ಶಾಸಕ ಉಮೆಶ್ ಕತ್ತಿ ಸಂತೈಸಲು ಮುಖ್ಯಮಂತ್ರಿ ಬಿ.ಎಸ್.ವೈ. ವಿಫಲ ಪ್ರಯತ್ನ
ಮುನಿಸಿಕೊಂಡಿರುವ ಕತ್ತಿ ಭೇಟಿಗೆ ಅವರದ್ದೇ ಹೊಟೇಲ್ ಗೆ ಹೋಗಿ ಉಪಹಾರ ಸೇವಿಸಿದ ಬಿಎಸ್ ವೈ
Team Udayavani, Oct 15, 2019, 8:01 PM IST
ಬೆಳಗಾವಿ: ಬೆಳಗಾವಿ ಭೇಟಿಗೆಂದು ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೊದಲಿಗೆ ಪಕ್ಷದಲ್ಲಿನ ಅಸಮಧಾನ ಶಮನದ ಕೆಲಸಕ್ಕೆ ಕೈ ಹಾಕಿದ್ದಾರೆ.
ಮುಖ್ಯಮಂತ್ರಿ ಅವರು ಬೆಳಗಾವಿಗೆ ಬರುವುದನ್ನು ತಿಳಿದ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗದೇ ತೆರಳಲು ಯೋಚಿಸಿದರು. ಆದರೆ ಈ ವಿಚಾರ ತಿಳಿದು ತಕ್ಷಣವೇ ಎಚ್ಚೆತ್ತುಕೊಂಡ ಯಡಿಯೂರಪ್ಪ ವಿಮಾನ ನಿಲ್ದಾಣದಿಂದ ತಮ್ಮ ವಾಸ್ತವ್ಯಕ್ಕೆ ನಿಗದಿಯಾಗಿದ್ದ ಸರ್ಕ್ಯೂಟ್ ಹೌಸ್ ಗೆ ತೆರಳದೇ ನೇರವಾಗಿ ಕತ್ತಿ ಮಾಲೀಕತ್ವದ ಹೊಟೇಲ್ ಗೆ ತೆರಳಿದರು. ಅಲ್ಲಿ ಬಿ.ಎಸ್.ವೈ ಅವರು ಉಮೇಶ್ ಕತ್ತಿ ಅವರನ್ನು ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು ಪಕ್ಷದ ಸ್ಥಳೀಯ ನಾಯಕರ ಜೊತೆಯಲ್ಲಿ ಉಪಹಾರ ಸೇವಿಸಿದರು.
ಉಪ್ಪಿಟ್ಟು, ಅವಲಕ್ಕಿ, ಸ್ಯಾಂಡ್ ವಿಚ್, ಚಹಾ ಸೇವಿಸಿದ ಮುಖ್ಯಮಂತ್ರಿಯವರು ಉಮೇಶ ಕತ್ತಿ ಅವರೊಡನೆ ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದರು. ಮುಖ್ಯಮಂತ್ರಿಯವರ ಎದುರಿನಲ್ಲಿ ಯಾವುದೇ ಮುನಿಸನ್ನು ಕತ್ತಿ ಅವರು ತೋರ್ಪಡಿಸಿದರೂ ಅವರಿಗೆ ಒಳಗೊಳಗೆ ಅಸಮಾಧಾನ ಇದ್ದಿದ್ದು ಕಂಡು ಬರುತ್ತಿತ್ತು.
ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ ಮತ್ತು ಇತರರು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಜೊತೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ
HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ
ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ
Nomination: ಏ.18ಕ್ಕೆ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ… ಪ್ರಿಯಂಕಾ ಜಾರಕಿಹೊಳಿ
Belagavi; ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು