟ್ಟಿಲ್ಲ, ಅದು ಮಾತ್ರ ಬಾಕಿ ಇದೆ ಎನ್ನುತ್ತಾರೆ. 8 ತಿಂಗಳಿಂದ ಇದ್ಯಾವುದೂ ಮಾಡಲಿಕ್ಕೆ ಸಮಯವೇ ಇಲ್ಲವೆ ಎಂದು ಪ್ರಶ್ನಿಸಿದರೆ, 2-3 ದಿನದಲ್ಲಿ ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಹೇಳಿ
ಜಾರಿಕೊಳ್ಳುತ್ತಾರೆ. ಗುಣಮಟ್ಟ ಕಾಮಗಾರಿ ಆಗಿಲ್ಲ ಎಂದರೆ ನಾಳೆಯೇ ಭೇಟಿ ಕೊಡುತ್ತೇನೆ. ಅದೆಲ್ಲವನ್ನು
ಪರಿಶೀಲಿಸುತ್ತೇನೆಂದು ಅಧಿಕಾರಿಗಳು ಉತ್ತರಿಸಿ ಜಾರಿಕೊಳ್ಳುತ್ತಾರೆ.
2.40 ಲಕ್ಷ ರೂ. ಕಾಮಗಾರಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 15ನೇ ಹಣಕಾಸು ಯೋಜನೆಯಡಿ ನಳ ಜೋಡಣೆ ಮತ್ತು
ಮೋಟರ್ ಅಳವಡಿಕೆಗೆ ಅಂದಾಜು ವೆಚ್ಚ 2.40 ಲಕ್ಷ ರೂ. ಮಂಜೂರಾಗಿದೆ. ಅಪೂರ್ಣ ಕಾಮಗಾರಿ ಕೈಗೊಂಡು 8 ತಿಂಗಳಾದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಗುತ್ತಿಗೆದಾರರು ಫಲಕ ಅಳವಡಿಸಿ ಫೋಟೋ ತೆಗೆದುಕೊಂಡು ಹೋದವರು ಇದರತ್ತ ಹೊರಳಿಯೂ ನೋಡಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ ಮೂರೇ ದಿನದಲ್ಲಿ ಸರಿ ಮಾಡಿಕೊಡುವ ಭರವಸೆ ನೀಡುತ್ತಿದ್ದಾರೆ.
ತಕ್ಷಣವೇ ಈ ಬೋರ್ವೆಲ್ಗೆ ಬಳಸಲಾದ ಕಳಪೆ ಪೈಪ್, ವೈರ್, ಬಟನ್, ಸ್ಟಾಟರ್ ಬೋರ್ಡ್ ಬದಲಾಯಿಸಿ ಐಎಸ್ಐ ಗುಣಮಟ್ಟದ್ದನ್ನು ಬಳಸಿ ಆಸ್ಪತ್ರೆಗೆ ನೀರು ಪೂರೈಸುವ ಕೆಲಸ ಆರಂಭಿಸಬೇಕು. ಈ ಕಳಪೆ ಸಾಮಗ್ರಿ ಬದಲಿಸದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಇದನ್ನೆಲ್ಲ ಸರಿಪಡಿಸಲು ಒಂದು ವಾರದ ಗಡುವು ನೀಡುತ್ತಿದ್ದೇವೆ.
*ಬುರಾನ ಅರಟಾಳ, ಯುವಕ ತೆಲಸಂಗ
ಬೋರ್ವೆಲ್ ರೀ ಬೋರ್ ಮಾಡಿಸುವುದು ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ತಕ್ಷಣವೇ ಭೇಟಿ ನೀಡಿ ಎರಡ್ಮೂರು ದಿನದಲ್ಲಿ ನೀರೊದಗಿಸುವ ಕೆಲಸ ಮಾಡಲಾಗುವುದು.
*ರವಿ ಮುರಗಾಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, ಅಥಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ