ಜನರ ಬಾಯಿ ರುಚಿ ತಣಿಸಿದ ಆಹಾರ ಮೇಳ


Team Udayavani, Jan 30, 2019, 9:37 AM IST

30-january-17.jpg

ಚಿಕ್ಕೋಡಿ: ಅಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳಿದ್ದವು. ಕಂಡಲ್ಲೆಲ್ಲ ಘಮಘಮೀಸುವ ಬಣ್ಣ-ಬಣ್ಣದ ವಿವಿಧ ಪದಾರ್ಥಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. ಒಂದೆಡೆ ಜನರು ಗುಂಪು-ಗುಂಪಾಗಿ ಬಾಯಿ ಚಪ್ಪರಿಸಿಕೊಂಡು ದಪಾಟಿ, ಚುಡಾ, ಸಮೋಸಾ, ಬೋಂಡಾ ತಿನ್ನುತ್ತಿದ್ದರೆ, ಮತ್ತೂಂದೆಡೆ ಬಜ್ಜಿ, ಪಾನಿಪುರಿ, ಶೇಂಗಾ ಹೋಳಿಗೆ, ಅವಲಕ್ಕಿ ತಿನ್ನಲು ಜನ ಮುಗಿಬಿದ್ದಿದ್ದರು.

ಹೌದು, ಇಂಥ ದೃಶ್ಯಗಳು ಕಂಡು ಬಂದಿದ್ದು ಸಾಯಿ ಮಂದಿರದ 12ನೆಯ ವಾರ್ಷಿಕೋತ್ಸವದ ಎರಡನೆ ದಿನ ಮಂಗಳವಾರ ನಡೆದ ಆಹಾರ ಮೇಳದಲ್ಲಿ.

ನಗರದ ಸಾಯಿ ಮಂದಿರದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಪಕ್ಕದ ಲೋಕೋಪಯೋಗಿ ಇಲಾಖೆ ಗಾರ್ಡನ್‌ದಲ್ಲಿ ನಡೆದ ಆಹಾರ ಮೇಳದಲ್ಲಿ ನಗರದ ಮಹಿಳೆಯರು ತಮ್ಮ ಕೈ ರುಚಿ ತೋರಿಸಿದರು. ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ಆಹಾರ ಪ್ರಿಯರ ಬಾಯಲ್ಲಿ ನೀರೂರಿಸಿದರು. ಸುಮಾರು ನೂರಕ್ಕೂ ಹೆಚ್ಚಿನ ಮಹಿಳೆಯರು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು.

ಆಹಾರ ಮೇಳದಲ್ಲಿ ಮಹಿಳೆಯರು ತಯಾರಿಸಿದ್ದ ಮಿಲ್ಕ್ ಶೇಕ್‌, ಢೋಕಳಾ, ಪ್ರೂಟ್ ಕಸ್ಟರ್ಡ್‌, ಹುಬ್ಬಳ್ಳಿ ಗಿರಮಿಟ್, ಅಂಟಿನ ಉಂಡಿ, ಪಾನಿಪುರಿ, ಗೋಬಿಮಂಚೂರಿ, ಮಸಾಲೆ ದೋಸೆ, ಹಣ್ಣಿನ ಸಲಾಡ್‌, ಜ್ಯೂಸ್‌, ಮಜ್ಜಿಗೆ, ಬಜ್ಜಿ, ಬೋಂಡಾ, ವಡಾ-ಪಾವ್‌, ಚುರುಮುರಿ, ಟೋಷ್ಟ, ಸಜ್ಜಿ ರೋಟ್ಟಿ, ಶೇಂಗಾ ಚಟ್ನಿ ಹೀಗೆ ಹತ್ತು ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಿ ನಗರದ ಆಹಾರ ಪ್ರಿಯರ ಬಾಯಿ ರುಚಿ ತಣಿಸಿದರು. ಸಾರ್ವಜನಿಕರು ಕೂಡಾ ಆಹಾರ ಮೇಳದಲ್ಲಿ ಪಾಲ್ಗೊಂಡು ತಿಂಡಿ-ತಿನಿಸುಗಳ ರುಚಿ ನೋಡಿ ಹರ್ಷ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣಾಧಿಕಾರಿ ಎಸ್‌.ಎಲ್‌.ಸವದಿ ಮತ್ತು ವೈದ್ಯ ಡಾ| ಕವಿತಾ ಪಾಟೀಲ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀಣಾ ಕವಟಗಿಮಠ, ಎಸ್‌.ಬಿ. ಮುಲ್ಲಾ, ಗೀತಾ ತಳವಾರ ಮುಂತಾದವರು ಇದ್ದರು.

ನಗರದ ಸಾಯಿ ಮಂದಿರದಲ್ಲಿ ಪ್ರತಿ ವರ್ಷ ಮಹಿಳೆಯರಿಗಾಗಿ ಏರ್ಪಡಿಸಿರುವ ಆಹಾರ ಮೇಳದಲ್ಲಿ ರುಚಿ-ರುಚಿಯಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ವರ್ಷ ಗ್ರಾಮೀಣ ಭಾಗದ ಜನರ ಆಕರ್ಷಣಿಯವಾದ ದಪಾಟಿ, ಮೋಸರು ತಯಾರಿಸಲಾಗಿದೆ. ಈ ಆಹಾರ ಮೇಳ ಆಯೋಜನೆ ಮಾಡುವುದರಿಂದ ಬಗೆ-ಬಗೆಯ ತಿಂಡಿ-ತಿನಿಸು ತಯಾರು ಮಾಡುವುದು ಹೇಗೆ? ಎಂಬುದು ಗೊತ್ತಾಗುತ್ತದೆ. ಇದರಲ್ಲಿ ಪಾಲ್ಗೊಂಡಿರುವುದು ನನಗೆ ಖುಷಿ ತಂದಿದೆ.
• ನಂದಾ ಪೂಜಾರಿ,
ಆಹಾರ ಮೇಳದಲ್ಲಿ ಪಾಲ್ಗೊಂಡ ಮಹಿಳೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.