ಮೋಡ-ಮಳೆ ಕಾಟ; ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ
ತಕ್ಷಣ ಪರೀಕ್ಷಿಸಿ ಸರಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಆಸರೆಯಾಗಬೇಕು.
Team Udayavani, Nov 20, 2021, 4:45 PM IST
ಐಗಳಿ: ಅಥಣಿ ತಾಲೂಕಿನಲ್ಲಿ ದ್ರಾಕ್ಷಿ ಪಡಗಳು ಮೊಗ್ಗು, ಹೂವು ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆಯಿಂದಾಗಿ ದ್ರಾಕ್ಷಿ ಕಾಳುಗಳು ಉದುರುತ್ತಿವೆ. ಅಲ್ಲದೆ ದಾವಣಿ ರೋಗ ಬಂದು ಪಡಗಳೇ ಹಾಳಾಗುತ್ತಿರುವುದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಥಣಿ ತಾಲೂಕಿನ 4500 ಹೆಕ್ಟರ್ ಪ್ರದೇಶದಲ್ಲಿನ ಬಹುತೇಕ ಎಲ್ಲ ಬೆಳೆಗಾರರು ಅಕ್ಟೋಬರ್ ತಿಂಗಳಲ್ಲಿ ಚಾಟ್ನಿ ಮಾಡಿದ್ದು ಈಗ 26 ರಿಂದ 30 ದಿನಗಳಾಗಿವೆ.
ಎಲ್ಲ ಪಡಗಳು ಹೆಚ್ಚಾಗಿ ಹೂವು ಬಿಡುವ ಹಂತದಲ್ಲಿದ್ದು, ಮೋಡ ಮುಸುಕಿದ ವಾತಾವರಣ, ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೊನೆಯಲ್ಲಿ ನೀರು ನಿಂತು ಕಾಳುಗಳು ಉದುರಿ ಕೆಲವು ಪಡಗಳಲ್ಲಿ ಸಂಪೂರ್ಣ ಕಾಳುಗಳು ಖಾಲಿಯಾಗುತ್ತಿವೆ. ತಾಲೂಕಿನ ಬಡಚಿ, ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಅಡಹಳ್ಳಟ್ಟಿ, ಕೋಹಳ್ಳಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಗೆ ರೋಗ ತಗಲಿದೆ.
ಇದು ಬೆಳೆಗಾರರ ನಿದ್ದೆಗೆಡಿಸಿದ್ದು ಇಲಾಖೆ ಸೂಕ್ತ ಸಲಹೆ ಮತ್ತು ಪರಿಹಾರೋಪಾಯ ನೀಡಿ ಬೆಳೆಗಾರರ ಬದುಕಿಗೆ ಆಸರೆಯಾಗಬೇಕು ಎಂದು ಪ್ರಗತಿಪರ ದ್ರಾಕ್ಷಿ ಬೆಳೆಗಾರರಾದ ನೂರಅಹ್ಮದ ಡೊಂಗರಗಾಂವ, ಸಿ ಎಸ್ ನೇಮಗೌಡ, ಜಿ ಎಸ್ ಬಿರಾದಾರ, ಅಪ್ಪಾಸಾಬ ಮಾಕಾಣಿ, ಮೊದಲಾದವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಿರುವುದರಿಂದ ಗೊನೆಗಳಿಗೆ ಬಹುರೋಗ ತಗುಲಿದ್ದು ಕಾಳು ಉದುರುತ್ತಿವೆ. ಇದೇ ವಾತಾವರಣ ಮುಂದುವರೆದಲ್ಲಿ ಫ್ಲಾವರಿಂಗ್ ಹಂತದಲ್ಲಿರುವ ಬಹುತೇಕ ಪಡಗಳು ಗೊನೆ ಕಳೆದುಕೊಳ್ಳಲಿವೆ.
ಅಕ್ಷಯ ಉಪಾಧ್ಯಾಯ,
ತೋಟಗಾರಿಕೆ ಇಲಾಖೆ ಅಧಿಕಾರಿ, ತೆಲಸಂಗ ಹೋಬಳಿ. ಈಗ ಬಹುತೇಕ ದ್ರಾಕ್ಷಿ ಪಡಗಳು ಮಗ್ಗಿ ಮತ್ತು ಹೂವಿನ ಹಂತದಲಿದ್ದು ಪ್ರಸಕ್ತ ಹವಾಮಾನದಿಂದಾಗಿ ಇವುಗಳಿಗೆ ಡೌನಿ ಮತ್ತು ಕೊಳೆ ರೋಗ ಬಂದು ಕಾಳು ಉದರುತ್ತಿವೆ. ಇದರಿಂದ ಎಲ್ಲ ಬೆಳೆಗಾರರು ಸಂಪೂರ್ಣ ಹಾನಿ ಅನುಭವಿಸುತ್ತಿದ್ದು, ಇಲಾಖೆ ಅಧಿಕಾರಿಗಳು ತಕ್ಷಣ ಪರೀಕ್ಷಿಸಿ ಸರಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಆಸರೆಯಾಗಬೇಕು.
ಶಹಜಹಾನ ಡೊಂಗರಗಾಂವ
ಮಾಜಿ ಶಾಸಕರು ಹಾಗು ಪ್ರಗತಿಪರ ದ್ರಾಕ್ಷಿ ಬೆಳೆಗಾರರು, ಅಥಣಿ. ಕಳೆದ ನಾಲ್ಕಾರು ವರ್ಷಗಳ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬಹಳಷ್ಟು ಹಾನಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ವರ್ಷವೂ ಈ ವಾತಾವರಣದಿಂದ ಕಾಳು ಉದರಿ ಹೋಗುತ್ತಿವೆ. ಇಲಾಖೆ ಹಾಗೂ ಸರಕಾರ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗೆ ಬರಬೇಕು.
ಆರ್ ಆರ್ ತೆಲಸಂಗ. ದ್ರಾಕ್ಷಿ ಬೆಳೆಗಾರ, ಐಗಳಿ.
ತಾಲೂಕಿನಲ್ಲಿ ಕಳೆದೆರಡು ದಿನಗಳ ಪ್ರತಿಕೂಲ ಹವಾಮಾನದಿಂದ ದ್ರಾಕ್ಷಿ ಗಿಡದಲ್ಲಿನ ಗೊನೆಗಳಿಗೆ ರೋಗ ಬಾಧೆಯಾಗಿ ಕಾಳು ಉದುರಲು ಪ್ರಾರಂಭವಾಗಿದ್ದು, ಇಂದಿನಿಂದಲೇ ಸರ್ವೇ ಮಾಡಿ ಸಮರ್ಗ ಮಾಹಿತಿಯನ್ನ ತಜ್ಞರಿಗೆ ಮತ್ತು ಇಲಾಖೆ ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ.
ಶ್ವೇತಾ ಹಾಡ್ಕರ, ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ, ಅಥಣಿ.
*ಸುಭಾಸ ಚಮಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ