ಧರ್ಮಕ್ಕಾಗಿ ತಲ್ವಾರ್ ಹಿಡಿಯಿರಿ ಎಂದ ಶಾಸಕ!
Team Udayavani, Dec 27, 2021, 7:02 AM IST
ಬೆಳಗಾವಿ: ಹಿಂದೂ ಧರ್ಮಕ್ಕೆ ಸಂಕಟ ಬಂದಾಗ ರಾಜಕಾರಣಿಯಾಗಲೀ, ಸರಕಾರವಾಗಲೀ ಮುಂದೆ ಬರುವುದಿಲ್ಲ. ಹಿಂದೂ ಕಾರ್ಯಕರ್ತರೇ ತಲವಾರು ಹಿಡಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಧರ್ಮ ರಕ್ಷಣೆ ಸಾಧ್ಯ ಎಂದು ಆಂಧ್ರ ಪ್ರದೇಶ ಭಾಗ್ಯನಗರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಹೇಳಿದರು.
ತಾಲೂಕಿನ ನಾವಗೆ ಬಳಿಯ ಗಣೇಶಬಾಗ್ನಲ್ಲಿ ರವಿವಾರ ಧನಂಜಯ ಜಾಧವ ಮಿತ್ರ ಪರಿವಾರದಿಂದ ಹಮ್ಮಿಕೊಂಡಿದ್ದ “ಹಿಂದೂ ಸಮ್ಮಿಲನ, ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ-ಧರ್ಮಕ್ಕಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರಕಾರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದೆ. ಆದರೂ ಸಂಕಟ ಬಂದಾಗ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆ. ಕರ್ನಾಟಕದಲ್ಲಿರುವ ಮದರಸಾಗಳನ್ನು ನಿಷೇಧಿಸಬೇಕು. ಮದರಸಾಗಳಲ್ಲಿ ಉಗ್ರರ ಉತ್ಪಾದನೆ ಆಗುತ್ತಿದೆ ಎಂದು ಉತ್ತರ ಪ್ರದೇಶ ಶಾಸಕರು ಹಾಗೂ ಗುಪ್ತಚರ ಇಲಾಖೆ ಅ ಧಿಕಾರಿಗಳು ಹೇಳಿದ್ದಾರೆ. “ಹಮ್ ದೋ ಹಮಾರೆ ದೋ’ ಯೋಜನೆಯನ್ನು ನಾವು ಮಾತ್ರ ಯಾಕೆ ಅಳವಡಿಸಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರಕಾರಿ ಸೌಲಭ್ಯ ಕಡಿತಗೊಳಿಸಲಾಗುತ್ತಿದೆ. ಇದನ್ನು ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಇರದಿದ್ದರೆ ಭಾರತೀಯರ ಗತಿ ಏನು ಎಂದು ಅಸಾದುದ್ದೀನ್ ಒವೈಸಿ ಕೇಳುತ್ತಿದ್ದಾನೆ. ಮೋದಿ, ಯೋಗಿಗಿಂತ ಮುಂಚೆ ನೀನು ಜೀವಂತ ಇರುತ್ತಿಯಾ ಎಂದು ಯೋಚನೆ ಮಾಡು ಎಂದು ಠಾಕೂರ್ ಗುಡುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ