ಮಂಜು ಕವಿದ ವಾತಾವರಣವದಲ್ಲಿ ಬಿಎಸ್ ವೈ ವಾಕಿಂಗ್
Team Udayavani, Oct 4, 2019, 8:56 AM IST
ಬೆಳಗಾವಿ: ಪ್ರವಾಹ ಸಂತ್ರಸ್ತರ ಅಳಲು ಕೇಳಲು ಗಡಿ ಜಿಲ್ಲೆಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಚುಮು ಚುಮು ಇಬ್ಬನಿಗಳ ಮಧ್ಯೆ ವಾಯುವಿಹಾರ ನಡೆಸಿದರು.
ಸರ್ಕ್ಯೂಟ್ ಹೌಸ್ ಆವರಣದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ವಾಕಿಂಗ್ ಮಾಡಿದರು. ಬೆಳಗ್ಗೆ ಎದ್ದು ಕೂಡಲೇ ಗ್ರೀನ್ ಟೀ ಕುಡಿದ ಮುಖ್ಯಮಂತ್ರಿಗಳು ಎಲ್ಲಾ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿ ಆವರಣದೊಳಗೆ ಹೋಗಿ ಐದು ಸುತ್ತು ವಾಕಿಂಗ್ ಮಾಡಿದರು. ಸಾಮಾನ್ಯವಾಗಿ ಮುಖ್ಯಮಂತ್ರಿ ಬಿಎಸ್ ವೈ 6 ಗಂಟೆಗೆ ಎದ್ದು ವಾಕಿಂಗ್ ಮಾಡುತ್ತಾರೆ. ಇಂದು ಸ್ವಲ್ಪ ತಡವಾಗಿದ್ದರಿಂದ 7 ಗಂಟೆಗೆ ವಾಯುವಿಹಾರ ನಡೆಸಿದರು.
ಈ ಸಿಎಂ ಜೊತೆ ಮಾಡುವ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಎಂ.ಬಿ. ಜಿರಲಿ, ರಾಜು ಚಿಕ್ಕನಗೌಡರ ಸೇರಿದಂತೆ ಇತರೆ ಮುಖಂಡರು ಇದ್ದರು.