ಏಣಗಿ ಬಾಳಪ್ಪನವರಿಗೆ ಅವರೇ ಸಾಟಿ: ಕಾಟ್ಕರ್‌

ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ 8ನೇ ಮುದ್ರಣ ಬಿಡುಗಡೆ

Team Udayavani, May 24, 2022, 12:07 PM IST

10

ಬೆಳಗಾವಿ: ಎಂಟು ದಶಕಗಳವರೆಗೆ ರಂಗಭೂಮಿ ಮೇಲೆ ಮಿಂಚಿದ ಏಣಗಿ ಬಾಳಪ್ಪ ಈ ನಾಡಿನ ಹೆಮ್ಮೆ. ಅವರ ಆತ್ಮಕಥೆ ಇಡೀ ಕರ್ನಾಟಕದ ರಂಗಭೂಮಿಯ ಅಪೂರ್ವ ಕಥೆಯಿದ್ದಂತೆ. ಬಾಳಪ್ಪನವರಿಗೆ ಅವರೇ ಸಾಟಿ ಎಂದು ಸಾಹಿತಿ ಡಾ| ಸರಜೂ ಕಾಟ್ಕರ್‌ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ರಂಗಸಂಪದ ಹಾಗೂ ಚಂದ್ರಕಾಂತ ಕೂಸನೂರು ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ 8ನೇ ಮುದ್ರಣ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಾಳಪ್ಪನವರ ಕಲಾ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರು ಬೇರೆ ಕಂಪನಿಗಳಲ್ಲೂ ನಟಿಸಿದರು, ತಾವೇ ಕಂಪನಿ ಹುಟ್ಟು ಹಾಕಿ ಅದನ್ನೂ ನಡೆಸಿದರು. ತಾವೇ ನಡೆಸುತ್ತಿದ್ದ ನಾಟಕ ಕಂಪನಿ ಉಛ್ರಾಯ ಸ್ಥಿತಿ ತಲುಪಿತ್ತು. ಅಂತೆಯೇ ಕೆಲಕಾಲ ಅವರೂ ಕಷ್ಟದ ದಿನಗಳನ್ನೂ ಕಂಡಿದ್ದರು. ಆದರೆ, ರಂಗಭೂಮಿಯೊಂದಿಗಿನ ನಂಟು ಕಳಚಿಕೊಳ್ಳಲಿಲ್ಲ ರಂಗಭೂಮಿಯಲ್ಲಿ ದೀರ್ಘ‌ ಕಾಲ ಗಟ್ಟಿಯಾಗಿ ಉಳಿದರು. ಅದನ್ನು ಉಳಿಸಿದರು, ಬೆಳೆಸಿದರು ಎಂದರು.

ಏಣಗಿ ಬಾಳಪ್ಪ ಅವರಿಗೆ ಹೆಸರು ತಂದುಕೊಟ್ಟ ನಾಟಕ ಮತ್ತು ಪಾತ್ರ ಬಸವೇಶ್ವರ. ಈ ನಾಟಕ ನಡೆದಾಗ ಒಂದು ಬಾರಿ ಪ್ರಸಿದ್ಧ ಮಠದ ಮಠಾಧೀಶರೊಬ್ಬರು ವೇದಿಕೆ ಏರಿ ಬಸವೇಶ್ವರ ಪಾತ್ರಧಾರಿ ಬಾಳಪ್ಪನವರ ಕಾಲಿಗೆ ಎರಗಿದ ಘಟನೆ ನಡೆಯಿತು. ಅಷ್ಟರಮಟ್ಟಿಗೆ ಬಸವೇಶ್ವರ ಪಾತ್ರ ಮತ್ತು ನಾಟಕ ಖ್ಯಾತಿಗಳಿಸಿತ್ತು ಎಂದ ಅವರು, ಬಾಳಪ್ಪನವರ ನಾಟಕಗಳನ್ನು ಕುಟುಂಬದವರೆಲ್ಲ ಕುಳಿತು ನೋಡಬಹುದಾಗಿತ್ತು ಎಂದು ಸ್ಮರಿಸಿದರು. ಬಾಳಪ್ಪ ಸಮಾಜಮುಖೀಯೂ ಆಗಿದ್ದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ್ದರು. ಕರ್ನಾಟಕ ಏಕೀಕರಣ ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟ್ಟಂತೆ ಜನಜಾಗೃತಿ  ಮೂಡಿಸುವಂತಹ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅವರ ಕುರಿತಾದ ಈ ಕೃತಿ ಕನ್ನಡ, ಇಂಗ್ಲಿಷ್‌ ಮತ್ತು ಮರಾಠಿಯಲ್ಲಿ ಮುದ್ರಣ ಕಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎಸ್‌. ಗವಿಮಠ ಮಾತನಾಡಿ, ಕನ್ನಡ ರಂಗಭೂಮಿಯ ಶತಮಾನದ ಇತಿಹಾಸವೆಂದರೆ ಏಣಗಿ ಬಾಳಪ್ಪ. 1984ರಿಂದ ಅವರೊಂದಿಗೆ ಒಡನಾಟ ಆರಂಭವಾಯಿತು. ರಂಗಭೂಮಿ ಬಗ್ಗೆ ನನಗೆ ಪ್ರೀತಿ ಬೆಳೆಯಿತು. ರಂಗಭೂಮಿಯಲ್ಲಿ ಶಾಸ್ತ್ರೀಯವಾಗಿ ಕಲಿಯಬಯಸುವವರು ನಾಟ್ಯಭೂಷಣ ಕೃತಿಯನ್ನು ಓದಲೇಬೇಕು ಎಂದ ಅವರು, ಸರ್ಕಾರದಿಂದ ಬಾಳಪ್ಪನವರನ್ನು ಗುರುತಿಸುವ ಕೆಲಸ ಇಂದಿಗೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಲೇಖಕಿ ಆಶಾ ಕಡಪಟ್ಟಿ ಮಾತನಾಡಿ, ಸ್ವರಧಾರೆ ಗುಂಪು ಕಟ್ಟಿಕೊಂಡು ಏಣಗಿ ಬಾಳಪ್ಪನವರ ರಂಗಗೀತೆಗಳನ್ನು ನಾವೆಲ್ಲ ಕಲಿತಿದ್ದೇವೆ. ಬಯಲಾಟದಿಂದ ಆರಂಭವಾದ ಅವರ ಕಲಾ ಬದುಕು ರಂಗಭೂಮಿಯಲ್ಲಿ ಉನ್ನತ ಶಿಖರವೇರಿತು. ಅವರು ರಂಗಭೂಮಿ ಉಳಿಸಿ, ಬೆಳೆಸಿದರು. ಅದರ ಗೌರವವನ್ನೂ ಹೆಚ್ಚಿಸಿದರು ಎಂದು ಸ್ಮರಿಸಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ಬಣ್ಣದ ಬದುಕಿನ ಚಿನ್ನದ ದಿನಗಳ ರಚನೆಗೆ 4 ವರ್ಷ ಬೇಕಾಯಿತು. 2007 ರಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಬಿಡುಗಡೆಗೊಂಡ ಕೃತಿ ಒಂದೇ ವರ್ಷದಲ್ಲಿ 6 ಕಡೆ ಬಿಡುಗಡೆ ಕಂಡಿತು ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೊನೊಳ್ಳಿ ಮಾತನಾಡಿ, ಬಾಳಪ್ಪನವರದು ವರ್ಣನಾತೀತ ವ್ಯಕ್ತಿತ್ವ. ಮರಾಠಿ ಪ್ರದೇಶವಾದ ಖಾನಾಪೂರದಲ್ಲಿ ಬಾಳಪ್ಪನವರ ನಾಟಕಗಳು ನಡೆದಾಗಿನ ದಿನಗಳು ಮತ್ತು ಬಾಳಪ್ಪನವರ ಕುಟುಂಬದೊಂದಿಗಿನ ಸೊನಳ್ಳಿ ಕುಟುಂಬದ ಸಂಬಂಧವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಆರ್‌.ಬಿ.ಕಟ್ಟಿ, ಡಾ| ಬಸವರಾಜ ಜಗಜಂಪಿ, ಡಾ| ರಾಮಕೃಷ್ಣ ಮರಾಠೆ, ಡಾ| ಎಚ್‌ .ಬಿ.ರಾಜಶೇಖರ, ಡಾ| ಎಚ್‌.ಬಿ.ಕೋಲಕಾರ, ಡಾ| ಎಸ್‌.ಎಸ್‌.ಅಂಗಡಿ, ಯ.ರು.ಪಾಟೀಲ, ಸುಭಾಸ ಏಣಗಿ, ಮುರುಗೇಶ ಶಿವಪೂಜಿ ಉಪಸ್ಥಿತರಿದ್ದರು. ಬಸವರಾಜ ಗಾರ್ಗಿ ನಿರೂಪಿಸಿದರು. ಹಮೀದಾಬೇಗಂ ದೇಸಾಯಿ ಸ್ವಾಗತಿಸಿದರು. ನೈನಾ ಗಿರಿಗೌಡರ ಪ್ರಾರ್ಥಿಸಿದರು. ಸುನೀತಾ ದೇಸಾಯಿ ವಂದಿಸಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.