ತೋಟಗಾರಿಕೆ ಬೆಳೆಗಳಿಗೆ ವಿಮೆ ಯೋಜನೆ
Team Udayavani, Jun 28, 2020, 2:44 PM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾಕ್ಷಿ, ದಾಳಿಂಬೆ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅಥಣಿ ತಾಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಗೋಕಾಕ ತಾಲೂಕಿಗೆ ದ್ರಾಕ್ಷಿ ಹಾಗೂ ಹಸಿಮೆಣಸಿನಕಾಯಿ, ರಾಯಬಾಗ ತಾಲೂಕಿಗೆ ದ್ರಾಕ್ಷಿ ಮತ್ತು ಬೆ„ಲಹೊಂಗಲ, ಚಿಕ್ಕೋಡಿ, ಹುಕ್ಕೇರಿ ಹಾಗೂ ಸವದತ್ತಿ ತಾಲೂಕುಗಳಿಗೆ ಹಸಿಮೆಣಸಿನಕಾಯಿ ಬೆಳೆಗಳಿಗೆ ಜೂನ್ 30 ಬೆಳೆ ವಿಮಾ ಪಾವತಿಸಲು ಕೊನೆಯ ದಿನಾಂಕವಾಗಿದೆ. ಪ್ರತಿ ಹೆಕ್ಟೇರ್ ದ್ರಾಕ್ಷಿ ಬೆಳೆಗೆ 14,000 ರೂ, ದಾಳಿಂಬೆ ಬೆಳೆಗೆ 6,350 ರೂ ಹಾಗೂ ಹಸಿಮೆಣಸಿನಕಾಯಿ ಬೆಳೆಗೆ 3,550 ರೂ ರೈತರ ವಂತಿಕೆಯ ವಿಮಾ ಕಂತು ನಿಗದಿ ಮಾಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಅರಿಷಿಣ, ಆಲೂಗಡ್ಡೆ ( ಮಳೆಯಾಶ್ರಿತ ), ಟೊಮೆಟೋ, ಈರುಳ್ಳಿ ( ನೀರಾವರಿ/ಮಳೆಯಾಶ್ರಿತ ) ಹಾಗೂ ಎಲೆಕೋಸು ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದ್ದು , ಎಲೆಕೋಸು ಬೆಳೆಗೆ ಜು. 15 ಹಾಗೂ ಉಳಿದ ಬೆಳೆಗಳಿಗೆ ಜು.31 ಕೊನೆಯ ದಿನಾಂಕವಾಗಿದೆ. ಪ್ರತಿ ಹೆಕ್ಟೇರ್ ಅರಿಷಿಣ ಬೆಳೆಗೆ 6,650 ರೂ, ಆಲೂಗಡ್ಡೆ ( ಮಳೆಯಾಶ್ರಿತ ) ಬೆಳೆಗೆ 3,500 ರೂ, ಟೊಮ್ಯಾಟೊ ಬೆಳೆಗೆ 5,900 ರೂ, ಈರುಳ್ಳಿ ( ನೀರಾವರಿ ) ಬೆಳೆಗೆ 3,750 ರೂ, ಈರುಳ್ಳಿ ( ಮಳೆಯಾಶ್ರಿತ ) ಬೆಳೆಗೆ 3,500 ರೂ ಹಾಗೂ ಎಲೆಕೋಸು ಬೆಳೆಗೆ 3,150 ರೂದಂತೆ ವಿಮಾ ಕಂತಿನ ಮೊತ್ತ ನಿಗದಿಯಾಗಿದೆ.
ಈ ಯೋಜನೆಗಳಿಗೆ ಗ್ರಾಮ ಪಂಚಾಯತಿ ಅಥವಾ ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಸಂಬಂಧಪಟ್ಟ ತಾಲೂಕು ಮತ್ತು ಹೋಬಳಿಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ವಿಮೆ ಕಂತು ಪಾವತಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ದೂರವಾಣಿ ಸಂಖ್ಯೆ 0831-2431559, ಗೋಕಾಕ ದೂ. ಸಂಖ್ಯೆ 08332-229382, ಖಾನಾಪೂರ ದೂ. ಸಂಖ್ಯೆ 08336-223387, ಸವದತ್ತಿ ದೂ. ಸಂಖ್ಯೆ 08330-222082, ಅಥಣಿ ದೂ. ಸಂಖ್ಯೆ 08289-285099, ರಾಮದುರ್ಗ ದೂ.ಸಂಖ್ಯೆ 08335-241512 , ರಾಯಬಾಗ ದೂ. ಸಂಖ್ಯೆ 08331-225049, ಹುಕ್ಕೇರಿ ದೂ. ಸಂಖ್ಯೆ 08333-265915, ಚಿಕ್ಕೋಡಿ ದೂ. ಸಂಖ್ಯೆ 08338-274943 ಹಾಗೂ ಬೈಲಹೊಂಗಲ 08288-233758ಗೆ ಸಂಪರ್ಕಿಸಲು ತೋಟಗಾರಿಕೆ ಇಲಾಖೆ ಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್ ಚೆಲ್ಲಾಪಿಲ್ಲಿ
MUST WATCH
ಹೊಸ ಸೇರ್ಪಡೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ