ಗ್ರಹಣ ವೇಳೆ ಆಧಾರವಿಲ್ಲದೇ ತಾಮ್ರದ ತಟ್ಟೆ ಮೇಲೆ ನಿಂತ ಒನಕೆ! ಗ್ರಹಣ ಮುಗಿವಾಗ ಬೀಳುತ್ತಂತೆ!
Team Udayavani, Dec 26, 2019, 11:38 AM IST
ಬೆಳಗಾವಿ: ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಅನೇಕ ಪ್ರಯೋಗಗಳು ನಡೆದಿದ್ದು, ಗ್ರಹಣ ಆರಂಭವಾಗುತ್ತಿದ್ದಂತೆ ಗುರುವಾರ ಬೆಳಗ್ಗೆಯಿಂದ ತಾಮ್ರದ ತಟ್ಟೆಯ ಮೇಲೆ ನೀರು ಹಾಕಿ ಒನಕೆ ನಿಲ್ಲಿಸಿರುವುದು ಬಹುತೇಕ ಕಡೆಗೆ ಕಂಡು ಬಂದವು.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಕೈಲಾಸ ನಗರದ ರಸ್ತೆ ಮೇಲೆ ತಾಮ್ರದ ತಟ್ಟೆಯ ಮೇಲೆ ಒನಕೆ ಇಡಲಾಗಿತ್ತು. ಯಾವುದೇ ಆಧಾರವಿಲ್ಲದೇ ಒನಕೆ ನಿಂತಿತ್ತು. ಜತೆಗೆ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿಯೂ ಇದೇ ತರಹದ ಒನಕೆ ನಿಲ್ಲಿಸಲಾಗಿತ್ತು. ಬೈಲಹೊಂಗಲ ತಾಲೂಕಿನ ಮರೆ, ನೇಸರಗಿ, ಬೆಳಗಾಬಿ ತಾಲೂಕಿನ ಮೋದಗಾ, ಹಿರೇಬಾಗೇವಾಡಿ, ಬಸ್ಸಾಪುರ ಹೀಗೆ ಅನೇಕ ಕಡೆಗಳಲ್ಲಿ ಅಂಗಾತವಾಗಿ ಒನಕೆ ನಿಲ್ಲಿಸಲಾಗಿತ್ತು.
ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಒನಕೆ ತಾನಾಗಿಯೇ ಕೆಳಗೆ ಬೀಳುತ್ತದೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ. ಆದರೆ ಗ್ರಹಣ ಮುಗಿದರೂ ಒನಕೆ ಬೀಳದೆ ಇದ್ದುದು, ಜನರ ಮೂಢನಂಬಿಕೆಗೆ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ